ಮೈಸೂರು : ಶಾಲಾ ಬಸ್ ವಾಹನಕ್ಕೆ ಟ್ಯಾಂಕರ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಕುರುಬಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಭೈರ್ಯ ಗ್ರಾಮದಿಂದ ಟ್ಯಾಂಕರ್ ಸಾಲಿಗ್ರಾಮಕ್ಕೆ ತೆರಳುತ್ತಿತ್ತು, ಕುರುಬ ಹಳ್ಳಿಯಿಂದ ಭೈರ್ಯ ಗ್ರಾಮಕ್ಕೆ ಸ್ಕೂಲ್ ಬಸ್ ಹೊರಟಿತ್ತು, ಇದೆ ವೇಳೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಸಾಲಿಗ್ರಾಮ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಥಿತಿ ಶಿಕ್ಷಕನ ಬರ್ಬರ ಕೊಲೆ
ಮಚ್ಚಿನಿಂದ ಕೊಚ್ಚಿ ಅತಿಥಿ ಶಿಕ್ಷಕನನ್ನು ಬರಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕುಳ್ಳನಂಜಯ್ಯನ ಪಾಳ್ಯದಲ್ಲಿ ಮರಿಯಪ್ಪ (47) ಎನ್ನುವ ಅಥಿತಿ ಶಿಕ್ಷಕನನ್ನು ಕೊಲೆಗಯ್ಯಲಾಗಿದೆ ಸಂಭವಿಸಿದೆ. ಮಚ್ಚಿನಿಂದ ಕೊಚ್ಚಿ ಅತಿಥಿ ಶಿಕ್ಷಕನ ಬರ್ಬರ ಹತ್ಯೆ ಮಾಡಲಾಗಿದೆ. ಮುದಲ ಶಾಲೆಯಲ್ಲಿ ಮರಿಯಪ್ಪ ಅತಿಥಿ ಶಿಕ್ಷಕರಾಗಿ ಸೇವಿ ಸಲ್ಲಿಸುತ್ತಿದ್ದ. ಜಮೀನು ಒಂದರಲ್ಲಿ ದುರುಳರು ಮಚ್ಚಿನಿಂದ ಹತ್ಯೆಗೈದು ಆತನ ಶವವನ್ನು ಬಿಸಾಕಿದ್ದಾರೆ.ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.