ಬೆಂಗಳೂರು : ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಬೆಂಗಳೂರಿನ ಜೆಸಿ ನಗರದ ಮುಖ್ಯ ರಸ್ತೆಯಲ್ಲಿ ವಿಜಯ್ 22 ಎನ್ನುವ ಕನನ್ನು ಚಾಕು ಇರಿದು ಕೊಲೆ ಮಾಡಲಾಗಿದೆ. ಇಂದು ಮಧ್ಯಾಹ್ನ ಈ ಒಂದು ಘಟನೆ ನಡೆದಿದ್ದು ಜೆಸಿ ನಗರದ ಮುಖ್ಯ ರಸ್ತೆಯಲ್ಲಿ ವಿಜಯಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ.
ಯುವಕ ವಿಜಯ್ ಗೆ ಕಿರಣ ಮತ್ತು ವಿನೋದ್ ಎಂಬವರು ಚಾಕು ಇರಿದು ಕೊಲೆ ಮಾಡಿದ್ದಾರೆ. ನಿನ್ನೆ ರಾತ್ರಿ ಕುಡಿದು ಹೋಗುವಾಗ ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ ಆಗಿದೆ ಜೈ ಗಾಡಿಗೆ ವಿನೋದ್ ಗಾಡಿ ಟಚ್ ಆಗಿದೆ ಗಲಾಟೆ ಆಗಿತ್ತು. ಇಂದು ಬೆಳಿಗ್ಗೆ ವಿಜಯನನ್ನು ಕಿರಣ್ ಮತ್ತು ವಿನೋದ್ ಹುಡುಕಿಕೊಂಡು ಹೋಗಿದ್ದಾರೆ.
ಮನೆಯ ಬಳಿದ್ದಾಗ ವಿಜಯ ಸಿಗದಿದ್ದರಿಂದ ಫೋನ್ ಮಾಡಿದರು. ವಿಜಯನನ್ನು ಮತ್ತೆ ಬಾರ್ ಬಳಿಗೆ ಕರೆಸಿಕೊಂಡು ಗಲಾಟೆ ಮಾಡಿದರು. ಮಾತಿಗೆ ಮಾತು ಬೆಳೆದು ವಿಜಯ್ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ವಿಜಯ್ ಸಾವನಪ್ಪಿದ್ದಾನೆ. ಸ್ಥಳಕ್ಕೆ ಜೆಸಿ ನಾಗರ ಠಾಣೆ ಪೊಲೀಸ್ರು ಭೇಟಿ ನೀಡಿದ್ದು, ಕಿರಣ್ ಮತ್ತು ವಿನೋದ್ನನ್ನು ಹರೀಶ್ ಮಾಡಿದ್ದಾರೆ.








