ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ ಚನ್ನಪಟ್ಟಣ ಉಪ ಚುನಾವಣೆಯು ಇದೀಗ ರೋಚಕ ಟ್ವಿಸ್ಟ್ ಗೆ ಕಾರಣವಾಗಿದೆ. ಒಂದು ಕಡೆ ಸಿಪಿ ಯೋಗೇಶ್ವರ್ ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಡಿಕೆ ಬ್ರದರ್ಸ್ ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಕರೆತಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಈ ಕುರಿತಂತೆ ಹಲವು ಸುದ್ದಿಗಳು ಹರಿದಾಡುತ್ತಿದ್ದು, ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ ಅವರಿಗೆ ಕಾಂಗ್ರೆಸ್ಸಿನ ಬಾಗಿಲು ತೆರೆದಿದೆಯಾ ಎಂಬ ಸುದ್ದಿ ಹರಿದಾಡುತ್ತಿವೆ. ಸಿಪಿವೈ ಅವರನ್ನು ಕಾಂಗ್ರೆಸ್ ಗೆ ಕರೆತರಲು ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಸಚಿವರು ಈಗಾಗಲೇ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಸಹೋದರರಿಗೆ ಆಪ್ತರಾದ ಇಬ್ಬರು ಶಾಸಕರ ಮೂಲಕ ಸಿಪಿ ಯೋಗೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ರಾತ್ರಿ ಒಳಗೆ ಒಂದಿಷ್ಟು ತ್ವರಿತಗತಿಯ ಬೆಳವಣಿಗೆ ಸಾಧ್ಯತೆ ಇದ್ದು, ಇದುವರೆಗೆ ಸ್ಪರ್ಧೆ ಮಾಡುವುದನ್ನೇ ಅಂತಿಮ ಗೊಳಿಸಿದ ಡಿಕೆ ಸುರೇಶ್ ಆಪ್ತರಿಗೂ ಈ ವಿಚಾರದಲ್ಲಿ ಗುಟ್ಟು ಬಿಟ್ಟು ಕೊಡದ ಡಿ ಡಿಕೆ ಬ್ರದರ್ಸ್. ಬಹಳ ಕೂತುಹಲ ಮೂಡಿಸುವ ಕಾಂಗ್ರೆಸ್ ನಾಯಕರ ನಡೆ.ಸಿಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಬಂದರೆ ಜೆಡಿಎಸ್ ಸೋಲಿಸಬಹುದು ಎಂದಿರುವ ಸಚಿವರು ಸಚಿವರ ಅಭಿಪ್ರಾಯ ಪಡೆದು ಡಿಕೆ ಸಹೋದರರಿಗೆ ಜವಾಬ್ದಾರಿ ನೀಡಲಾಗಿದೆ.