ಶಿವಮೊಗ್ಗ : ಇತ್ತೀಚಿಗೆ ರಾಜ್ಯದಲ್ಲಿ ಹಸುವಿನ ಕತ್ತು ಕೊಯ್ದು ಪಾಪಿಗಳು ವಿಕೃತಿ ಮರದಿದ್ದರೂ ಅಲ್ಲದೆ ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ನಡೆದಿತ್ತು ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಘಟನೆ ನಡೆದಿದ್ದು, ತನ್ನ ಪಾಡಿಗೆ ತಾನು ಮೆಯುತ್ತಿದ್ದ ಗೋ ಮಾತೆಯ ಕೆಚ್ಚಲು ಕೊಯ್ದು ಪಾಪಿಗಳು ವಿಕೃತಿ ಮೆರೆದಿದ್ದಾರೆ.
ಹೌದು ಹಸುವಿನ ಕೆಚ್ಚಲು ಕೊಯ್ದು ಪಾಪಿಗಳು ಕ್ರೌರ್ಯ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿಜಾಪುರದಲ್ಲಿ ಒಂದು ರಾಕ್ಷಸಿಯ ಕೃತ್ಯ ನಡೆದಿದೆ. ರಾಕ್ಷಸರು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದಾರೆ. ಹಸು ಮೇಯ್ಯುತ್ತಿದ್ದಾಗ ಕೃತ್ಯ ನಡೆದಿದೆ. ವಿಜಯಕುಮಾರ್ ಗೆ ಸೇರಿದ ಹಸು ರಕ್ತಸ್ರಾವದಿಂದ ತೀವ್ರ ನರಳಾಟ ನಡೆಸುತ್ತಿದೆ. ರಕ್ತಸ್ರಾವದಿಂದ ನರಳುತ್ತಿದ್ದ ಹಸುವಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.