ಬೆಂಗಳೂರು : ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ಚಾಕುವಿನಿಂದ ಪತ್ನಿಯ ಕುತ್ತಿಗೆ ಇರಿದಿರುವ ಘಟನೆ ಬೆಂಗಳೂರಿನಲ್ಲಿ ಬ್ಯಾಡರ ಹಳ್ಳಿಯಲ್ಲಿ ಸೆಪ್ಟೆಂಬರ್ 18ರಂದು ಈ ಒಂದು ಕೃತ್ಯ ನಡೆದಿದೆ. ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಪತ್ನಿ ದೇವಿಕಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಾಣಪಾಯದಿಂದ ಬಚಾವ್ ಮಾಡಿದ್ದಾರೆ.ಚಾಕು ಇರಿದ ಪತಿಯನ್ನು ಚಂದ್ರು ಎಂದು ತಿಳಿದುಬಂದಿದೆ.
11 ವರ್ಷಗಳ ಹಿಂದೆ ಚಂದ್ರು ಮತ್ತು ದೇವಿಕ ವಿವಾಹವಾಗಿದ್ದರು, ಖಾಸಗಿ ಆಸ್ಪತ್ರೆಯಲ್ಲಿ ಪತ್ನಿ ದೇವಿಕಾ ಕೆಲಸ ಮಾಡುತ್ತಿದ್ದಾಳೆ. ಮನೆಗೆ ಯಾರೊ ಬರುತ್ತಿದ್ದಾರೆ ಎಂದು ಚಂದ್ರು ಪತ್ನಿ ದೇವಿಕಾ ಜೊತೆ ಜಗಳ ತೆಗೆಯುತ್ತಿದ್ದ. ಕುಡಿತದ ಚಟಕ್ಕೆ ಬಿದ್ದು ಪ್ರತಿದಿನ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ದೇವಿಕಾ ಪತಿಯಿಂದ ಐದು ವರ್ಷಗಳಿಂದ ದೂರವಿದ್ದಳು. ಅಲ್ಲದೆ ದೇವಿಕಾಳ ಚಿನ್ನವನ್ನು ಪತಿ ಚಂದ್ರು ಅಡವಿಟ್ಟಿದ್ದ.ಈ ಕುರಿತು ಬ್ಯಾಡರಹಳ್ಳಿ ಠಾಣೆಯಲ್ಲಿ ಪತ್ನಿ ದೇವಿಕ ದೂರು ನೀಡಿದ್ದಾಳೆ.
ಪತ್ನಿ ದೂರ ನೀಡಿದರೂ ಪದೇ ಪದೇ ಪತಿ ಚಂದ್ರು ಹಿಂಸೆ ಕೊಡುತ್ತಿದ್ದ. ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದ. ಪತ್ನಿಯ ಫೋಟೋಗಳನ್ನು ಅಶ್ಲೀಲವಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದ. ಸೆಪ್ಟೆಂಬರ್ 17ರಂದು ಕರೆ ಮಾಡಿ ಚಂದ್ರು ಹಣ ಬೇಕು ಎಂದು ಹೇಳಿದ್ದಾನೆ. ಸೆಪ್ಟೆಂಬರ್ 18ರಂದು ಮನೆ ಹತ್ತಿರ ಬಂದು ಮನೆಯಲ್ಲಿ ಯಾರೊ ಇದ್ದಾರೆ ಎಂದು ಗಲಾಟೆ ಮಾಡಿದ್ದಾನೆ ಗಲಾಟೆಯ ಬಳಿಕ ಕುತ್ತಿಗೆ ಮತ್ತು ಕೈಗೆ ಚಾಕುವಿನಿಂದ ಇರಿದಿದ್ದಾನೆ. ಪತ್ನಿ ಚಂದ್ರು ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿದೆ.