Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಂಗ್ಲಾದೇಶ ವಿಮಾನ ಅಪಘಾತ : ಸಂತ್ರಸ್ತರ ಚಿಕಿತ್ಸೆಗಾಗಿ ವೈದ್ಯಕೀಯ ತಂಡವನ್ನು ಕಳುಹಿಸಿದ ಭಾರತ

26/07/2025 6:51 AM

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

26/07/2025 6:46 AM

ಕಪ್ಪು ಮೈಬಣ್ಣದ ಬಗ್ಗೆ ನಿಂದನೆ, ಅಡುಗೆ ಕೌಶಲ್ಯವನ್ನು ಟೀಕಿಸುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

26/07/2025 6:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರೇವಣ್ಣ ವಿರುದ್ಧ ಕಿಡ್ನಾಪ್ ಕೇಸಿಗೆ ಬಿಗ್ ಟ್ವಿಸ್ಟ್ : ನಾಪತ್ತೆಯಾಗಿದ್ದ ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ
KARNATAKA

BREAKING : ರೇವಣ್ಣ ವಿರುದ್ಧ ಕಿಡ್ನಾಪ್ ಕೇಸಿಗೆ ಬಿಗ್ ಟ್ವಿಸ್ಟ್ : ನಾಪತ್ತೆಯಾಗಿದ್ದ ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ

By kannadanewsnow0512/05/2024 7:03 PM

ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎಚ್ ಡಿ ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪಹರಣಕ್ಕೆ ಒಳಗಾದ ಸಂತ್ರಸ್ತ ಮಹಿಳೆ ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿದ್ದು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಹೌದು ಅಪಹರಣಕ್ಕೆ ಒಳಗಾದ ಮಹಿಳೆ ಇದೀಗ ಸುಮಾರು 2 ನಿಮಿಷ 35 ಸೆಕೆಂಡುಗಳನ್ನು ಒಳಗೊಂಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದೂ, ವಿಡಿಯೋದಲ್ಲಿ ನನ್ನನ್ನು ಯಾರು ಕಿಡ್ನ್ಯಾಪ್ ಮಾಡಿಲ್ಲ. ನಾನಾಗಿಯೇ ಮನೆಯಿಂದ ಬಂದಿದ್ದೇನೆ.ಭವಾನಿ, ಎಚ್ ಡಿ ರೇವಣ್ಣ, ಪ್ರಜ್ವಲ್ M ಹಾಗೂ ಬಾಬಣ್ಣರಿಂದ ಯಾವುದೇ ರೀತಿಯಾಗಿ ತೊಂದರೆ ಆಗಿಲ್ಲ.

ನಮ್ಮ ಊರಿನವರು ಏನೇನು ಮಾತನಾಡಿದ್ದನು ಕೇಳಿ ಬೇಸರವಾಗಿತ್ತು ಹೀಗಾಗಿ ನಾಲ್ಕು ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ ಎರಡು ದಿನಗಳ ಬಳಿಕ ನಾನೇ ಬರುತ್ತೇನೆ.ನನ್ನ ಮಗ ಗೊತ್ತಿಲ್ಲದೆ ಗಾಬರಿಯಿಂದಾಗಿ ಹೀಗೆ ಮಾಡಿದ್ದಾನೆ. ನಾಲ್ಕು ಜನ ಕಾಲ ಕಳೆದು ಬರಲು ನಾನೇ ನೆಂಟರ ಮೆನೆಗೆ ಬಂದಿದ್ದೇನೆ.ಟಿವಿ ನೋಡಿದಾಗ ಈ ರೀತಿ ಮಾಡಿದ್ದಾರೆಂದು ನನಗೆ ಗೊತ್ತಾಯಿತು ಎಂದು ಸಂತ್ರಸ್ತೆ ಮಹಿಳೆ ಇದೀಗ ವಿಡಿಯೋದಲ್ಲಿ ತಿಳಿಸಿದ್ದಾಳೆ. ಎಂದು ವಿಡಿಯೋದಲ್ಲಿ ಮಹಿಳೆ ತಿಳಿಸಿದ್ದಾಳೆ.

