Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸಲಿ ಸಾವು!

29/06/2025 1:29 PM

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

29/06/2025 1:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಬೆಳ್ಳಿ ಗಣೇಶನ ಆಮಿಷ: BJP ಎಸ್.ಹರೀಶ್ ಗಂಭೀರ ಆರೋಪ
KARNATAKA

ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಬೆಳ್ಳಿ ಗಣೇಶನ ಆಮಿಷ: BJP ಎಸ್.ಹರೀಶ್ ಗಂಭೀರ ಆರೋಪ

By kannadanewsnow0921/09/2024 2:25 PM

ಬೆಂಗಳೂರು: ಯುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವೂ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಸಂದರ್ಭದಲ್ಲಿ ಆಮಿಷ ಒಡ್ಡಲಾಗುತ್ತಿದೆ. ಬೆಳ್ಳಿ ಗಣೇಶನನ್ನು ನೀಡಿ ಸದಸ್ಯತ್ವ ಮಾಡಿಸಲಾಗುತ್ತಿದೆ ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷವು ಸಂಪೂರ್ಣ ದಿವಾಳಿಯಾಗಿದೆ. ಮುಂದಿನ ಪ್ರಜೆಗಳಿಗೆ ಆಮಿಷವೊಡ್ಡಿ ಅವರನ್ನು ಹಾಳು ಮಾಡಿ ಸದಸ್ಯತ್ವ ನೀಡುತ್ತಿದ್ದಾರೆ ಎಂದು ದೂರಿದರು.

ಈಚೆಗೆ ಡಿ.ಕೆ.ಶಿವಕುಮಾರ್ ಅವರು ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಅವರ ಜೊತೆ ಇದ್ದುದನ್ನು ನೋಡಿದ್ದೇನೆ. ಡಿ.ಕೆ.ಶಿವಕುಮಾರ್ ಅವರು ಆಮಿಷವೊಡ್ಡಿ ಸದಸ್ಯತ್ವ ಮಾಡಿದ್ದನ್ನು ತಿಳಿಸಿ ಮತಗಳಿಕೆ ಕುರಿತು ತಮ್ಮ ಸಲಹೆ ನೀಡಲು ಅಮೆರಿಕಕ್ಕೆ ಹೋಗಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ತಿಳಿಸಿದರು.

ಗಣಪತಿ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಇವರ ‘ಬ್ರದರ್ಸ್’ ಬಿಟ್ಟು ಚಪ್ಪಲಿಯಲ್ಲಿ ಹೊಡೆಸುತ್ತಿದ್ದಾರೆ. ಕಲ್ಲು ಎಸೆಯುತ್ತಿದ್ದು, ಪೆಟ್ರೋಲ್ ಬಾಂಬ್ ಹಾಕುತ್ತಿದ್ದಾರೆ. ಇನ್ನೊಂದೆಡೆ ಬೆಳ್ಳಿ ಗಣೇಶನನ್ನು ನೀಡಿ ಸದಸ್ಯತ್ವ ಮಾಡಿಸಲಾಗುತ್ತಿದೆ. ಕಾಂಗ್ರೆಸ್‍ಗೆ ಎಂಥ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಗಿ ಕೇಳಿದರು. ಇದಕ್ಕೆ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಹೊಣೆಗಾರರು ಎಂದು ಆರೋಪಿಸಿದರು.

ಎಲ್ಲೆಡೆ ಭ್ರಷ್ಟಾಚಾರದ ಅಟ್ಟಹಾಸ..

ಎಲ್ಲ ಪ್ರಾಜೆಕ್ಟ್‍ಗಳಲ್ಲಿ ಕಮಿಷನ್ ಪಡೆಯಲಾಗುತ್ತಿದೆ. ಬಿಬಿಎಂಪಿಯಲ್ಲಿ ಯೋಜನೆ ಮಂಜೂರಾತಿಗೆ ಪ್ರತಿ ಚದರಡಿಗೆ 75ರಿಂದ 100 ರೂ ಪಡೆಯುತ್ತಿದ್ದಾರೆ. ಎಲ್ಲ ಕಡೆ ಇವತ್ತು ಭ್ರಷ್ಟಾಚಾರದ ಅಟ್ಟಹಾಸ ಮೆರೆಯುತ್ತಿದೆ ಎಂದು ಎಸ್. ಹರೀಶ್ ಅವರು ತಿಳಿಸಿದರು.

ಗಣಪತಿ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಕಲ್ಲೆಸೆತ, ಇನ್ನೊಂದೆಡೆ ಗಣೇಶನ ಬೆಳ್ಳಿಯ ಫೋಟೊ ನೀಡಿ ಸದಸ್ಯತ್ವ ಮಾಡಿಸುವುದು ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನು ಕೂಡಲೇ ನಿಲ್ಲಿಸಿ ಎಂದು ಅವರು ಕೆಪಿಸಿಸಿ ಅಧ್ಯಕ್ಷ ಶಿವಕುಮಾರರನ್ನು ಆಗ್ರಹಿಸಿದರು.

