ನವದೆಹಲಿ: ಉತ್ತರ ಪ್ರದೇಶನ ಗಾಜಿಯಾಬಾದ್ನ ಹಿಂಡನ್ ಏರ್ಪೋರ್ಟ್ ನಿಂದ ಕೋಲ್ಕತಾಗ ತೆರಳಲಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುವ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಹಾಗಾಗಿ ಮತ್ತೊಂದು ವಿಮಾನ ಅನಾಹುತ ತಪ್ಪಿದೆ.
ಹೌದು ಗಾಜಿಯಾಬಾದ್ನಿಂದ ಕೋಲ್ಕತಾಗೆ ಹೊರಟಿದ್ದ ವಿಮಾನ ಟೇಕಾಫ್ ಆಗುವ ಅಂತಿಮ ಕ್ಷಣದಲ್ಲಿ ದೋಷ ಪತ್ತೆಯಾಗಿದೆ. ಹೀಗಾಗಿ ವಿಮಾನ ಟೇಕಾಫ್ ಮುಂದೂಡಿಕೆ ಮಾಡಲಾಯಿತು. ರನ್ ವೇಯಲ್ಲಿದ್ದ ಐಎಕ್ಸ್ 1511 ಸಂಖ್ಯೆಯ ವಿಮಾನ ಇನ್ನೇನು ಟೇಕಾಫ್ ಆಗಬೇಕಿತ್ತು, ಆದರೆ ಅಂತಿಮ ಕ್ಷಣದಲ್ಲಿ ವಿಮಾನದ ಸಿಬ್ಬಂದಿ ದೋಷ ಪತ್ತೆ ಮಾಡಿ ಬೇರೆ ವೇಳೆ ನಿಗದಿ ಅಥವಾ ಟಿಕೆಟ್ ರದ್ದುಪಡಿಸಿದರೆ ಪೂರ್ತಿ ಹಣ ಮರು ಪಾವತಿಸುವುದಾಗಿ ಹೇಳಿದೆನೆಂದು ಏರಿಂಡಿಯಾ ವಕ್ತಾರ ತಿಳಿಸಿದ್ದಾರೆ.