ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ್ದು, ಹುಡುಗಿ ಮನೆ ಕಡೆಯವರಿಂದ ನವ ಜೋಡಿ ಅಪಹರಣಕ್ಕೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಬಳಿ ನಿನ್ನೆ ರಾತ್ರಿ ಈ ಒಂದು ಘಟನೆ ನಡೆದಿದೆ.
ನವಜೋಡಿ ಸಂಜಯ್ ಮತ್ತು ದಿವ್ಯ ಅಪಹಾರಣಕ್ಕೆ ಯತ್ನಿಸಲಾಗಿದೆ. ಅಳಿ ಬೊಮ್ಮಸಂದ್ರ ವಾಸಿ ಶೋಭಾ ಮತ್ತು ಗ್ಯಾಂಗ್ನಿಂದ ಕಿಡ್ನಾಪ್ ಗೆ ಯತ್ನಿಸಲಾಗಿದ್ದು, 8 ವರ್ಷದಿಂದ ಗುಡ್ಡಹಟ್ಟಿ ನಿವಾಸಿ ಸಂಜಯ್ ಮತ್ತು ದಿವ್ಯ ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಹುಡುಗಿಯ ಪೋಷಕರು ವಿರೋಧ ಮಾಡಿದ್ದರು. ವಿರೋಧದ ನಡುವೆ 15 ದಿನಗಳ ಹಿಂದೆ ಮದುವೆಯಾಗಿದ್ದರು.
ಆದರೆ ನೆನ್ನೆ ತಂದೆಗೆ ಹುಷಾರಿಲ್ಲ ಎಂದು ಮಗಳ ಬಳಿ ತಾಯಿ ತೆರಳಿದ್ದಾಳೆ.ಜಯದೇವ ಆಸ್ಪತ್ರೆಗೆ ಬರುವಂತೆ ದಿವ್ಯ ತಾಯಿ ಹೇಳಿದ್ದಾಳೆ ಈ ವೇಳೆ ತಾಯಿಯ ಜೊತೆಗೆ ತೆರಳದೆ ಪತಿಯ ಬೈಕಿನಲ್ಲಿ ದಿವ್ಯ ತೆರಳಿದ್ದಾಳೆ ಎರಡು ಕಾರುಗಳಲ್ಲಿ ಬೈಕ್ ಚೇಸ್ ಮಾಡಿ ಅಪಹರಣಕ್ಕೆ ಯತ್ನಿಸಲಾಗಿದೆ. ಚಂದಾಪುರ ಬಳಿ ಬೈಕ್ ಅಡಗಟ್ಟಿ ದಿವ್ಯ ಅಪಹರಣಕ್ಕೆ ಯತ್ನಿಸಲಾಗಿದೆ. ಈ ವೇಳೆ ಅಲ್ಲಿಂದ ತಪ್ಪಿಸಿಕೊಂಡು ನವ ಜೋಡಿಗಳು ಜಿಗಣಿ ಠಾಣೆಗೆ ತೆರಳಿದ್ದಾರೆ. ಈ ಕುರಿತು ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.