Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹಾರಾಷ್ಟ್ರದ ಸ್ವಗ್ರಾಮ ತಲುಪಿದ 6 ಜನರ ಮೃತದೇಹ : ಶೋಕ ಸಾಗರದಲ್ಲಿ ಮುಳುಗಿದ ಇಡೀ ಊರು
KARNATAKA

BREAKING : ಮಹಾರಾಷ್ಟ್ರದ ಸ್ವಗ್ರಾಮ ತಲುಪಿದ 6 ಜನರ ಮೃತದೇಹ : ಶೋಕ ಸಾಗರದಲ್ಲಿ ಮುಳುಗಿದ ಇಡೀ ಊರು

By kannadanewsnow0522/12/2024 8:51 AM

ಬೆಂಗಳೂರು : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೆನರ್ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ IAST ಕಂಪನಿ ಮಾಲೀಕ ಚಂದ್ರಮ್ ಏಗಪ್ಪಗೋಳ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಆರು ಜನರು ಅಪ್ಪಚ್ಚಿಯಾಗಿ ಸಾವನಪ್ಪಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಮೃತಪಟ್ಟ 6 ಜನರ ಮೃತ ದೇಹಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿವೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ಗಳಲ್ಲಿ 6 ಜನರ ಮೃತ ದೇಹ ತಲುಪಿದೆ.ಒಂದೇ ಕುಟುಂಬದ ಆರು ಜನರು ಮೃತ ಪಟ್ಟಿದ್ದಕ್ಕೆ ಇಡೀ ಗ್ರಾಮಸ್ಥರು ಇದೀಗ ಕಣ್ಣೀರಿಟ್ಟಿದ್ದಾರೆ. ಬಡತನದಲ್ಲಿ ಬೆಳೆದು ಚಂದ್ರನ್ ಏಗಪ್ಪಗೋಳ್ ಅತಿ ದೊಡ್ಡ ಸಾಧನೆ ಮಾಡಿದ್ದರು. ತನ್ನ ಗ್ರಾಮದ ನೂರಾರು ಯುವಕರಿಗೆ ಚಂದ್ರಮ್ ಅವರು ಕೆಲಸ ಕೊಟ್ಟಿದ್ದರು. ಐಎಎಸ್‌ಟಿ ಕಂಪನಿಯ ಮಾಲೀಕರಾಗಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಐಎಎಸ್‌ಟಿ ಸಾಫ್ಟ್ವೇರ್ ಕಂಪನಿ ಮಾಲೀಕರಾಗಿದ್ದರು ಇದೀಗ ಸ್ವ ಗ್ರಾಮ ವರದಿಯಲ್ಲಿ ನೀರವ ಮೌನ ಆವರಿಸಿದೆ.

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್​​ಟಿ ಸಾಫ್ಟ್‌ವೇರ್‌ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದರು.ಬೆಂಗಳೂರಿನ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಪಕ್ಕದ ರಸ್ತೆಯಿಂದ ಏಕಾಏಕಿ ಮೇಲೆರಗಿ ಬಂದ ಕಂಟೇನರ್‌ ಚಂದ್ರಮ್ ಕುಟುಂಬ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದ್ದು, ಕಾರಿನಲ್ಲಿದ್ದ 6 ಜೀವಗಳು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿವೆ.

ಐಎಎಸ್​ಟಿ ಸಾಫ್ಟ್​ವೇರ್ ಸಲ್ಯೂಷನ್ಸ್​​ನ ಸಿಇಒ ಆಗಿದ್ದ ಚಂದ್ರಮ್

ಐಎಎಸ್​ಟಿ ಸಾಫ್ಟ್​ವೇರ್ ಸಲ್ಯೂಷನ್ಸ್​​ನ ಸಿಇಒ ಆಗಿದ್ದ ಚಂದ್ರಮ್, ಆಟೋಮೋಟಿವ್, ಎಂಬೆಡೆಡ್ ಸಾಫ್ಟ್​ವೇರ್ ಡೆವಲ್ಪಮೆಂಟ್​ ಕ್ಷೇತ್ರದಲ್ಲಿ 18 ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್​​ನಲ್ಲಿ ಸೂರತ್​ಕಲ್​ನ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದುಕೊಂಡಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದರು. ಹೊಸ ಆಫೀಸ್ ಕೆಲಸವು ನಡೆಯುತ್ತಿತ್ತು. ನಿನ್ನೆ ರಾತ್ರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡಿದ್ದರು. ಕೆಲ ದಿನಗಳು ಬರುವುದಿಲ್ಲ ಎಂದು ಹೇಳಿ ಹೋಗಿದ್ದರು.

