Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಧಾರ್ ಜೊತೆ ಸ್ಟಾರ್‌ಲಿಂಕ್: ಡಿಜಿಟಲ್ ಕ್ರಾಂತಿಯತ್ತ ಹೊಸ ಹೆಜ್ಜೆ

21/08/2025 1:16 PM

ರಸ್ತೆಗಳಲ್ಲಿ `ವ್ಹೀಲಿಂಗ್’ ಮಾಡುವವರಿಗೆ ಬಿಗ್ ಶಾಕ್ : `DL, FC’ ಕಾಯಂ ರದ್ದು ಮಾಡಲು ಆದೇಶ.!

21/08/2025 1:15 PM

VIRAL VIDEO : ಚಲಿಸುತ್ತಿದ್ದ `ರಾಯಲ್ ಎನ್ಫೀಲ್ಡ್’ನಲ್ಲಿ ರೋಮ್ಯಾನ್ಸ್ ಮಾಡಿದ ಪ್ರೇಮಿಗಳು : ವಿಡಿಯೋ ವೈರಲ್

21/08/2025 1:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಸ್ತೆಗಳಲ್ಲಿ `ವ್ಹೀಲಿಂಗ್’ ಮಾಡುವವರಿಗೆ ಬಿಗ್ ಶಾಕ್ : `DL, FC’ ಕಾಯಂ ರದ್ದು ಮಾಡಲು ಆದೇಶ.!
KARNATAKA

ರಸ್ತೆಗಳಲ್ಲಿ `ವ್ಹೀಲಿಂಗ್’ ಮಾಡುವವರಿಗೆ ಬಿಗ್ ಶಾಕ್ : `DL, FC’ ಕಾಯಂ ರದ್ದು ಮಾಡಲು ಆದೇಶ.!

By kannadanewsnow5721/08/2025 1:15 PM

ಬೆಂಗಳೂರು : ರಸ್ತೆಗಳಲ್ಲಿ ವೀಲಿಂಗ್ ಮಾಡಿ ವಾಹನ ಚಲಾಯಿಸುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ವಾಹನ ಪರವಾನಿಗೆಯನ್ನು ಖಾಯಂ ಆಗಿ ರದ್ದುಗೊಳಿಸಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.

ನಗರದಲ್ಲಿ ಮಕ್ಕಳು ರಸ್ತೆ ದಾಟುವಾಗ ಆಗುವ ಅಪಘಾತಗಳು ಹೆಚ್ಚಾಗಿದ್ದು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ರಸ್ತೆ ಅಪಘಾತ ಕುರಿತು ಜಾಗೃತಿ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಮಕ್ಕಳು ರಸ್ತೆ ದಾಟುವಾಗ ಶಾಲೆಯ ಆಯಾಗಳೊಂದಿಗೆ ದಾಟುವುದು,ಶಾಲಾ ವಾಹನಗಳನ್ನು ಓಡಿಸುವ ಚಾಲಕರನ್ನು ಕಡ್ಡಾಯ ತಪಾಸಣೆ ಹಾಗೂ ವಾಹನದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯದಂತೆ ಶಾಲೆಗಳು ಮುಂಜಾಗ್ರತೆ ವಹಿಸಬೇಕೆಂದು ಹೇಳಿದರು.

ಅಪಘಾತ ನಿಯಂತ್ರಿಸಲು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಬ್ಲಾಕ್ ಸ್ಪಾಟ್ (Black spots) ಸೂಚನಾ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು.

ವಾರಂತ್ಯದಲ್ಲಿ ಹೆಬ್ಬಾಳ ಮೇಲ್ಸೇತುವೆ ಮತ್ತು ಕುಣಿಗಲ್ ರಸ್ತೆಗಳಲ್ಲಿ ಯುವಕರು ವೀಲಿಂಗ್ ಮಾಡುತ್ತಾ ಬೈಕ್ ಗಳನ್ನು ಚಲಾಯಿಸುತ್ತಿರುತ್ತಾರೆ ಇದರಿಂದ ಸಾರ್ವಜನಿಕರಿಗೆ ಸಂಚಾರಿಸಲು ತೊಂದರೆ ಆಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಆರ್ ಸಿ, ಲೈಸೆನ್ಸ್ ರದ್ದುಪಡಿಸುವಂತೆ ಸೂಚಿಸಿದರು.

