ಶಂಶಾಬಾದ್ : ತೆಲಂಗಾಣದ ರಾಜಧಾನಿ ಹೈದರಾಬಾದ್’ನ ಶಂಶಾಬಾದ್’ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ವಿಮಾನ ಅಪಘಾತ ತಪ್ಪಿದೆ. ಇಂದು (ಶುಕ್ರವಾರ) ಏರ್ ಇಂಡಿಯಾ ವಿಮಾನವು ಹೈದರಾಬಾದ್’ನಿಂದ ಮುಂಬೈಗೆ ಹೋಗುತ್ತಿತ್ತು. ನಂತ್ರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಪೈಲಟ್ ಟೇಕ್ ಆಫ್ ಆಗುವ ಮೊದಲು ರನ್ವೇಯಲ್ಲಿ ವಿಮಾನವನ್ನು ನಿಲ್ಲಿಸಿದರು.
ಪೈಲಟ್ ತೆಗೆದುಕೊಂಡ ಸಕಾಲಿಕ ಕ್ರಮದಿಂದಾಗಿ, ಸಂಭಾವ್ಯ ಅಪಾಯ ತಪ್ಪಿತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಏರ್ ಇಂಡಿಯಾ ತಂಡವು ತಕ್ಷಣವೇ ಕಾರ್ಯನಿರ್ವಹಿಸಿ ಪ್ರಯಾಣಿಕರಿಗೆ ಮತ್ತೊಂದು ವಿಮಾನ ವ್ಯವಸ್ಥೆ ಮಾಡಿ ಅವರನ್ನು ಮುಂಬೈಗೆ ಕಳುಹಿಸಿತು.
ಜೂನ್ 30ರೊಳಗೆ ‘ಏಕೀಕೃತ ಪಿಂಚಣಿ ಯೋಜನೆ’ ಆಯ್ಕೆ ಮಾಡಿ, ಸರ್ಕಾರಿ ನೌಕರರಿಗೆ ಕೇಂದ್ರದ ಸೂಚನೆ
BREAKING : ಇರಾನ್’ಗೆ ಶಸ್ತ್ರಾಸ್ತ್ರ ಸಾಗಣೆ ; ಚೀನಾ, ಟರ್ಕಿಶ್ ಕಂಪನಿಗಳ ಮೇಲೆ ‘ಅಮೆರಿಕ’ ನಿರ್ಬಂಧ
‘BCCI’ ಮಹತ್ವದ ನಿರ್ಧಾರ ; 16 ವರ್ಷದೊಳಗಿನ ಕ್ರಿಕೆಟಿಗರಿಗೆ ಸೆಕೆಂಡ್ ‘ಬೋನ್ ಟೆಸ್ಟ್’ ಕಡ್ಡಾಯ