ರಾಯಚೂರು : ಯಾದಗಿರಿಯಲ್ಲಿ ಘೋರ ದುರಂತ ನಡೆದಿದ್ದು, ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯ ಹಿರೇನಗನೂರು ಗ್ರಾಮದ ಹೊರವಲಯದ ಕ್ಯಾಸರ್ ಹಾಳ ಕರೆಯಲ್ಲಿ, ಮೌನೇಶ್ ಶಿವಣ್ಣ (18) ಎಂಬ ಯುವಕ ಕುರಿಗಳನ್ನು ಕಾಯುತ್ತಾ ಕೆರೆ ಬಳಿ ತೆರಳಿದ್ದ ಇತರ ಕುರಿಗಾಹಿ ಯುವಕರು ಈಜಲು ಇಳಿದಿದ್ದರು.
ಮೌನೇಶ್ ಕೂಡ ನೀರಿನಲ್ಲಿ ಈಜಲು ಇಳಿದಿದ್ದ. ಈ ವೇಳೆ ಮೌನೇಶ್ ಕೆರೆಯಲ್ಲಿ ಒಮ್ಮೆಲೇ ಮುಳುಗಿದ್ದಾನೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಹಟ್ಟಿ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.