ಮುಂಬೈ : ತಡರಾತ್ರಿ ನಿಧನರಾಗಿರುವ ರತನ್ ಟಾಟಾ ಅವರಿಗೆ ಮರಣೋತ್ತರವಾಗಿ `ಭಾರತ ರತ್ನ’ ನೀಡುವ ಕುರಿತು ಮಹಾರಾಷ್ಟ್ರ ಸಚಿವ ಸಂಪುಟ ಇಂದು ನಿರ್ಣಯವನ್ನು ಅಂಗೀಕರಿಸಿದೆ. ರತನ್ ಟಾಟಾ ಅವರಿಗೆ ಭಾರತ ರತ್ನ ನೀಡುವ ಕುರಿತು ಮಹಾರಾಷ್ಟ್ರ ಸಚಿವ ಸಂಪುಟ ಇಂದು ನಿರ್ಣಯವನ್ನು ಅಂಗೀಕರಿಸಿದೆ.
ಮಹಾರಾಷ್ಟ್ರ ಸಚಿವ ಸಂಪುಟದಲ್ಲಿಯೂ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಶಿಂಧೆ ಗುಂಪಿನ ನಾಯಕ ರಾಹುಲ್ ಕನಾಲ್ ಈ ಕುರಿತು ಆಗ್ರಹಿಸಿದ್ದರು. ರಾಹುಲ್ ಕನಾಲ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದಿದ್ದರು. ಇದರಲ್ಲಿ ಮಹಾರಾಷ್ಟ್ರ ಸರ್ಕಾರ ಭಾರತ ರತ್ನಕ್ಕೆ ರತನ್ ಟಾಟಾ ಅವರ ಹೆಸರನ್ನು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದರು. ಇದೇ ಅವರಿಗೆ ನಿಜವಾದ ಶ್ರದ್ಧಾಂಜಲಿಯಾಗುತ್ತದೆ ಎಂದು ಹೇಳಿದ್ದರು.
In today’s meeting, the Maharashtra Cabinet has decided to propose industrialist Ratan Tata's name for the Bharat Ratna award. A condolence proposal was also passed by Maharashtra Cabinet today. pic.twitter.com/RVKFD4SIjq
— ANI (@ANI) October 10, 2024
ಇದೀಗ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡುವ ಕುರಿತು ಮಹಾರಾಷ್ಟ್ರ ಸಚಿವ ಸಂಪುಟ ಇಂದು ನಿರ್ಣಯವನ್ನು ಅಂಗೀಕರಿಸಿದೆ.