ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಬೇದಾರ್ ಪಾಳ್ಯದಲ್ಲಿ (ವಾರ್ಡ್ ನಂ.61) ನೂತನವಾಗಿ ನಿರ್ಮಿಸಿರುವ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (ಸಿಯುಪಿಎಚ್ಸಿ) ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶನಿವಾರ ಉದ್ಘಾಟಿಸಿದರು. ಜತೆಯಲ್ಲಿ ಕ್ಷೇತ್ರದ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, “ಒಬ್ಬ ಜನಪ್ರತಿನಿಧಿಗೆ ಮನಸ್ಸಿದ್ದರೆ ತಮ್ಮ ಕ್ಷೇತ್ರವನ್ನು ಹೇಗೆ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ಅಶ್ವತ್ಥನಾರಾಯಣ ಉದಾಹರಣೆ ಆಗಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರಡಗಿಯಲ್ಲಿ 8 ಕೋಟಿ ರೂ. ವೆಚ್ಚದ 30 ಹಾಸಿಗೆ ಆಸ್ಪತ್ರೆ ನಿರ್ಮಾಣ – ಸಿಎಂ ಬಸವರಾಜ ಬೊಮ್ಮಾಯಿ

ಮಲ್ಲೇಶ್ವರಂ ವ್ಯಾಪ್ತಿಯ ಯಲ್ಲಿ ಆರೋಗ್ಯ, ಶಿಕ್ಷಣ, ನಾಗರಿಕ ಸೇವೆಗಳು ಸೇರಿದಂತೆ ಎಲ್ಲವೂ ಸುಗಮವಾಗಿ ನಡೆಯುತ್ತಿವೆ. ಇದು ಕೇವಲ ಹಣ ಮತ್ತು ಶ್ರೀಮಂತಿಕೆಯಿಂದ ಆಗುವುದಿಲ್ಲ. ಇದಕ್ಕೆ ಜನಪರವಾದ ಕಳಕಳಿ ಬೇಕಾಗುತ್ತದೆ. ಇದು ಇಡೀ ಬೆಂಗಳೂರಿನ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯವಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮೈದಾಳುವಲ್ಲೂ ಸಚಿವರು ವಹಿಸಿದ ಪಾತ್ರವು ಅನುಕರಣೀಯವಾಗಿದೆ
ಎಂದು ಅವರು ನುಡಿದರು.

ಸಚಿವ ಅಶ್ವತ್ಥನಾರಾಯಣ ಮಾತನಾಡಿ, “ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲೆಗಳ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ 220 ತರಹದ ಪರೀಕ್ಷೆಗಳು ಲಭ್ಯವಿವೆ ಎಂದರು.

‘ಪಬ್ಲಿಕ್ ಪರೀಕ್ಷೆ’ಯಲ್ಲಿ ಭಯದಲ್ಲಿದ್ದ 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಯಾರನ್ನು ಫೇಲ್ ಮಾಡಲ್ಲ – ಸಚಿವ ಬಿ.ಸಿ ನಾಗೇಶ್

ಅರ್ಹ ರೋಗಿಗಳಿಗೆ ಔಷಧಿಗಳನ್ನು ಸಹ ಉಚಿತವಾಗಿ ಕೊಡಲಾಗುವುದು. ಇಲ್ಲದಿದ್ದರೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಿಂದ ಭಾರೀ ರಿಯಾಯಿತಿ ದರದಲ್ಲಿ ಪೂರೈಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ ಇರುವ ಕೆ ಸಿ ಜನರಲ್ ಆಸ್ಪತ್ರೆ, ಗುಟ್ಟಹಳ್ಳಿ, ಮತ್ತೀಕೆರೆ ಸೇರಿದಂತೆ ಹಲವೆಡೆಗಳಲ್ಲಿ ಒಂದೇ ಸ್ಥಳದಲ್ಲಿ ಎಲ್ಲ ಚಿಕಿತ್ಸೆಯೂ ಸಿಗುವಂತೆ ಪರಿಪೂರ್ಣ ವ್ಯವಸ್ಥೆ ಮಾಡಲಾಗಿದೆ. ಉಳಿದ ವಾರ್ಡುಗಳಲ್ಲೂ ಇನ್ನು ಕೆಲವೇ ತಿಂಗಳಲ್ಲಿ ಇಂತಹ ಅನುಕೂಲ ಒದಗಿಸಲಾಗುವುದು ಎಂದು ಅವರು ವಿವರಿಸಿದರು.

BREAKING NEWS: ‘ಶೋ ಸೆಟ್’ನಲ್ಲಿಯೇ ‘ನಟಿ ತುನಿಶಾ ಶರ್ಮಾ’ ಆತ್ಮಹತ್ಯೆಗೆ ಶರಣು | Actor Tunisha Sharma dies by suicide

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಆಯುಕ್ತ ಡಾ.ತ್ರಿಲೋಕಚಂದ್ರ, ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್, ಮಲ್ಲೇಶ್ವರ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗಡೆ, ಲೋಕೇಶ್, ಮಾಜಿ ಕಾರ್ಪೊರೇಟರ್ ಗಳಾದ ಜಯಪ್ರಕಾಶ್, ಜೈಪಾಲ್ ಮುಂತಾದವರು ಉಪಸ್ಥಿತರಿದ್ದರು.

Share.
Exit mobile version