ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅನಾಮಿಕ ಶವ ಹೂತಿದ್ದನ್ನು ನೋಡಿದಾಗ ಮತ್ತೆ ಇಬ್ಬರಿಂದ ಎಸ್ಐಟಿಗೆ ದೂರು ಸಲ್ಲಿಕೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಎಸ್ಐಟಿ ಕಚೇರಿಗೆ ಇದೀಗ ಅನಾಮಿಕ ಶವ ಹೂತಿದ್ದನ್ನು ನೋಡಿರುವುದಾಗಿ ಮತ್ತಿಬ್ಬರು ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿ ಧರ್ಮಸ್ಥಳ ನೀಡಲು ಅಧಿಕಾರಿಗಳು ಇಬ್ಬರಿಗೂ ಸೂಚನೆ ನೀಡಿದ್ದಾರೆ. ಎಸ್ ಐ ಟಿ ಅಧಿಕಾರಿಗಳ ಸೂಚನೆಯ ಮೇರೆಗೆ ಧರ್ಮಸ್ಥಳ ಠಾಣೆಗೆ ದೂರು ಸಲ್ಲಿಸಲಾಗಿದೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ವ್ಯಕ್ತಿಯನ್ನು ನಾವು ಗುರುತಿಸಿರುತ್ತೇವೆ. ಧರ್ಮಸ್ಥಳದ ವಿವಿಧಡೆ ಅಪರಿಚಿತ ಶವವುದಿರುವುದನ್ನು ನೋಡಿರುತ್ತೇವೆ. ಸರ್ಕಾರ ಸ್ಥಾಪಿಸಿರುವ ಎಸ್ಐಟಿಗೆ ಸಹಕರಿಸಲು ನಾವು ನಿರ್ಧರಿಸಿದ್ದೇವೆ.
ದೂರುದಾರ ತೋರಿಸುತ್ತಿರುವ ಸ್ಥಳಗಳಲ್ಲಿ ಕಳೆಬರಹ ಹೊರ ತೆಗೆಯಲು ಶೋಧ ಕಾರ್ಯಾಚರಣೆಯಲ್ಲಿ ನಮ್ಮನ್ನು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ರಹಸ್ಯವಾಗಿ ಶವ ಹೂತಿದ್ದನ್ನು ಸ್ಥಳಗಳು ತೋರಿಸಲು ನಮಗೆ ಅವಕಾಶ ನೀಡಿ ವಿಶೇಷ ತಂಡಕ್ಕೆ ಮತ್ತಿಬ್ಬರು ಸಾಕ್ಷಿದಾರರು ದೂರು ನೀಡಿದ್ದಾರೆ. ಈ ವೇಳೆ ಎಸ್ಐಟಿ ಅಧಿಕಾರಿಗಳು ಇಬ್ಬರ ದೂರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ.