ಬೆಂಗಳೂರು : ಶಾಸಕ ಮುನಿರತ್ನ ಹಾಗೂ ಬೆಂಬಲಿಗರಿಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ಕೋರಿ, ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆಯ ಬಳಿಕ ಮುನಿರತ್ನ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಜನಪ್ರತಿನಿಧಿಗಳು ನ್ಯಾಯಾಲಯ ಆದೇಶ ಹೊರಡಿಸಿದೆ.
ಅರ್ಜಿಗೆ ಸಂತ್ರಸ್ತೆಯ ಪರ ಹಿರಿಯ ವಕೀಲ ಹನುಮಂತರಾಯ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ವಾದಮಂಡನೆಗೆ ಕಾಲಾವಕಾಶ ನೀಡಬೇಕು ಎಂದು ಎಸ್ಪಿಪಿ ಕೋರಿದ್ದಾರೆ.ಪ್ರಕರಣದ ಇತರೆ ಆರೋಪಿಗಳು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಬಲವಂತದ ಕ್ರಮ ಕೈಗೊಳ್ಳಲ್ಲವೆಂದು ಎಸ್ ಎಸ್ ಪಿ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಮುನಿರತರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಇತರೆ ಆರೋಪಿಗಳಿಗೆ ನೀಡಿರುವ ರಕ್ಷಣೆ ಮುನಿರತ್ನವು ಅನ್ವಯಿಸಬೇಕು ಎಂದು ಮುನಿರತ್ನ ಪರ ವಕೀಲರಿಂದ ಕೋರ್ಟಿಗೆ ಮನವಿ ಮಾಡಲಾಯಿತು. ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ ಹೊರಡಿಸಿತು. ಬಳಿಕ ಜೂನ್ 2ರಂದು ವಿಚಾರಣೆ ನಿಗದಿಪಡಿಸಿತು.