ಬೆಂಗಳೂರು : ಉದ್ಯಮಿ ಅರವಿಂದ್ ರೆಡ್ಡಿಗೆ ಪತ್ರದ ಮೂಲಕ ಬೆದರಿಕೆ ಮತ್ತು ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಉದ್ಯಮಿ ಅರವಿಂದ ರೆಡ್ಡಿಗೆ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈಶಾಖ ಎಂಬಾತನನ್ನ ಎಚ್ಎಎಲ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ
ಬ್ಲೂ ಡಾಟ್ ಕೊರಿಯರ್ ಮುಖಾಂತರ ಬೆದರಿಕೆ ಪತ್ರ ಬಂದಿತ್ತು. ಇತ್ತೀಚಿಗೆ ಅರವಿಂದ ರೆಡ್ಡಿ ವಿರುದ್ಧ ಓರ್ವ ನಟಿ ದೂರು ನೀಡಿದ್ದಳು ಇದೇ ಪ್ರಕರಣ ಸಂಬಂಧ ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಬಂದಿದೆ. ಬೆದರಿಕೆ ಪತ್ರ ನೋಡಿ ಅರವಿಂದ್ ರೆಡ್ಡಿ ಎಚ್ಎಎಲ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯ ವೇಳೆ ನಟಿಯ ಗೆಳೆಯ ಈ ಪತ್ರ ಕಳುಹಿಸುವುದು ಎಂಬುದು ಪತ್ತೆಯಾಗಿದೆ.
ಮಹಿಳೆಯ ಜೊತೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಹಾಗೆ ಕ್ಷಮಾಪಣ ಪತ್ರದ ಜೊತೆ ಆರರಿಂದ ಏಳು ಕೋಟಿ ಹಣ ಕಳುಹಿಸು ಇಲ್ಲದಿದ್ದರೆ ಬೇರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದು, ಸದ್ಯ ನಟಿಯ ಸ್ನೇಹಿತ ವೈಶಾಖನನ್ನು ಹೆಚ್ಎಎಲ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.








