Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ

10/02/2026 6:20 AM

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

10/02/2026 6:18 AM

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 6:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ ಹೇರ್ ಡ್ರೈಯರ್’ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಲವ್ ಗೆ ಅಡ್ಡಿಯಾಗಿದ್ದಾಳೆಂದು ಕೊಲೆಗೆ ಯತ್ನಿಸಿದ ಪ್ರಿಯಕರ!
KARNATAKA

BREAKING : ‘ ಹೇರ್ ಡ್ರೈಯರ್’ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಲವ್ ಗೆ ಅಡ್ಡಿಯಾಗಿದ್ದಾಳೆಂದು ಕೊಲೆಗೆ ಯತ್ನಿಸಿದ ಪ್ರಿಯಕರ!

By kannadanewsnow0522/11/2024 5:22 PM

ಬಾಗಲಕೋಟೆ : ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರ ಛಿದ್ರವಾಗಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದಿತ್ತು. ಇದೀಗ ಈ ಒಂದು ಸ್ಫೋಟದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗಾಯಗೊಂಡ ಮಹಿಳೆಯ ಪ್ರಿಯಕರ ತನ್ನ ಪ್ರೀತಿಗೆ ಅಡ್ಡಿಯಾಗಿದ್ದಾಳೆಂದು ಆಕೆಯ ಸ್ನೇಹಿತೆಯ ಕೊಲೆಗೆ ಹಾಕಿದ್ದ ಎನ್ನಲಾಗಿದೆ.

ಹೌದು ಹೇರ್ ಡ್ರೈಯರ್ ಸ್ಪೋಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಗೆ ಅಡ್ಡ ಬಂದವಳ ಕೊಲೆಗೆ ಆರೋಪಿ ಸಿದ್ದಪ್ಪ ಎನ್ನುವವ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಆದರೆ ಆರೋಪಿಯು ತಾನು ಮಾಡಿದ್ದ ಪ್ಲಾನಿಗೆ ತನ್ನ ಪ್ರಿಯತಮೆನೆ ಬಲಿಯಾಗಿದ್ದಾಳೆ. ನವೆಂಬರ್ 20ರಂದು ಈ ಒಂದು ಹೇರ್ ಡ್ರೈಯರ್ ಸ್ಪೋಟ ಪ್ರಕರಣ ನಡೆದಿತ್ತು. ಇಳಕಲ್ ಠಾಣೆ ಪೋಲಿಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.

ಆರೋಪಿ ಸಿದ್ದಪ್ಪ ಶೀಲವಂತರನಿಂದ ಶಶಿಕಲಾ ಎನ್ನುವ ಮಹಿಳೆಯ ಕೊಲೆಗೆ ಸ್ಕೆಚ್ ಹಾಕಿದ್ದ. ಆರೋಪಿ ಸಿದ್ದಪ್ಪನ ಪ್ರೀತಿಗೆ ಶಶಿಕಲಾ ಹಡಪದ ಅಡ್ಡ ಬಂದಿದ್ದಳು. ಮೃತ ಯೋಧನ ಪತ್ನಿ ಬಸವರಾಜೇಶ್ವರಿಳನ್ನು ಸಿದ್ದಪ್ಪ ಪ್ರೀತಿಸುತ್ತಿದ್ದ. ಈ ವೇಳೆ ಸಿದ್ದಪ್ಪನ ಸಹವಾಸ ಬಿಡು ಎಂದು ಶಶಿಕಲಾ ಬಸವರಾಜೇಶ್ವರಿಗೆ ಆಗಾಗ ಬುದ್ಧಿವಾದ ಹೇಳುತ್ತಿದ್ದಳು.

