ಬೆಂಗಳೂರು : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಮಾಡಿದ್ದರಿಂದ ಮಗು ಸಾವನಪ್ಪಿದೆ. ಬೆಂಗಳೂರಿನ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ಸಂಗೀತಂ ಜೋಸ್ನಾ ಹಾಗು ಸುನೀಲ್ ದಂಪತಿಗಳ ಮಗು ಇದೀಗ ಸಾವನಪ್ಪಿದೆ.
ಬೆಂಗಳೂರಿನ ಕಮಲಾನಗರದ ನಿವಾಸಿಯಾಗಿರುವ ಸಂಗೀತಂ ಮತ್ತು ಸುನಿಲ್ ಹೆರಿಗೆ ವಿಳಂಬ ಮಾಡಿಸಿದಕ್ಕೆ ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ಹೆರಿಗೆ ನೋವು ಹಿನ್ನೆಲೆ, ಆಸ್ಪತ್ರೆಗೆ ಕರೆತಂದಿದ್ದರು ಸೋಮವಾರ ನೋವು ಕಂಡು ಬಂದರೂ ಕೂಡ ಹೆರಿಗೆ ಮಾಡಿಸಿಲ್ಲ. ನೋವು ಬಂದು ವಿಪರೀತ ವಾಟರ್ ಡಿಸ್ಚಾರ್ಜ್ ಆಗಿದೆ ಡೆಲಿವರಿ ಮಾಡಿಸಿ ಅಂತ ಹೇಳಿದರು ಕೂಡ ಹೆರಿಗೆ ಮಾಡಿಸಿಲ್ಲ.
ಮಂಗಳವಾರ ಬೆಳಿಗ್ಗೆ ಮಾಡಿದ್ದಾರೆ. ಮಗು ಸ್ಯಾನಿಟರಿ ನೀರು ಕುಡಿದಿದೆ ಅಂತ ಐಸಿಯುನಲ್ಲಿ ಇಟ್ಟಿದ್ದಾರೆ. ಆದರೆ ಇವತ್ತು ಮಗು ಮೃತಪಟ್ಟಿದೆ. ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿ ಯಾವ ಡಾಕ್ಟರ್ ಸಹ ಇರಲಿಲ್ಲ ಎಂದು ಸಂಬಂಧಿಕರು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.