ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಹೆಚ್ಚಿನ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆ ಕಾರ್ಯ ಪೂರ್ಣವಾಗಿದ್ದು ಮುಸುಕಿನ ಜೋಳ ಮತ್ತು ರಾಗಿ ಬೆಳೆ ಬಿತ್ತನೆ ಕಾರ್ಯ ಚುರುಕಾಗಿರುತ್ತದೆ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ಮುಸುಕಿನ ಜೋಳ, ತೂಗರಿ, ಅಲಸಂದಿ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮವಹಿಸಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೂಳ್ಳಲು ಕೋರಿದೆ.
ಜಿಲ್ಲೆಗೆ ಅವಶ್ಯವಿರುವ ವಿವಿಧ ರಸಗೊಬ್ಬರಗಳನ್ನು ದಾಸ್ತಾನೀಕರಿಸಿದ್ದು, ಪ್ರಸ್ತುತ ಯೂರಿಯಾ 3299.0 ಮೆ.ಟನ್, ಪೂಟಾಷ್ 220.0 ಮೆ.ಟನ್, ಕಾಂಪ್ಲೆಕ್ಸ್ 5778 ಮೆ.ಟನ್. ಪ್ರಮುಖವಾಗಿ ಡಿ.ಎ.ಪಿ ರಸಗೊಬ್ಬರವನ್ನು ಬಾಗೇಪಲ್ಲಿ ತಾಲ್ಲೂಕು 96.0 ಮೆ.ಟನ್. ಚಿಕ್ಕಬಳ್ಳಾಪುರ ತಾಲ್ಲೂಕು 250.0 ಮೆ.ಟನ್, ಚಿಂತಾಮಣಿ 118.0 ಮೆ.ಟನ್, ಗೌರಿಬಿದನೂರು 141.0 ಮೆ.ಟನ್. ಗುಡಿಬಂಡೆ 17.0 ಮೆ.ಟನ್, ಮತ್ತು ಶಿಡ್ಲಘಟ್ಟ 117.0 ಮೆ.ಟನ್ ಒಟ್ಟು 739.0 ಮೆ.ಟನ್ಷ್ಟು ಡಿ,ಎ,ಪಿ ರಸಗೊಬ್ಬರವನ್ನು ಜಿಲ್ಲೆಯ ಎಲ್ಲಾ ನಮ್ಮ ಗ್ರೋಮೋರ್ ಸೆಂಟರ್ಸ್ ಮತ್ತು ಇತರೆ ಖಾಸಗಿ ಕೃಷಿ ಪರಿಕರ ಮಾರಾಟಗಾರರಲ್ಲಿ ದಾಸ್ತಾನಿಕರಿಸಿದ್ದು, ಇನ್ನು 200.0 ಮೆ.ಟನ್ ಡಿ.ಎ.ಪಿ ರಸಗೂಬ್ಬರ ಸರಬರಾಜು ಹಂತದಲ್ಲಿರುತ್ತದೆ. ಒಟ್ಟಾರೆಯಾಗಿ ಈ ವಾರದಲ್ಲಿ ಸುಮಾರು 900-1000 ಮೆ.ಟನ್ ಡಿ.ಎ.ಪಿ ರಸಗೊಬ್ಬರವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಅವಶ್ಯ ಡಿ.ಎ.ಪಿ ರಸಗೊಬ್ಬರ ದಾಸ್ತಾನಿದ್ದು, ಕಾಲಕಾಲಕ್ಕೆ ಸರಬರಾಜು ಸಹ ಮಾಡಲು ಕ್ರಮವಹಿಸಿರುವುದರಿಂದ ರೈತರು ಹೆಚ್ಚಿನ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲವೆಂದು ಈ ಮೂಲಕ ರೈತರ ಗಮನಕ್ಕೆ ತರಬಯಸಿದೆ.
Good News : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ `KPSC’ಯಿಂದ 72 ರೇಷ್ಮೆ ವಿಸ್ತರಣಾಧಿಕಾರಿ ನೇಮಕಾತಿಗೆ ಅಧಿಸೂಚನೆ
ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಿ.ಓ.ಎಸ್ ಮಶೀನ್ ಮುಖಾಂತರವೇ ರೈತರ ಆಧಾರ್ಕಾರ್ಡ್ ಪಡೆದು ಮಾರಾಟ ಮಾಡಲು ತಿಳಿಸಿದೆ. ರಸಗೊಬ್ಬರ (ನಿಯಂತ್ರಣ) ಆದೇಶ-1985 ರಲ್ಲಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಕಟ್ಟುನಿಟ್ಟಾದ ಕಾನೂನು ಕ್ರಮ ಜರುಗಿಸಿ ಕೇಸ್ ದಾಖಲಿಸಲಾಗುವುದೆಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಸಗೊಬ್ಬರ ಪೂರೈಕೆ ಕುರಿತು ಹೆಚ್ಚಿನ ಮಾಹಿತಿಗಾಗಿ ಚಿಕ್ಕಬಳ್ಳಾಪುರ-9731207959, ಗೌರಿಬಿದನೂರು-8277930834, ಗುಡಿಬಂಡೆ-8277930810, ಬಾಗೇಪಲ್ಲಿ-8277930828, ಚಿಂತಾಮಣಿ-8277930811, ಶಿಡ್ಲಘಟ್ಟ-8277930857 ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರುಗಳನ್ನು ಸಂಪರ್ಕಿಸಲು ಕೋರಿದೆ.