ನವದೆಹಲಿ : ಇಲ್ಲಿನ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)ನಲ್ಲಿ ಮೆದುಳು ನಿಷ್ಕ್ರಿಯಗೊಂಡ 52 ವರ್ಷದ ಮಾಜಿ ಬಿಎಸ್ಎಫ್ ಯೋಧನ ಅಂಗಾಂಗಗಳನ್ನು ಅವರ ಕುಟುಂಬ ದಾನ ಮಾಡುವ ಮೂಲಕ ಮೂವರಿಗೆ ಹೊಸ ಜೀವನ ನೀಡಿರುವ ಘಟನೆ ರಾಜಧಾನಿಯಲ್ಲಿ ದೆಹಲಿ ನಡೆದಿದೆ.
ಫಿರೋಜಾಬಾದ್ ಮೂಲದ ರಾಕೇಶ್ ಕುಮಾರ್ ಅವರು ಅಕ್ಟೋಬರ್ 3 ರಂದು ತಮ್ಮ ಮನೆಯಲ್ಲಿ ಕೆಲವು ವಿದ್ಯುತ್ ರಿಪೇರಿ ಮಾಡುತ್ತಿದ್ದ ವೇಳೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಟ್ರಾಮಾ ಸೆಂಟರ್ಗೆ ಸೇರಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಗೆ (AIIMS) ದಾಖಲಿಸಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತ್ತು. ಆದರೆ ಅಕ್ಟೋಬರ್ 6 ರಂದು ಅವರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದರು.
ಈ ವೇಳೆ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬಕ್ಕೆ ಸಲಹೆ ನೀಡಲಾಯಿತ್ತು. ಇದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಶುಕ್ರವಾರ ಹೃದಯವನ್ನು ಆರ್ಮಿ ಆರ್ಆರ್ ಆಸ್ಪತ್ರೆಯಲ್ಲಿ ರೋಗಿಗೆ ಕಸಿ ಮಾಡಲಾಗಿದೆ. ಅವರ ಒಂದು ಕಿಡ್ನಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ಹೋಗಿದ್ದರೆ. ಇನ್ನೊಂದು ಕಿಡ್ನಿಯನ್ನು ಏಮ್ಸ್ನಲ್ಲಿ ಬಳಸಲಾಯಿತು. ಮುಂಬರುವ ವಾರಗಳಲ್ಲಿ ಅವರ ಎರಡೂ ಕಾರ್ನಿಯಾಗಳನ್ನು ಕಸಿ ಮಾಡಲು ಸಂರಕ್ಷಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಏಪ್ರಿಲ್ 2022 ರಿಂದ, ದೆಹಲಿಯ AIIMS ನ ಆಘಾತ ಕೇಂದ್ರದಲ್ಲಿ 1994 ರಿಂದ ಒಟ್ಟು 13 ದೇಣಿಗೆಗಳು ಸಂಭವಿಸಿವೆ (ಎಐಐಎಂಎಸ್, ದೆಹಲಿಯಲ್ಲಿ ಇದುವರೆಗೆ ಅತ್ಯಧಿಕ ಸಂಖ್ಯೆ) ಪ್ರಮಾಣೀಕರಣ ಮತ್ತು ಅಂಗ ಸಂಗ್ರಹಣೆ ಪ್ರಕ್ರಿಯೆಗಳು ಈಗ ನಿರಂತರ ಹೆಚ್ಚಿದ ಸಂಖ್ಯೆಗಳಿಗೆ ಕಾರಣವಾಗಿವೆ ವೈದ್ಯರು ಹೇಳಿದ್ದಾರೆ.
AIIMS ಟ್ರಾಮಾ ಸೆಂಟರ್ನಲ್ಲಿ ಅಂಗಾಂಗ ಸಂಗ್ರಹಣೆ ಸೇವೆಗಳನ್ನು ನರಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ ಡಾ ದೀಪಕ್ ಗುಪ್ತಾ ನೇತೃತ್ವ ವಹಿಸಿದ್ದಾರೆ. ಭಾರತದಲ್ಲಿ ಪ್ರಸ್ತುತ ಪ್ರತಿ ಮೂರು ನಿಮಿಷಕ್ಕೆ ರಸ್ತೆ ಅಪಘಾತದಲ್ಲಿ ಒಬ್ಬರು ಸಾಯುತ್ತಾರೆ (ವರ್ಷಕ್ಕೆ 1,50,000 ಸಾವುಗಳು) ಆದರೆ ಪ್ರತಿ ವರ್ಷ ಕೇವಲ 700 ಅಂಗಾಂಗ ದಾನಗಳು ನಡೆಯುತ್ತವೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಇಂದಿನ ಅಗತ್ಯವಾಗಿದೆ ಎಂದರು.
ಇಂದು ಮುಂಜಾನೆ ಮಧ್ಯ ಗ್ರೀಸ್ನಲ್ಲಿ 5. ತೀವ್ರತೆಯ ಭೂಕಂಪ | Earthquake in Greece