ಇದೇ ಕಾರಣಕ್ಕೆ ಶಶಿಕಲಾ ಹಡಪದ ಕೊಲೆಗೆ ಸಿದ್ದಪ್ಪ ಸಂಚು ರೂಪಿಸಿದ್ದ ಎನ್ನಲಾಗಿದೆ. ಸಿದ್ದಪ್ಪ ಹೇರ್ ಡ್ರೈಯರ್ ನಲ್ಲಿ ಡಿಟೋನೇಟರ್ ಸ್ಫೋಟಕವನ್ನು ಅಳವಡಿಸಿದ್ದ. ಬಾಗಲಕೋಟೆಯಿಂದ ಶಶಿಕಲಾ ಹೆಸರು ಹಾಕಿ ಕೊರಿಯರ್ ಕಳುಹಿಸಿದ್ದ. ಈ ವೇಳೆ ಬಸವರಾಜೇಶ್ವರಿ ಈ ಒಂದು ಕೊರಿಯರನ್ನು ಪಡೆದು ಓಪನ್ ಮಾಡಿ ಸ್ವಿಚ್ ಹಾಕಿದ ಕೂಡಲೇ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ.

ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ಆಕೆಯ ಕೈಗಳ ಬೆರಳುಗಳು ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬಳಿಕ ಮಾಧ್ಯಮದವರು ಆಕೆಯನ್ನು ಮಾತನಾಡಿಸಿದಾಗ ಶಶಿಕಲಾನೇ ಈ ಒಂದು ಹೇರ್ ಡ್ರೈಯರ್ ಆರ್ಡರ್ ಮಾಡಿದ್ದಳು. ತಾನು ಊರಿಗೆ ಬಂದಿದ್ದೇನೆ ನೀನು ತೆಗೆದುಕೋ ಎಂದು ತಿಳಿಸಿದ್ದಳು ಎಂದು ಬಸವರಾಜೇಶ್ವರಿ ಕೂಡ ಸುಳ್ಳು ಹೇಳಿದ್ದಾಳೆ.

ಆದರೆ ಶಶಿಕಲಾ ನಾನು ಯಾವುದೇ ಹೇರ್ ಡ್ರೈಯರ್ ಆನ್ಲೈನ್ ನಲ್ಲಿ ಆರ್ಡರ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಳಕಲ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಾಗ ಶಶಿಕಲಾ ಹಡಪದ ಅವರ ಕೊಲೆಗೆ ಸಿದ್ದಪ್ಪ ಎನ್ನುವ ವ್ಯಕ್ತಿ ಹಾಕಿದ್ದ ಎನ್ನುವುದು ಬಯಲಾಗಿದೆ. ಇದೀಗ ಇಳಕಲ್ ಠಾಣೆ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ

10/02/2026 6:20 AM2 Mins Read

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

10/02/2026 6:18 AM3 Mins Read

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 6:17 AM3 Mins Read
Recent News

ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ

10/02/2026 6:20 AM

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

10/02/2026 6:18 AM

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 6:17 AM

ಗಮನಿಸಿ : ಪೋಷಕರು `ವಿಲ್’ ಬರೆಯದೆ ಮರಣಹೊಂದಿದಾಗ `ಆಸ್ತಿ’ ಯಾರಿಗೆ ಸಿಗುತ್ತದೆ? ಇಲ್ಲಿದೆ ಮಾಹಿತಿ

10/02/2026 6:15 AM
State News
KARNATAKA

ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ

By kannadanewsnow5710/02/2026 6:20 AM KARNATAKA 2 Mins Read

ಬೆಂಗಳೂರು: ಮಾಸಿಕ ವೇತನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು 65 ವರ್ಷ ವಯೋಮಾನವನ್ನು ಪೂರೈಸಿ ಕರ್ತವ್ಯದಿಂದ ಬಿಡುಗಡೆ ಹೊಂದಿದವರಿಗೆ/ಸೇವೆಯಲ್ಲಿರುವಾಗಲೇ ಮೃತರಾದಲ್ಲಿ, ಗರಿಷ್ಠ…

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

10/02/2026 6:18 AM

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 6:17 AM

ಗಮನಿಸಿ : ಪೋಷಕರು `ವಿಲ್’ ಬರೆಯದೆ ಮರಣಹೊಂದಿದಾಗ `ಆಸ್ತಿ’ ಯಾರಿಗೆ ಸಿಗುತ್ತದೆ? ಇಲ್ಲಿದೆ ಮಾಹಿತಿ

10/02/2026 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.