ಹೊಸಪೇಟೆ : ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷ ವೇತನದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಕಂದಾಯ ಇಲಾಖೆ ಸಿಬ್ಬಂದಿಯವರಲ್ಲಿ ಮೂಲ ಆಧಾರ, ಬ್ಯಾಂಕ್ ಪಾಸ್ಬುಕ್ನೊಂದಿಗೆ ಖುದ್ದಾಗಿ ಹಾಜರಾಗಿ ತಮ್ಮ ಪಿಂಚಣಿಯ ವಾರ್ಷಿಕ ಪರಿಶೀಲನೆ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೊಸಪೇಟೆ ಗ್ರೇಡ್-2 ತಹಶೀಲ್ದಾರ್ ಅವರು ತಿಳಿಸಿದ್ದಾರೆ.
BIG NEWS : ಶೀಘ್ರದಲ್ಲೇ ಯುಕೆ ಪ್ರಜೆಗಳಿಗೆ ಭಾರತದ ಇ-ವೀಸಾ ಸೇವೆ ಲಭ್ಯ : ಭಾರತೀಯ ಹೈಕಮಿಷನ್ ಮಾಹಿತಿ
ಹೊಸಪೇಟೆ ತಹಶೀಲ್ದಾರರ ಕಚೇರಿ, ಕಮಲಾಪುರ ನಾಡಕಚೇರಿ, ಮರಿಯಮ್ಮನಹಳ್ಳಿ ನಾಡಕಚೇರಿಗಳಿಗೆ ಪಿಂಚಣಿದಾರರು ಖುದ್ದಾಗಿ ಹೋಗಿ ವಾರ್ಷಿಕ ಪರಿಶೀಲನೆಯನ್ನು ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಯೋಜನೆಯಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಿ ಡಿ.30ರ ನಂತರ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಗಳಲ್ಲಿ ಫಲಾನುಭವಿಗಳು ತಮ್ಮ ಅಧಾರ್ ಮತ್ತು ಬ್ಯಾಂಕ್/ಅಂಚೆ ಖಾತೆ ವಿವರಗಳನ್ನು ಸಲ್ಲಿಸಿದ ನಂತರ ಮರುಚಾಲನೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
BIGG NEWS : ಜ.27 ರಿಂದ ಮೂರು ದಿನ ಅದ್ಧೂರಿ `ಹಂಪಿ ಉತ್ಸವ’ ಆಚರಣೆ : ಸಚಿವೆ ಶಶಿಕಲಾ ಜೊಲ್ಲೆ