ಹೌದು ಶಾಸಕ ರೇವಣ್ಣ ಅವರು ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಮಹಿಳೆಯ ಮಗ ಇತ್ತೀಚಿಗೆ ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನು. ಯುವಕನ ದೂರಿನ ಮೇರೆಗೆ ಕೆಆರ್ ನಗರದಲ್ಲಿ ಎಚ್ ಡಿ ರೇವಣ್ಣ ಹಾಗೂ ಅವರ ಸಂಬಂಧಿ ಸತೀಶ್ ಬಾಬು ಎನ್ನುವ ವಿರುದ್ಧ FIR ದಾಖಲಾಗಿತ್ತು.

ಅದರಂತೆ ಎಸ್ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಮಗ ನೀಡಿದ ದೂರಿನ ಆಧಾರದ ಮೇಲೆ ಎಚ್ಡಿ ರೇವಣ್ಣ ಅವರನ್ನು ಕಳೆದ ಕೆಲವು ದಿನಗಳ ಹಿಂದೆ ಬಂಧಿಸಿದ್ದರು ಇದಾದ ನಂತರ ಎಚ್‌ಡಿ ರೇವಣ್ಣ ಅವರು ಎರಡು ಬಾರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆದರೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೇ 14ರ ಅವಧಿಯವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಇತ್ತೀಚಿಗೆ ಆದೇಶ ಹೊರಡಿಸಿತ್ತು.ಇದೀಗ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಕರಣಕ್ಕೆ ಸ್ಫೋಟಕ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

26/07/2025 6:46 AM3 Mins Read

Rain Alert : ರಾಜ್ಯಾದ್ಯಂತ ಮುಂದುವರೆದ `ಮಳೆ’ಯ ಅಬ್ಬರ : ಕರಾವಳಿಗೆ `ರೆಡ್ ಅಲರ್ಟ್’ ಘೋಷಣೆ

26/07/2025 6:39 AM2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸರ್ಕಾರದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/07/2025 6:26 AM1 Min Read
Recent News

ಬಾಂಗ್ಲಾದೇಶ ವಿಮಾನ ಅಪಘಾತ : ಸಂತ್ರಸ್ತರ ಚಿಕಿತ್ಸೆಗಾಗಿ ವೈದ್ಯಕೀಯ ತಂಡವನ್ನು ಕಳುಹಿಸಿದ ಭಾರತ

26/07/2025 6:51 AM

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

26/07/2025 6:46 AM

ಕಪ್ಪು ಮೈಬಣ್ಣದ ಬಗ್ಗೆ ನಿಂದನೆ, ಅಡುಗೆ ಕೌಶಲ್ಯವನ್ನು ಟೀಕಿಸುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

26/07/2025 6:42 AM

BIG NEWS : ‘ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ, ಸಮಾಜವಾದಿಯನ್ನು ಕೈಬಿಡುವ ಯಾವುದೇ ಕ್ರಮವಿಲ್ಲ’: ಕೇಂದ್ರ ಸರ್ಕಾರ ಸ್ಪಷ್ಟನೆ

26/07/2025 6:42 AM
State News
KARNATAKA

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

By kannadanewsnow5726/07/2025 6:46 AM KARNATAKA 3 Mins Read

ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ…

Rain Alert : ರಾಜ್ಯಾದ್ಯಂತ ಮುಂದುವರೆದ `ಮಳೆ’ಯ ಅಬ್ಬರ : ಕರಾವಳಿಗೆ `ರೆಡ್ ಅಲರ್ಟ್’ ಘೋಷಣೆ

26/07/2025 6:39 AM

ರಾಜ್ಯದ ಜನತೆಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸರ್ಕಾರದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/07/2025 6:26 AM

ರಾಜ್ಯದ `ಡಿಪ್ಲೋಮಾ, ಪದವೀಧರೇ’ ಗಮನಿಸಿ : `ಯುವನಿಧಿ ಯೋಜನೆ’ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

26/07/2025 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.