ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ನಡೆದಿದ್ದು, ಕರೆಂಟ್ ಶಾಕ್ ನಿಂದ ಬಾಲಕನೊಬ್ಬ ಸುಟ್ಟ ಗಾಯಗಳಿಂದ ನೆರಳಾಡುತ್ತಿರುವ ಘಟನೆ, ಬೆಂಗಳೂರಿನ ಕೆಆರ್ ಪುರಂ 53ನೇ ವಾರ್ಡ್ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ನಿರ್ಮಾಣ ಹಂತದ ಕಟ್ಟಡದ ಬಳಿ ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕನಿಗೆ ಗಂಭೀರವಾದ ಗಾಯಗಳಾಗಿವೆ. ಹೌದು ಅಪಾಯಕಾರಿಯಾಗಿ ಹಾದುಹೋಗಿರುವ ವಿದ್ಯುತ್ ತಂತಿಯ ಬಳಿ ನಿನ್ನೆ ಆಟ ಆಡುತ್ತಾ ಬಾಲಕ ಪೊರಕೆ ಬಿಸಾಡಲು ಹೋಗಿದ್ದ. ವಿದ್ಯುತ್ ತಂತಿಗೆ ಪೊರಕೆ ತಾಗಿ ಬಾಲಕನಿಗೆ ಕರೆಂಟ್ ಶಾಕ್ ಹೊಡೆದಿದೆ. ಕರೆಂಟ್ ಶಾಕ್ ಗಾಯಗಳಿಂದ ಬಾಲಕ ಇದೀಗ ತೀವ್ರವಾಗಿ ನರಳಾಡುತ್ತಿದ್ದಾನೆ. ಸದ್ಯ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.