ಚೆನ್ನೈ: ತಮಿಳುನಾಡಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ತನ್ನ ಉದ್ದೇಶಿತ ಮೆರವಣಿಗೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ರದ್ದುಗೊಳಿಸಲು ನಿರ್ಧರಿಸಿದೆ. ರಸ್ತೆಯ ಬದಲು, ಕಾಂಪೌಂಡ್ ಇರುವ ಮೈದಾನ ಅಥವಾ ಕ್ರೀಡಾಂಗಣದಂತಹ ಆವರಣದಲ್ಲಿ ಮಾತ್ರವೇ ಆರೆಸ್ಸೆಸ್ ಮೆರವಣಿಗೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ ಆರೆಸ್ಸೆಸ್ ಈ ನಿರ್ಧಾರ ಕೈಗೊಂಡಿದೆ.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ
ಈ ಆದೇಶವನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆರೆಸ್ಸೆಸ್ ಸಂಘಟನೆ ಹೇಳಿದೆ. ಮೆರವಣಿಗೆಗೆ ಕೋರ್ಟ್ ವಿಧಿಸಿರುವ ನಿರ್ಬಂಧಗಳ ಬಗ್ಗೆ ಆರೆಸ್ಸೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ತಮಿಳುನಾಡಿನ 44 ಸ್ಥಳಗಳಲ್ಲಿ ನ. 6ರ ಭಾನುವಾರ ಮೆರವಣಿಗೆಗಳನ್ನು ನಡೆಸಲು ಮದ್ರಾಸ್ ಹೈಕೋರ್ಟ್ ಶುಕ್ರವಾರವಷ್ಟೇ ಷರತ್ತುಬದ್ಧ ಅನುಮತಿ ನೀಡಿತ್ತು. ಇದಕ್ಕೂ ಮುನ್ನ, ಮೆರವಣಿಗೆ ನಡೆಸಲು ಬಲಪಂಥೀಯ ಸಂಘಟನೆ 50 ಸ್ಥಳಗಳಲ್ಲಿ ಅನುಮತಿ ಕೋರಿದ್ದರೆ, ತಮಿಳುನಾಡು ಸರ್ಕಾರ ಕೇವಲ ಮೂರು ಕಡೆ ಮೆರವಣಿಗೆಗೆ ಅನುಮತಿ ಕೊಟ್ಟಿತ್ತು. ಆರೆಸ್ಸೆಸ್ ಶಾಂತಯುತವಾಗಿ ಮೆರವಣಿಗೆ ನಡೆಸಬೇಕು. ಇಲ್ಲವೇ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿತ್ತು.
“ರಸ್ತೆ ಮೆರವಣಿಗೆಗಳು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ ಮತ್ತು ಇತರೆ ಸ್ಥಳಗಳಲ್ಲಿ ಮುಕ್ತವಾಗಿ ನಡೆಯುತ್ತವೆ. ನಾವು ನ. 6ರಂದು ತಮಿಳುನಾಡಿನಲ್ಲಿ ನಮ್ಮ ರಸ್ತೆ ಮೆರವಣಿಗೆಗಳನ್ನು ನಾವು ನಡೆಸುವುದಿಲ್ಲ. ನಾವು ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಆರೆಸ್ಸೆಸ್ ಹೇಳಿಕೆ ತಿಳಿಸಿದೆ.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ
ಗುಪ್ತಚರ ಮಾಹಿತಿಳ ಆಧಾರದಲ್ಲಿ ಕೊಯಮತ್ತೂರು, ಪೊಲ್ಲಾಚಿ ಮತ್ತು ನಾಗರಕೋಯಿಲ್ ಸೇರಿದಂತೆ ಕೋಮು ಸೂಕ್ಷ್ಮವಾದ ಆರು ಸ್ಥಳಗಳಲ್ಲಿ ಅನುಮತಿಗೆ ಕೋರ್ಟ್ ನಿರಾಕರಿಸಿತ್ತು. ಬೇಹುಗಾರಿಕೆ ಸಂಸ್ಥೆಗಳ ವರದಿಯಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ. ಹೀಗಾಗಿ ಉಳಿದ ಈ ಆರು ಸ್ಥಳಗಳಲ್ಲಿಯೂ ಮೆರವಣಿಗೆ ನಡೆಸಲು ಆರೆಸ್ಸೆಸ್ಗೆ ಎರಡು ತಿಂಗಳ ಬಳಿಕ ಅನುಮತಿ ಕೋರಬಹುದು ಎಂದು ಕೋರ್ಟ್ ಅವಕಾಶ ನೀಡಿದೆ.
ಅಕ್ಟೋಬರ್ 2ರಂದು ಕೋರ್ಟ್ ಅನುಮತಿ ನೀಡಿದ್ದರೂ, ಮೆರವಣಿಗೆಗೆ ತಮಿಳುನಾಡಿನ ಡಿಎಂಕೆ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದರ ವಿರುದ್ಧ ಆರೆಸ್ಸೆಸ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಪಿಎಫ್ಐ ಸಂಘಟನೆಯ ನಿಷೇಧದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಆತಂಕವನ್ನು ರಾಜ್ಯ ಸರ್ಕಾರ ಮುಂದಿಟ್ಟಿತ್ತು.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ
ದೀಪಾವಳಿಗೂ ಹಿಂದಿನ ದಿನ ಕೊಯಮತ್ತೂರಿನಲ್ಲಿ ಕಾರ್ ಸ್ಫೋಟ ಸಂಭವಿಸಿತ್ತು. ಆರಂಭದಲ್ಲಿ ಇದು ಸಿಲಿಂಡರ್ ಸ್ಫೋಟ ಘಟನೆ ಎಂದು ಭಾವಿಸಲಾಗಿತ್ತು. ಆದರೆ ಜಮೀಶಾ ಮುಬಿನ್ ಎಂಬಾತ ಐಸಿಸ್ನ ಭಾಗವಾಗಿದ್ದು, ಆತ ಬೃಹತ್ ದಾಳಿಗೆ ಸಂಚು ನಡೆಸಿದ್ದ ಎನ್ನುವುದು ಬಯಲಾಗಿದೆ. ಈ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದೆ.
ತಮಿಳುನಾಡಿನಲ್ಲಿ ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರ ಮೇಲೆ ಇತ್ತೀಚಿನ ದಿನಗಳಲ್ಲಿ ನಿರಂತರ ದಾಳಿಗಳು ನಡೆಯುತ್ತಿವೆ. ಸಂಘಟನೆಯ ಕಚೇರಿ, ನಾಯಕರ ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಅನೇಕ ಘಟನೆಗಳು ವರದಿಯಾಗಿದ್ದವು. ಇವುಗಳ ನಡುವೆ ಆರೆಸ್ಸೆಸ್ ತನ್ನ ಬಲಪ್ರದರ್ಶನಕ್ಕೆ ಮುಂದಾಗಿತ್ತು.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