ಯುವನಿಧಿಯನ್ನು ಸರಿಯಾಗಿ ಕೊಟ್ಟಿಲ್ಲ ಎಂದು ಟೀಕಿಸಿದ ಅವರು, ಎಲ್ಲ ಗ್ಯಾರಂಟಿ ಯೋಜನೆಗಳಲ್ಲೂ ಮೂರು ತಿಂಗಳು ಹಣ ಕೊಡುತ್ತಿಲ್ಲ ಎಂದರಲ್ಲದೆ, ಆಮಿಷದ ಸದಸ್ಯತ್ವವನ್ನು ತಕ್ಷಣ ಸ್ಥಗಿತಗೊಳಿಸಬೇಕು. ನೈತಿಕ ರೀತಿಯಲ್ಲಿ ಸುಸಂಸ್ಕøತರನ್ನು ಸದಸ್ಯರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ತಮ್ಮ ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ತಿಳಿಸಿ ಸದಸ್ಯತ್ವ ಮಾಡಿಕೊಳ್ಳಲಿ. ಆಮಿಷ ಒಡ್ಡುವ ಮೂಲಕ ಸದಸ್ಯತ್ವ ಪಡೆಯಲು ಕೇಳಬಾರದು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಸದಸ್ಯರಾದವರಿಗೆ ಮತದ ಹಕ್ಕಿದೆ. ಮತದಾನದ ಹಕ್ಕು ಪಡೆಯಲು ಪೈಪೋಟಿ ನಡೆದಿದೆ. ಇದು ಮತಕ್ಕೆ ಹಣದ ಪರೋಕ್ಷ ಕ್ರಮ ಎಂದು ಟೀಕಿಸಿದರು.

ಇದಕ್ಕೆ ಯಾರು ದುಡ್ಡು ಕೊಡುತ್ತಿದ್ದಾರೆ? ಎಷ್ಟು ಕೋಟಿ ಖರ್ಚಾಗುತ್ತಿದೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಮತ್ತು ಬಿಜೆಪಿ ದಕ್ಷಿಣ ಜಿಲ್ಲಾಧ್ಯಕ್ಷ ಕೆ.ಸಿ. ರಾಮಮೂರ್ತಿ ಅವರು ಕೇಳಿದರು. ಈ ಮೂಲಕ ಜನರಿಗೆ ಮೋಸ ಎಸಗಲಾಗುತ್ತಿದೆ ಎಂದು ಟೀಕಿಸಿದರು. ಹಿಂದೂ ಧರ್ಮದವರಿಗೆ ಬೆಳ್ಳಿ ಗಣೇಶನನ್ನು ನೀಡುತ್ತೀರಿ. ಬೇರೆ ಧರ್ಮದವರಿಗೆ ಬೇರೆ ಆಮಿಷ ಒಡ್ಡುತ್ತಾರೆ. ಪ್ರಾಮಾಣಿಕವಾಗಿ ಸದಸ್ಯತ್ವ ಮಾಡಿ ಎಂದು ಒತ್ತಾಯಿಸಿದರು.

ಹಣ, ಬೆಳ್ಳಿ ವಿಗ್ರಹ ನೀಡಿ ಆಮಿಷ ಒಡ್ಡುವುದು ಸಂವಿಧಾನಬಾಹಿರ. ದೇವರ ವಿಗ್ರಹ ಅಡವಿಡುವ, ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ. ಇವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸ್ವಯಂಪ್ರೇರಣೆಯಿಂದ ಬಿಜೆಪಿ ಸದಸ್ಯತ್ವ

ದೇಶದಲ್ಲಿ ಎಲ್ಲ ಪಕ್ಷದವರು ಸದಸ್ಯತ್ವ ಅಭಿಯಾನ ನಡೆಸುತ್ತಿದ್ದಾರೆ. ದೊಡ್ಡ ಪಕ್ಷವಾದ ಬಿಜೆಪಿ ಸದಸ್ಯತ್ವ ಪಡೆಯಲು ಜನರು ಸ್ವಯಂಪ್ರೇರಣೆಯಿಂದ ಮುಂದಾಗುತ್ತಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ನಮ್ಮದು ಎಂದು ಎಸ್. ಹರೀಶ್ ಅವರು ನುಡಿದರು.

ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಉಪಸ್ಥಿತರಿದ್ದರು.

BREAKING: ಬಿಎಸ್ ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ: ಅಕ್ರಮ ಡಿನೋಟಿಫಿಕೇಷನ್ ಕೇಸಲ್ಲಿ ಲೋಕಾಯುಕ್ತದಿಂದ ಸಮನ್ಸ್ ಜಾರಿ

ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM1 Min Read

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸಲಿ ಸಾವು!

29/06/2025 1:29 PM1 Min Read

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

29/06/2025 1:20 PM1 Min Read
Recent News

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸಲಿ ಸಾವು!

29/06/2025 1:29 PM

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

29/06/2025 1:20 PM

ಸಾಯುವ ಮೊದಲೇ ತನ್ನ ಸಾವನ್ನು ಘೋಷಿಸಿದ ಯೂಟ್ಯೂಬರ್ ಟ್ಯಾನರ್ ಮಾರ್ಟಿನ್ !

29/06/2025 1:18 PM
State News
KARNATAKA

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

By kannadanewsnow0529/06/2025 1:31 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದಂತ ಕೊಲೆಯಾಗಿದ್ದು, ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಮೂಟೆ ಕಟ್ಟಿ ದುಷ್ಕರ್ಮಿಗಳು ಕಸದ ಲಾರಿಯಲ್ಲಿ…

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸಲಿ ಸಾವು!

29/06/2025 1:29 PM

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

29/06/2025 1:20 PM

2 ನಿಮಿಷದಲ್ಲಿ ನೀವು ಅಂದುಕೊಂಡಿದ್ದೇ ಆಗುತ್ತೆ, ಕಣ್ಣು ಮುಚ್ಚಿ ಈ ಸಂಖ್ಯೆಯನ್ನು 27 ಬಾರಿ ಹೇಳಿ ಸಾಕು

29/06/2025 1:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.