ನವದೆಹಲಿ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB), ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯನ್ನು ತಮ್ಮ ಬಹಿಷ್ಕಾರವನ್ನ ಕೊನೆಗೊಳಿಸಿ ಫೆಬ್ರವರಿ 15ರಂದು ಭಾರತದ ವಿರುದ್ಧ ಕಣಕ್ಕಿಳಿಯುವಂತೆ ವಿನಂತಿಸಿದೆ ಎಂದು ವರದಿಯಾಗಿದೆ. PCB ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಬಹಿಷ್ಕಾರವನ್ನ ಹಿಂತೆಗೆದುಕೊಳ್ಳುವಂತೆ ವಿನಂತಿಸಲಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನ ಸರ್ಕಾರದ ಸೂಚನೆಯ ಮೇರೆಗೆ ಭಾರತದೊಂದಿಗಿನ ಪಂದ್ಯದಿಂದ ಹಿಂದೆ ಸರಿಯಲು PCB ನಿರ್ಧರಿಸಿತ್ತು. ಅಂತಿಮ ನಿರ್ಧಾರ ಪಾಕಿಸ್ತಾನದ ಪ್ರಧಾನಿಯ ಕೈಯಲ್ಲಿದೆ. “ಬಿಕ್ಕಟ್ಟಿನ ಕುರಿತು ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗಳು ಮತ್ತು ICC ಯೊಂದಿಗೆ ತಾವು ಹೊಂದಿರುವ ಸಂವಹನಗಳ ಕುರಿತು ನಖ್ವಿ ಪ್ರಧಾನಿಗೆ ವಿವರಿಸುತ್ತಾರೆ” ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ಬಾಂಗ್ಲಾದೇಶ 2026ರ T20 WCಯ ಭಾಗವಾಗಿಲ್ಲ. ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ವಿನಂತಿಯನ್ನು ICC ನಿರಾಕರಿಸಿದ ನಂತರ ಅವರು ಪಂದ್ಯಾವಳಿಯಿಂದ ಹಿಂದೆ ಸರಿದರು. ಬಳಿಕ ಸ್ಕಾಟ್ಲೆಂಡ್ ತಂಡವನ್ನ ಈವೆಂಟ್’ನಲ್ಲಿ ಸೇರಿಸಲಾಯಿತು.
ಗಂಡ ಮಿಲಿಟರಿಯಲ್ಲಿದ್ದಾಗ ಹೆಂಡತಿ ಗರ್ಭಿಣಿಯಾದದ್ದು ಹೇಗೆ.? ಹೈಕೋರ್ಟ್ ವಿಚಾರಣೆಯಲ್ಲಿ ಶಾಕಿಂಗ್ ಸಂಗತಿಗಳು!
BREAKING: ನಾಳೆ ಬೆಳಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ
BREAKING : ಪಾಕಿಸ್ತಾನಕ್ಕೆ ಬಿಗ್ ಶಾಕ್ ; ‘PCB’ಯ ಎಲ್ಲಾ ಬೇಡಿಕೆಗಳನ್ನ ತಿರಸ್ಕರಿಸಿದ ‘ICC’