ಅಪಘಾತ ಸಂಭವಿಸುವ ಸ್ಥಳಗಳಿಗೆ ತಕ್ಷಣದಲ್ಲಿ ಆಂಬುಲೆನ್ಸ್ ಸೇವೆ ಒದಗಿಸಲು ಜಿಪಿಎಸ್ ಮ್ಯಾಪಿಂಗ್ ಸ್ಥಳಗಳನ್ನು ಗುರುತಿಸಲು ಅಗತ್ಯ ರಸ್ತೆ ನಕ್ಷೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಸಭೆಯಲ್ಲಿ ತಿಂಗಳಲ್ಲಿ ಸಂಭವಿಸುವ ಒಟ್ಟು ಅಪಘಾತ ನಿಯಂತ್ರಣಕ್ಕೆ ಕ್ರಿಯಾಯೋಜನೆ ಹಾಗೂ ಕೈಗೊಂಡಿರುವ ಕ್ರಮಗಳು ಬಗ್ಗೆ ಮಾಹಿತಿಯನ್ನು ಪಿಪಿಟಿಯಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ವ್ಯವಸ್ಥಾಪಕರಾದ ಶ್ರೀನಿವಾಸ್ ಗೌಡ, ಬೆಂಗಳೂರು ನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಡಾ. ಜಗದೀಶ ಕೆ.ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಕಾಶ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿಭಾಗೀಯ ಸಾರಿಗೆ ಅಧಿಕಾರಿಯಾದ ಪ್ರತಿಮಾ, ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಸಾರಿಗೆ ಅಧಿಕಾರಿಯಾದ ಭಾಗ್ಯಲಕ್ಷ್ಮೀ ಎಂ, ಶಾಲಾ ಶಿಕ್ಷಣ ಇಲಾಖೆಯ ಉತ್ತರ ವಿಭಾಗದ ಉಪನಿರ್ದೇಶಕರಾದ ವಾಸು, ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ವಿಭಾಗದ ಉಪನಿರ್ದೇಶಕರಾದ ಸಮೀರ್ ಪಾಷಾ, ಲೋಕೋಪಯೋಗಿ ಕಾರ್ಯಪಾಲಕ ರಾಜು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರರಾದ ಶ್ರೀಕಾಂತ್, ಬ್ಲೂಮ್ ಬರ್ಗ್ (Bloomberg) ಬಿ.ಇ.ಆರ್.ಜಿ ಸಂಸ್ಥೆಯ ಅಪರಾಜಿತ ರೈ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Big shock for those who do 'bike wheeling' on the roads: Order to permanently cancel 'DL FC'
Share. Facebook Twitter LinkedIn WhatsApp Email

Related Posts

BREAKING : `ಮಹೇಶ್ ಶೆಟ್ಟಿ ತಿಮರೋಡಿ’ ಬಂಧನ : ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ.!

21/08/2025 12:39 PM1 Min Read

BREAKING : ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : `ಮಹೇಶ್ ಶೆಟ್ಟಿ ತಿಮರೋಡಿ’ಬಂಧನ

21/08/2025 12:29 PM1 Min Read

ಆಪಲ್‌ನ ಮತ್ತೊಂದು ಮಳಿಗೆ ಬೆಂಗಳೂರಿನಲ್ಲಿ, ಐಫೋನ್ 17 ಬಿಡುಗಡೆಗೂ ಮುನ್ನವೇ ಓಪನ್!

21/08/2025 11:56 AM1 Min Read
Recent News

ಆಧಾರ್ ಜೊತೆ ಸ್ಟಾರ್‌ಲಿಂಕ್: ಡಿಜಿಟಲ್ ಕ್ರಾಂತಿಯತ್ತ ಹೊಸ ಹೆಜ್ಜೆ

21/08/2025 1:16 PM

ರಸ್ತೆಗಳಲ್ಲಿ `ವ್ಹೀಲಿಂಗ್’ ಮಾಡುವವರಿಗೆ ಬಿಗ್ ಶಾಕ್ : `DL, FC’ ಕಾಯಂ ರದ್ದು ಮಾಡಲು ಆದೇಶ.!

21/08/2025 1:15 PM

VIRAL VIDEO : ಚಲಿಸುತ್ತಿದ್ದ `ರಾಯಲ್ ಎನ್ಫೀಲ್ಡ್’ನಲ್ಲಿ ರೋಮ್ಯಾನ್ಸ್ ಮಾಡಿದ ಪ್ರೇಮಿಗಳು : ವಿಡಿಯೋ ವೈರಲ್

21/08/2025 1:02 PM

ಕೇವಲ 5-6 ಗಂಟೆಗಳ ಕೆಲಸದಿಂದ 200% ಆದಾಯ ವೃದ್ಧಿ: ನೊಯ್ಡಾ ಉದ್ಯಮಿ ಹೇಳಿದ ಯಶಸ್ಸಿನ ಸೂತ್ರ

21/08/2025 1:02 PM
State News
KARNATAKA

ರಸ್ತೆಗಳಲ್ಲಿ `ವ್ಹೀಲಿಂಗ್’ ಮಾಡುವವರಿಗೆ ಬಿಗ್ ಶಾಕ್ : `DL, FC’ ಕಾಯಂ ರದ್ದು ಮಾಡಲು ಆದೇಶ.!

By kannadanewsnow5721/08/2025 1:15 PM KARNATAKA 2 Mins Read

ಬೆಂಗಳೂರು : ರಸ್ತೆಗಳಲ್ಲಿ ವೀಲಿಂಗ್ ಮಾಡಿ ವಾಹನ ಚಲಾಯಿಸುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ವಾಹನ ಪರವಾನಿಗೆಯನ್ನು ಖಾಯಂ ಆಗಿ…

BREAKING : `ಮಹೇಶ್ ಶೆಟ್ಟಿ ತಿಮರೋಡಿ’ ಬಂಧನ : ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ.!

21/08/2025 12:39 PM

BREAKING : ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : `ಮಹೇಶ್ ಶೆಟ್ಟಿ ತಿಮರೋಡಿ’ಬಂಧನ

21/08/2025 12:29 PM

ಆಪಲ್‌ನ ಮತ್ತೊಂದು ಮಳಿಗೆ ಬೆಂಗಳೂರಿನಲ್ಲಿ, ಐಫೋನ್ 17 ಬಿಡುಗಡೆಗೂ ಮುನ್ನವೇ ಓಪನ್!

21/08/2025 11:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.