ಮಂಡ್ಯ : ಖಾಸಗಿ ಶಾಲಾ ಶಿಕ್ಷಕಿಯನ್ನು ಮಣ್ಣಲ್ಲಿ ಓಟು ಹಾಕಿರುವ ಪ್ರಕರಣಕ್ಕೆ ಇದೀಗ ಬಿಗ್ ಟ್ರಸ್ಟ್ ಸಿಕ್ಕಿದ್ದು ಪರಿಚಯಸ್ತ ಯುವಕನಿಂದಲೇ ಶಾಲಾ ಶಿಕ್ಷಕಿಯ ಹತ್ತೆ ನಡೆದಿದೆ ಎಂದು ಇದೀಗ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಜನವರಿ 20ರಂದು ಮೃತ ಶಿಕ್ಷಕಿ ದೀಪಿಕಾ ಮಧ್ಯಾಹ್ನ 12 ಗಂಟೆಗೆ ಯುವತಿಗೆ ಯುವಕನ ಕರೆ ಬಂದಿದ್ದು ಗ್ರಾಮದ ಯುವಕನ ಮೇಲೆ ಪೋಷಕರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದರೆ. ಪೊಲೀಸರ ತನಿಖೆಯಲ್ಲಿ ಯುವಕನ ಕೊನೆಯ ಕರೆ ಕುರಿತು ಇದೀಗ ಪತ್ತೆಯಾಗಿದೆ. ಇದೀಗ ಯುವಕ ಘಟನೆ ನಡೆದ ದಿನದಿಂದ ನಾಪತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ನಾಪತ್ತೆಯಾಗಿರುವ ಯುವಕ ಪರಿಚಯಸ್ಥ ಯುವಕ ಎಂದು ಹೇಳಲಾಗುತ್ತಿದ್ದು, ಆತನೇ ಹತ್ಯೆಯನ್ನು ಮಾಡಿದ್ದಾನೆ ಎಂಬುದು ಕೂಡ ತಿಳಿದು ಬಂದಿದೆ. ಜನವರಿ 20ರ ನಂತರ ದೀಪಿಕಾ ಶಾಲೆ ಮುಗಿಸಿಕೊಂಡು ಬರುವಾಗ ಅಡ್ಡಗಟ್ಟಿ ಹತ್ಯೆಗೈದು ಬೆಟ್ಟದ ತಪಲಿನಲ್ಲಿ ಗುಂಡಿನ ತೆಗೆದು ಶವವನ್ನು ಮುಚ್ಚಿದ್ದಾನೆ. ಇದೀಗ ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ?
ಮಂಡ್ಯ ಜಿಲ್ಲೆಯಲ್ಲಿ ಒಂದು ರಾಜ್ಯವೇ ಬೆಚ್ಚಿ ಬಿಳಿಸುವಂತಹ ದುರ್ಘಟನೆ ನಡೆದಿದ್ದು ಖಾಸಗಿ ಶಾಲೆಯ ಶಿಕ್ಷಕಿಯನ್ನ ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿರುವಂತಹ ಘಟನೆ ನಡೆದಿದೆ.
ಶಿಕ್ಷಕಿಯನ್ನ ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿರುವ ದುಷ್ಕರ್ಮಿಗಳು ಮೇಲುಕೋಟೆಯ ಎಸ್ ಇ ಟಿ ಶಾಲೆಯ ಶಿಕ್ಷಕಿ ದೀಪಿಕಾ (28) ಶವ ಪತ್ತೆಯಾಗಿದೆ. ಮೃತ ಶಿಕ್ಷಕಿ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ನಿವಾಸಿ ಎಂದು ಹೇಳಲಾಗುತ್ತಿದೆ.
ಜನವರಿ 20 ರಂದು ಶಿಕ್ಷೆಗೆ ಶಾಲೆಗೆ ಹೋಗಿದ್ದು ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ. ಸಂಜೆ ಮಗಳನ್ನ ಪತ್ತೆ ಬಗ್ಗೆ ಪೋಷಕರು ದೂರು ಸಲ್ಲಿಸಿದ್ದರು.ಮೇಲ್ಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತಂತೆ ಪ್ರಕರಣ ದಾಖಲಾಗಿತ್ತು. ನಿನ್ನೆ ಸಂಜೆ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿದೆ. ಘಟನೆ ಕುರಿತಂತೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.