ನವದೆಹಲಿ : ಪ್ರಸ್ತುತ ರಾಜಕೀಯದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. “ಇಂದಿನ ರಾಜಕೀಯವು ಅಧಿಕಾರದ ಗುರಿಯಾಗಿ ಮುಂದುವರಿಯುತ್ತಿದೆ. ಹಾಗಾಗಿ ಕೆಲವೊಮ್ಮೆ ರಾಜಕೀಯವನ್ನ ತೊರೆಯುವ ಮನಸ್ಸಾಗುತ್ತೆ” ಎಂದು ಗಡ್ಕರಿ ಹೇಳಿದರು. ಇನ್ನು ಇತ್ತಿಚಿಗೆ ಗಡ್ಕರಿ ನೀಡಿದ ಈ ರೀತಿಯ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
“ನಾನು ರಾಜಕೀಯವನ್ನ ತ್ಯಜಿಸಬೇಕೇ ಅಥವಾ ಬೇಡವೇ ಎಂದು ನನಗೆ ಹಲವು ಬಾರಿ ಅನಿಸುತ್ತೆ, ಜೀವನದಲ್ಲಿ ರಾಜಕೀಯಕ್ಕಿಂತ ಹೆಚ್ಚಿನದನ್ನ ಮಾಡಬೇಕಾಗಿದೆ” ಎಂದು ಗಡ್ಕರಿ ಹೇಳಿದರು. ರಾಜಕೀಯವು ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ್ದು, ಆದ್ರೆ, ಪ್ರಸ್ತುತ ರಾಜಕೀಯವು ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಅಧಿಕಾರದಲ್ಲಿ ಉಳಿಯಲು ಮತ್ತು ಅಧಿಕಾರಕ್ಕೆ ಬರಲು ರಾಜಕೀಯ ಅಗತ್ಯ” ಎಂದು ಗಡ್ಕರಿ ಸಂವೇದನಾಶೀಲ ಕಾಮೆಂಟ್ ಮಾಡಿದ್ದಾರೆ. ಇನ್ನು “ಈ ಹಿಂದೆ ರಾಜಕೀಯವು ಸಾಮಾಜಿಕ ಚಳವಳಿಯ ಭಾಗವಾಗಿತ್ತು. ಸಮಾಜದಲ್ಲಿ ಬದಲಾವಣೆ, ದೇಶದ ಅಭಿವೃದ್ಧಿಯತ್ತ ಗಮನ ಹರಿಸಿ ರಾಜಕೀಯ ನಡೆಯುತ್ತಿದ್ದು, ಈಗ ಅಧಿಕಾರವೇ ಗುರಿ ಎಂಬಂತೆ ರಾಜಕಾರಣ ನಡೆಯುತ್ತಿದೆ” ಎಂದರು.
ಇನ್ನು “ಗಿರೀಶ್ ಗಾಂಧಿ ರಾಜಕೀಯದಲ್ಲಿದ್ದಾಗ ಹೊರಗೆ ಹೋಗಬೇಕು ಎಂದು ಹೇಳುತ್ತಿದ್ದರು. ನನಗೂ ಹಲವು ಬಾರಿ ರಾಜಕೀಯ ಬಿಡಬೇಕೆಂದು ಅನಿಸುತ್ತಿದೆ. ಜೀವನದಲ್ಲಿ ರಾಜಕೀಯಕ್ಕಿಂತ ಸಮಾಜಕ್ಕಾಗಿ ಮಾಡಬೇಕಾದ ಕೆಲಸಗಳೇ ಹೆಚ್ಚು” ಎಂದು ಗಡ್ಕರಿ ಹೇಳಿದರು.