ವಿಜಯಪುರ : ವಿಜಯಪುರದಲ್ಲಿ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳ್ಳಭಟ್ಟಿ ನಡೆಸುತ್ತಿದ್ದ ಅಡ್ಡೆಗಳಮೇಲೆ ಏಕಕಾಲಕ್ಕೆ ಅಬಕಾರಿ ಪೊಲೀಸರು ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.
ಖಚಿತ ಮಾಹಿತಿಯನ್ನು ಮೇರೆಗೆ ಅಬಕಾರಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಕುರುಬರದಿನ್ನಿ ತಾಂಡ, ಮುಳವಾಡ ತಾಂಡದಲ್ಲಿ ಈ ಒಂದು ದಾಳಿ ನಡೆದಿದೆ. ಕುರುಬರದಿನಿ ತಾಂಡಾದಲ್ಲಿ 35 ಬಿಂದಿಗೆಗಳಲ್ಲಿ ಕಳಬಟ್ಟಿ ತುಂಬಿ ಇಡಲಾಗಿತ್ತು. ಮುಳುವಾಡ ಎಲ್ಟಿ 2 ಬಳಿ ಜಮೀನಿನಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದರು. ಕಳ್ಳಬಟ್ಟಿ ಯನ್ನು ಬಸವನಬಾಗೇವಾಡಿ ಅಬಕಾರಿ ಪೊಲೀಸ್ ಸರು ನಾಶಪಡಿಸಿದ್ದಾರೆ. ಅಕ್ರಮವಾಗಿ ಜಮೀನಿನಲ್ಲಿ ಕಲಬಟ್ಟಿ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಜಮೀನು ಮಾಲೀಕರನ್ನು ಸಧ್ಯಾಬಕಾರಿ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.