ಹಾವೇರಿ : ಹಾವೇರಿಯಲ್ಲಿ ಎಂದು ಘೋರ ಘಟನೆ ನಡೆದಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿರುವ ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಕಾಲು ಜಾರಿ ನದಿಗೆ ಬಿದ್ದು ಕಲ್ಲಪ್ಪ ಹುರಳಿಕುಪ್ಪಿ (80) ಎನ್ನುವವರು ಸಾವನಪ್ಪಿದ್ದಾರೆ.
ಮೃತರು ಹಾನಗಲ್ ತಾಲೂಕಿನ ಜಾಕ್ಕನಾಯಕನ ಕೊಪ್ಪ ನಿವಾಸಿ ಆಗಿದ್ದು, ಇಂದ್ ನದಿಯಲ್ಲಿ ಕಾಲು ತೊಳೆಯಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಬಂದು ಮೃತ ದೇಹಕ್ಕಾಗಿ ಶೋಧಕ ಕಾರ್ಯ ಮುಂದುವರಿಸಿದ್ದಾರೆ ಘಟನೆ ಕುರಿತಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.