ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಗಳ ಸಮೇತ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿರ್ಗೀಟು ನೀಡಿದ್ದು ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಇದೆ ವೇಳೆ ಆಗ್ರಹಿಸಿದರು.
ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಬಡವರಿಗೆ ಕೊಡಬೇಕಿದ್ದ ನೀವೇಶನವನ್ನು ಬೇಕಾದವರಿಗೆ ಕೊಟ್ಟಿದ್ದಾರೆ. ಮುಡಾ ನಿವೇಶನವನ್ನು ತಮ್ಮ ಕುಟುಂಬದವರಿಗೆ ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯ ಮುಖಂಡರಿಗೆ ಸೈಟ್ ಹಂಚಿಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
1931 ಇದರಲ್ಲಿ ಹರಾಜಿನಲ್ಲಿ ನಿಂಗ ಎಂಬ ಕುಟುಂಬ ಜಮೀನು ಪಡೆದಿದ್ದರು. ನಿಂಗ ಎಂಬುವವರಿಗೆ ಮೂವರು ಮಕ್ಕಳು ಇದ್ದಾರೆ. ನಿಂಗ ಎಂಬುವವರ ಮೂರನೇ ಮಗ ದೇವರಾಜನಿಂದ ಜಮೀನು ಖರೀದಿಸಿದ್ದಾರೆ. ಸಿಎಂ ಬಾಮೈದ ನಿಂಗ ಎಂಬುವವರ ಮೂರನೇ ಮಗನಿಂದ ಜಮೀನು ಖರೀದಿಸಿದ್ದಾರೆ. ದೇವರಾಜ ಜಮೀನಿನ ವಾರಸುದಾರನೇ ಅಲ್ಲ ಎಂದು ವಿಜಯೇಂದ್ರ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾದುದು. ಮುಡಾ ಸೈಟ್ ಹಂಚಿಕೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಎಂ ಕುಟುಂಬ ತಪ್ಪು ಮಾಡಿಲ್ಲ ಅಂದರೆ ಏಕೆ ಚರ್ಚೆ ಮಾಡುತ್ತಿಲ್ಲ? ಈಗಾಗಲೇ ನೆನ್ನೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಸಿಬಿಐನಿಂದ ಪ್ರಕರಣದ ತನಿಖೆ ಆಗಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತನ ವಿರುದ್ಧವೇ fir ದಾಖಲಿಸಲಾಗಿದೆ. ಮುಡಾ ಬಗ್ಗೆ ಚರ್ಚೆ ಮಾಡುವುದಕ್ಕೆ ಸದನದಲ್ಲಿ ಅವಕಾಶ ಕೊಡಲಿಲ್ಲ ಸಿಎಂ ಈ ಪ್ರಕರಣವನ್ನು ಧೈರ್ಯವಾಗಿ ಎದುರಿಸುತ್ತಾರೆ ಅಂತ ಅಂದುಕೊಂಡಿದ್ದೆ. ಎಸ್ಸಿ ಎಸ್ಟಿ ಭೂಮಿಯನ್ನು ಬೇರೆಯವರಿಗೆ ಕೊಟ್ಟಿದ್ದಕ್ಕೆ ಪ್ರಶ್ನೆ ಮಾಡಿದ್ದೇವೆ.
ಕಾನೂನು ಬಾಹಿರು ಆಗಿದ್ದನ್ನು ನಿಲ್ಲಿಸಬೇಕೆಂದು ಈಗ ಆದೇಶ ಮಾಡಿದ್ದಾರೆ. ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕೆಂದು ನಿಲುವಳಿ ಸೂಚನೆ ನೀಡಿದ್ದೆವು . ಆದರೆ ಯಾಕೆ ಸಿಎಂ ಸಿದ್ದರಾಮಯ್ಯ ಮಾಡಿದರು ಗೊತ್ತಿಲ್ಲ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಅಪರಾಧಿ ಸ್ಥಾನದಲ್ಲಿ ಇದ್ದಾರೆ.ಇನ್ನು ವಾಲ್ಮೀಕಿ ಹಗರಣದ ಕುರಿತಂತೆ ಮಾತನಾಡಿದ ಅವರು, ನಿಗಮದ ಹಣವನ್ನು ಲೋಕಸಭೆ ಚುನಾವಣೆಗೆ ಬಳಸಿಕೊಂಡಿದ್ದಾರೆ. ಬೇರೆ ರಾಜ್ಯಗಳ ಚುನಾವಣೆ ವೇಳೆ ಮಧ್ಯ ಹಂಚಿಕೆಗೆ ಬಳಕೆಯಾಗಿದೆ. ಕೋಟ್ಯಾಂತರ ಹಣ ದುರ್ಬಳಕೆಯಾಗಿದ್ದಕ್ಕೆ ಇಡಿ ಹಾಗೂ ಸಿಬಿಐ ತನಿಖೆ ಮಾಡುತ್ತಿದೆ ಎಂದರು.
ಸದನದಲ್ಲಿ ಸಚಿವ ಭೈರತಿ ಸುರೇಶ್ ಮುಡಾ ಅಕ್ರಮದ ಕುರಿತಂತೆ ದಾಖಲೆ ತೋರಿಸಿದ ವಿಚಾರವಾಗಿ ಈ ರೀತಿಯ ಬೆದರಿಕೆಗಳಿಗೆ ಭಾರತೀಯ ಜನತಾ ಪಕ್ಷ ಹೆದರುವುದಿಲ್ಲ.ಬಿಜೆಪಿ ಅವಧಿಯಲ್ಲಿನ ಹಗರಣ ತನಿಖೆಗು ನಾವು ಹೆದರುವುದಿಲ್ಲ. ಎಲ್ಲಾ ಸರ್ಕಾರದ ಅವಧಿಗಳಲ್ಲಿ ಆಗಿರುವ ಹಗರಣಗಳ ಬಗ್ಗೆ ತನಿಖೆ ಆಗಲಿ ಎಂದು ಸವಾಲು ಹಾಕಿದರು.
ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಇದು ಪಾದಯಾತ್ರೆ ಎನ್ನುವುದಕ್ಕಿಂತ ಚಳುವಳಿ ಅನ್ನಬಹುದು. ರಾಜಕೀಯ ಉದ್ದೇಶಕ್ಕೆ ನಾವು ಪಾದಯಾತ್ರೆ ಮಾಡುತ್ತಿಲ್ಲ ಬಡವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದಲೇ ಪಾದಯಾತ್ರೆ ಮಾಡುತ್ತಿದ್ದೇವೆ ಪಾದಯಾತ್ರೆ ಬಗ್ಗೆ ಕುಮಾರಸ್ವಾಮಿ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.