ಕೆಎನ್ಎನ್ಡಿಜಿಟಲ್ ಡೆಸ್ಕ್ : ಒಲಿಂಪಿಕ್ಸ್ಗೂ ಮುನ್ನ ಕೋಚ್ ಪುಲ್ಲೇಲ ಗೋಪಿಚಂದ್ ಅವ್ರ ಬಳಿ ತರಬೇತಿ ಪಡೆದಿದ್ದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಪ್ರತಿಷ್ಠಿತ ಕ್ರೀಡಾಕೂಟಕ್ಕೂ ಮುನ್ನ ಅಕಾಡೆಮಿಯಿಂದ ಅನಿರೀಕ್ಷಿತವಾಗಿ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಇವರಿಬ್ಬರ ನಡುವೆ ಏನಾದರೂ ಜಗಳ ನಡೆದಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಆದ್ರೆ, ಇತ್ತೀಚೆಗೆ ಅಲಿ ಜೊತೆ ಮೋಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು ಈ ವಿಚಾರವಾಗಿ ಮಾತನಾಡಿದ್ದಾರೆ. ಗೋಪಿಚಂದ್ ಅಕಾಡೆಮಿಯಲ್ಲಿನ ಕೆಲವು ವಿಷಯಗಳು ತನಗೆ ಇಷ್ಟವಾಗದ ಕಾರಣ ಮತ್ತು ಭಿನ್ನಾಭಿಪ್ರಾಯಗಳಿಂದ ಹೊರ ಬಂದಿರುವುದಾಗಿ ಹೇಳಿದರು.
“ನಾನು ಅವರೊಂದಿಗೆ ಕೆಲವು ವರ್ಷಗಳ ಕಾಲ ಪ್ರಯಾಣ ಮಾಡಿದ್ದೇನೆ, ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇದ್ದವು, ನನಗೆ ಕೆಲವು ವಿಷಯಗಳು ಇಷ್ಟವಾಗಲಿಲ್ಲ, ನನ್ನ ಆಟದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ನಾನು ಅಕಾಡೆಮಿಯನ್ನ ತೊರೆಯಬೇಕಾಯಿತು, ಅದು ನನ್ನ ಆಟದ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ. ನನಗೆ ಕೆಲವು ವಿಷಯಗಳು ಇಷ್ಟವಾಗಲಿಲ್ಲ ಮತ್ತು ನಾನು ಅದನ್ನ ಸಾಬೀತುಪಡಿಸಿದೆ, ನಾನು ಅಲ್ಲಿಯೂ ಸಹ ನಾನು ವಿವಿಧ ತರಬೇತುದಾರರೊಂದಿಗೆ ಆಡಿದ್ದೇನೆ. ಆಟಗಾರನು ಆಡುವಾಗ ಯಾವುದೇ ವಿವಾದ ಉಂಟಾಗಬಾರದು ಯಾಕಂದ್ರೆ ಅದು ಆಟದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾಗಿ ಆಡಲು ಸಾಧ್ಯವಿಲ್ಲ. ಒಲಿಂಪಿಕ್ಸ್ ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ನಾನು ಅಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದರೆ ನನ್ನ ಆಟದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನನಗೆ ಯಾವುದು ಒಳ್ಳೆಯದು ಎಂದು ಯೋಚಿಸಿ ಮತ್ತು ಅಲ್ಲಿಂದ ನಾನು ಬಂದಿದ್ದೇನೆ” ಎಂದು ಹೇಳಿದರು.
ಬಾಲ್ಯದಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆಯಲು ಸಿಕಂದರಾಬಾದ್ನ ಮರೇಡ್ಪಲ್ಲಿಯಿಂದ ಗಚಿಬೌಲಿಯ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಹೋಗಬೇಕಿತ್ತು ಎಂದು ಸಿಂಧು ಹೇಳಿದ್ದಾರೆ. ಆಕೆಯನ್ನು ಕರೆದುಕೊಂಡು ಹೋಗಿ ತರಬೇತಿ ನೀಡಿ ವಾಪಸ್ ಕರೆತರುವ ಜವಾಬ್ದಾರಿಯನ್ನ ತಂದೆ ವಹಿಸಿಕೊಂಡಿದ್ದರು. ತಾನು ಈ ಮಟ್ಟಕ್ಕೆ ಬರಲು ಹೆತ್ತವರು ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.