ಬೆಳಗಾವಿ: ಎರಡು ವಾರಗಳಿಂದ ಸ್ವಲ್ಪ ಬಿಡುವು ಬಿಟ್ಟಿದ್ದ ಮಳೆರಾಯ ಮತ್ತೆ ಶುರುವಾಗಿದೆ. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಡಿ ಮಳೆ ಧಾರಕಾರವಾಗಿ ಸುರಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಜಡಿ ಮಳೆಯಿಂದ ಅಥಣಿ ತಾಲೂಕಿನ ಹಳ್ಳ-ಕೊಳ್ಳಗಳು ಸಂಪೂರ್ಣ ಭರ್ತಿಯಾಗಿದೆ.
BIGG NEWS: ಮುರುಘಾ ಮಠದ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಕೊಡಿ; ಹೊಸ ಬಾಂಬ್ ಸಿಡಿಸಿದ ಬಿ.ಕಾಂತರಾಜ್
ಹೀಗಾಗಿ ಹಳ್ಳ ದಾಟಲು ತೆಲಸಂಗ ಗ್ರಾಮಸ್ಥರು ಪರಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಮಳೆಯಿಂದಾಗಿ ದೋಣಿ ಹಳ್ಳದ ತಾತ್ಕಾಲಿಕ ಸೇತುವೆ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಹಗ್ಗ ಹಿಡಿದು ಹಳ್ಳವನ್ನು ಮಕ್ಕಳು ವೃದ್ಧರು ದಾಟುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗಿದೆ. ಈಗಾಗಲೇ ಕೆಲ ಜಿಲ್ಲೆಗಳಿಗೆ ಮಳೆ ಸುರಿದ್ದು ಮತ್ತೆ ಅವಾಂತರಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ರೈತರೆಲ್ಲ ಕಂಗಾಲಾಗಿದ್ದಾರೆ.