2018 ರಲ್ಲಿ ಶುರುವಾಗಿದ್ದ ಐಎಎಸ್ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಚಂದ್ರಮ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಸಿಬ್ಬಂದಿಗಳು ಅರ್ಧಕ್ಕೆ ಕೆಲಸ ನಿಲ್ಲಿಸಿದ್ದಾರೆ. ಲಾಗ್ ಔಟ್ ಮಾಡಿ ಬೇಸರದಿಂದ ಮನೆಗೆ ಹೋಗಿದ್ದಾರೆ.

ಘಟನೆ ಹಿನ್ನೆಲೆ?

ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು, 6 ಜನರು ಮೃತಪಟ್ಟಿದ್ದಾರೆ.ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಅಲ್ಲೇ ಅಪ್ಪಚ್ಚಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಅಲ್ಲೇ ಅಪ್ಪಚ್ಚಿಯಾಗಿದ್ದಾರೆ.

ಈ ಭೀಕರ ಅಪಘಾತ ಅಪಘಾತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗ್ರಾಮ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಸುಮಾರು 1 ಕಿಲೋ ಮೀಟರ್​​ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ.
ಕಾರಿನಲ್ಲಿದ್ದ ಮಕ್ಕಳ ಪುಸ್ತಕಗಳು ಸಿಕ್ಕಿದ್ದು, ದೀಕ್ಷಾ ಎಂಬ ವಿದ್ಯಾರ್ಥಿನಿಯ ಹೆಸರು ಇರುವ ಪುಸ್ತಕ ಪತ್ತೆಯಾಗಿದೆ. IAST ಕಂಪನಿ ಮಾಲೀಕನಾಗಿದ್ದ ಚಂದ್ರಮ್​ ಯೇಗಪ್ಪಗೋಳ್​ ಎಂದು ಗುರುತಿಸಲಾಗಿದೆ. ಇನ್ನು ಇಡಿ ಕುಟುಂಬವೇ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

KA 01 ND 1536 ವೋಲ್ವೋ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರ ಗುರುತು ಪತ್ತೆ ಮಾಡಲಾಗಿದೆ. ಪತಿ ಚಂದ್ರಮ್​ ಏಗಪ್ಪಗೋಳ್(46), ಪತ್ನಿ ಧೋರಾಬಾಯಿ(40), ಪುತ್ರ ಗ್ಯಾನ್‌(16), ಪುತ್ರಿಯರಾದ ದೀಕ್ಷಾ(10), ಆರ್ಯ(6) ಚಂದ್ರಮ್​ ಏಗಪ್ಪಗೋಳ್ ಸಹೋದರನ ಪತ್ನಿ ವಿಜಯಲಕ್ಷ್ಮೀ(35) ಮೃತ ದುರ್ವೈವಿಗಳು ಎಂದು ತಿಳಿದುಬಂದಿದೆ. ಇದೀಗ ಬರ್ತಾರೆ ಹುಟ್ಟೂರಿನಲ್ಲಿ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share. Facebook Twitter LinkedIn WhatsApp Email

Related Posts

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM2 Mins Read

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM1 Min Read

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM1 Min Read
Recent News

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಸಾಕು, ನಿಮ್ಮ ಮುಖ ಕನ್ನಡಿಯಂತೆ ಹೊಳೆಯುತ್ತೆ!

13/02/2026 9:58 PM
State News
KARNATAKA

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0913/02/2026 10:43 PM KARNATAKA 2 Mins Read

ಮಂಡ್ಯ : ಶಿಂಷಾ ಎಡ ದಂಡೆ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಆಧುನಿಕರಣಕ್ಕೆ 127 ಕೋಟಿ ರೂ ಅನುದಾನ ಬಿಡುಗಡೆ…

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM

ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ: ಸಿಎಂ ಸಿದ್ಧರಾಮಯ್ಯ

13/02/2026 9:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.