ಶಿವಮೊಗ್ಗ: ಬಿಜೆಪಿಯ ಕೆಲವು ಮುಖಂಡರು ರಾಷ್ಟ್ರಧ್ವಜವನ್ನು ಕೇಸರೀಕರಣ ಮಾಡಬೇಕು ಅಂತ ಹೊರಟಿದ್ದಾರಲ್ಲ ಇದು ಯಾವತರ ಅಂತ ಅರ್ಥವಾಗುತ್ತಿಲ್ಲ. ರಾಷ್ಟ್ರಧ್ವಜವನ್ನ ಕೇಸರೀಕರಣ ಮಾಡಬೇಕು ಅಂತ ಅಂದ್ರೇ ಇವರ ಧ್ಯೇಯ, ಉದ್ದೇಶವೇನಿದೆ? ಇವರೆಲ್ಲ ರಾಷ್ಟ್ರದ್ರೋಹಿಗಳು. ಇಂತವರನ್ನೆಲ್ಲ ನೇಣಿಗೆ ಹಾಕಬೇಕು. ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಚೇಂಜ್ ಮಾಡಬೇಕು ಅಂತ ಹೇಳ್ತಾರೋ ಅಂತವರನ್ನು ನೇಣುಗಂಬಕ್ಕೆ ಏರಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ.
ಇಂದು ಶಿವಮೊಗ್ಗದ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೇಶದಲ್ಲಿ ರಸಗೊಬ್ಬರದ ಬೆಲೆ ಜಾಸ್ತಿಯಾಗಿದೆ. ಸುಮಾರು 160 ರಿಂದ 180 ಒಂದು ಚೀಲಕ್ಕೆ ಜಾಸ್ತಿ ಮಾಡಿದ್ದಾರೆ. ಇದರಿಂದ ದೇಶದ ಸಣ್ಣ ರೈತರಿಗೆ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಹಾಲಿನ ದರ ಒಂದು ರೂಪಾಯಿ, ಎರಡು ರೂಪಾಯಿ ಮಾಡಿದಾಗ ಬೀದಿಗೆ ಬಂದು ಬಿಜೆಪಿಯ ನಾಯಕರು ಬಾಯಿ ಬಡಿದುಕೊಂಡರು. ಈ ದೇಶದ ರೈತರ ಮೇಲೆ ರಸಗೊಬ್ಬರದ ಬಾರ ಹೇರಿದ್ದಾರಲ್ಲ. ಇದರ ಬಗ್ಗೆ ಯಾರಾದರೂ ಚಕಾರ ಎತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಈ ದೇಶದ ರೈತರ ಪರ ಅಂತ ಮೋದಿ ಹೇಳುತ್ತಿದ್ದಾರೆ. ರಸಗೊಬ್ಬರ ದರ ಏರಿಕೆ ಮಾಡಿದ್ದ ಮೋದಿಜೀ ಅವರ ಕೊಡುಗೆ? ನಿಮಗೆ ನಾಚಿಕೆ ಆಗಬೇಕು ಕರ್ನಾಟಕದ ಬಿಜೆಪಿ ನಾಯಕರಿಗೆ. ನೀವು ಸಣ್ಣಪುಟ್ಟದ್ದಕ್ಕೆಲ್ಲ ರೇಟ್ ಜಾಸ್ತಿಯಾದಾಗ ಬಾರಿ ಮಾಡಿ ಬಿಟ್ರಿ, ಬಾರಿ ಮಾಡಿ ಬಿಟ್ರಿ ಅಂತ ಹೋರಾಟ ಮಾಡಿದವರು ಇವತ್ತು ಒಬ್ಬರು ಸಹ ಚಕಾರ ಎತ್ತುತ್ತಿಲ್ಲ. ನಿಜವಾಗಲೂ ಇದು ಬಹಳ ಬೇಸರದ ಸಂಗತಿ. ಇದನ್ನ ಈ ದೇಶದ ಜನ ಖಂಡನೆ ಮಾಡ್ತಾ ಇದ್ದಾರೆ ಇವತ್ತು ಎಂದರು.
ದೇಶದ ಪ್ರಧಾನಿಯನ್ನು ವಿಶ್ವಗುರು ಅಂತ ಬಿಂಬಿಸುತ್ತಿದ್ದಾರೆ. ಆದರೇ ಇವರು ಹೊರದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ಅದರ ಬಗ್ಗೆ ಚಕಾರವೆತ್ತುತ್ತಿಲ್ಲ. ಇರಾನ್, ಇಸ್ರೇಲ್ ನಲ್ಲಿ ಯುದ್ಧ ನಡೆಯುತ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಇದು ಬೇಸರದ ಸಂಗತಿಯಾಗಿದೆ. ದೇಶದ ಜನರು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದರು.
ನಮ್ಮ ರೈತರ ಪರವಾಗಿ ಪ್ರಧಾನಿ ಧ್ವನಿಯೆತ್ತಬೇಕು. ವರ್ಷಕ್ಕೋ ಆರು ತಿಂಗಳಿಗೋ ಕೊಡುವಂತ ರೂ.6000 ಏನುಕ್ಕೆ ಬರುತ್ತದೆ? ಹಾಲಿನ ದರ ಹೆಚ್ಚಾದಾಗ ಬೊಬ್ಬೆ ಹೊಡೆದ ನೀವು, ಇವತ್ತು ಏನಾಗಿದೆ. ನಿಮ್ಮ ನಾಲಿಗೆ ಒಣಗಿ ಹೋಗಿದ್ಯಾ? ವಿಜಯೇಂದ್ರಗೆ ಇವತ್ತು ಧ್ವನಿ ಇಲ್ವ? ಎಂದು ಪ್ರಶ್ನಿಸಿದರು.
BREAKING: ಕನ್ನಡದ ಖ್ಯಾತ ಸಾಹಿತಿ ದೊಡ್ಡರಂಗೇಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ಬೆಂಗಳೂರಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು