Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಯೋತ್ಪಾದನೆ ವಿರುದ್ಧ ಭಾರತ, ಪರಾಗ್ವೆ ಒಗ್ಗಟ್ಟಾಗಿವೆ: ಪ್ರಧಾನಿ ಮೋದಿ

03/06/2025 10:28 AM

ಉದ್ಯೋಗ ವಾರ್ತೆ : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘SSC’ ಯಿಂದ 2423 ಹುದ್ದೆಗಳಿಗೆ ಅರ್ಜಿ ಆಹ್ವಾನ |SSC Recruitment 2025

03/06/2025 10:21 AM

Breaking: ಸೆನ್ಸೆಕ್ಸ್ 150 ಅಂಕ ಕುಸಿತ, 24,700ಕ್ಕಿಂತ ಕೆಳಗಿಳಿದ ನಿಫ್ಟಿ | Share market

03/06/2025 10:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕನ್ನಡದ ‘ಪವರ್ ಟಿವಿ’ಗೆ ಬಿಗ್ ರಿಲೀಫ್: ‘ಸುಪ್ರೀಂ ಕೋರ್ಟ್’ನಿಂದ ‘ಪ್ರಸಾರ ಸ್ಥಗಿತ’ ಆದೇಶಕ್ಕೆ ತಡೆ | Power TV
KARNATAKA

BREAKING: ಕನ್ನಡದ ‘ಪವರ್ ಟಿವಿ’ಗೆ ಬಿಗ್ ರಿಲೀಫ್: ‘ಸುಪ್ರೀಂ ಕೋರ್ಟ್’ನಿಂದ ‘ಪ್ರಸಾರ ಸ್ಥಗಿತ’ ಆದೇಶಕ್ಕೆ ತಡೆ | Power TV

By kannadanewsnow0912/07/2024 3:26 PM

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಿಂದ ಕನ್ನಡದ ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವರ್ ಟಿವಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ನಿಂದ ಹೈಕೋರ್ಟ್ ನೀಡಿದ್ದಂತ ಪ್ರಸಾರ ಸ್ಥಗಿತದ ಆದೇಶಕ್ಕೆ ತಡೆ ನೀಡಿ, ಬಿಗ್ ರಿಲೀಫ್ ನೀಡಿದೆ.

ಈ ಹಿಂದೆ ಪವರ್ ಟೀವಿ ಮೇಲೆ ಹೈಕೋರ್ಟ್ ಚಾಟಿ ಬೀಸಿತ್ತು. ಲೈಸೆನ್ಸ್ ರಿನಿವಲ್ ಮಾಡದ ಗಂಭೀರ ಆರೋಪದ ಹಿನ್ನಲೆಯಲ್ಲಿ ಪವರ್‌ ಟಿ ವಿ ಕಾರ್ಯ ಪ್ರಸಾರ ಚಟುವಟಿಕೆ ಸ್ಥಗಿತಕ್ಕೆ ಹೈಕೋರ್ಟ್‌ ಆದೇಶ ಮಾಡಿತ್ತು.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ ಉಲ್ಲಂಘನೆ ಮಾಡಲಾಗಿದೆ. ತಕ್ಷಣದಿಂದಲೇ ಚಾನೆಲ್‌ನಲ್ಲಿ ಸುದ್ದಿಗಳು ಸೇರಿ ಯಾವುದೇ ಪ್ರಸಾರ ಮಾಡಬಾರದು ಅಂತ ಹೈಕೋರ್ಟ್ ನ್ಯಾಯಮೂರ್ತಿ. ಎಸ್‌ ಆರ್‌ ಕೃಷ್ಣಕುಮಾರ್‌ ರ ಏಕಸದಸ್ಯ ಪೀಠ ಆದೇಶ ಮಾಡಿದ್ದರು.

ಜೆಡಿಎಸ್‌ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ ಎಂ ರಮೇಶ್‌ ಗೌಡರ ಪತ್ನಿ ಡಾ.ಎ ರಮ್ಯಾ ರಮೇಶ್‌ & ಹಿರಿಯ ಐಪಿಎಸ್‌ ಅಧಿಕಾರಿ ಬಿ ಆರ್‌ ರವಿಕಾಂತೇಗೌಡ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಸಂದೇಶ್‌ ಚೌಟ ವಾದಿಸಿದ್ದರು.

ರಾಕೇಶ್ ಶೆಟ್ಟಿ, ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿ ಬಿತ್ತರಿಸುತ್ತಿದ್ದಾರೆ. ಸದ್ಯ ರಾಕೇಶ್ ಶೆಟ್ಟಿ ಚಾನೆಲ್‌ನ್ನು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. 2021ರಿಂದಲೂ ಚಾನೆಲ್‌ನ ಪರವಾನಗಿ ನವೀಕರಿಸಿಲ್ಲ. ಈ ಬಗ್ಗೆ ವಿಸ್ತೃತವಾಗಿ ಪೀಠದ ಮುಂದೆ ವಾದ ಮಂಡನೆ ಮಾಡಲಾಗಿತ್ತು.

ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠವು, ರಾಕೇಶ್‌ ಶೆಟ್ಟಿ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಇದಕ್ಕೆ ತಕ್ಷಣದಿಂದಲೇ ಸುದ್ದಿ ಸೇರಿ ಯಾವುದೇ ಪ್ರಸಾರ ಮಾಡಬಾರದು ಅಂತ ಆದೇಶಿಸಿತ್ತು. ಆ ಬಳಿಕ ಪ್ರಸಾರ ಸ್ಥಗಿತದ ಆದೇಶವನ್ನು ಮತ್ತೆ ಹೈಕೋರ್ಟ್ ವಿಸ್ತರಿಸಿತ್ತು.

ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪವರ್ ಟಿವಿಯ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಹೈಕೋರ್ಟ್ ಗೆ ಸ್ಥಗಿತದ ಆದೇಶ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು.

ಸೂಕ್ತ ಪರವಾನಗಿ ಇಲ್ಲ ಎಂಬ ಕಾರಣಕ್ಕಾಗಿ ಪವರ್ ಟಿವಿ ಪ್ರಸಾರವನ್ನು ನಿಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಪ್ರಸಾರ ತಡೆ ಆದೇಶಕ್ಕೆ ತಡೆ ನೀಡಿದೆ.

ಪವರ್ ಟಿವಿ ಪ್ರಸಾರ ನಿಲ್ಲಿಸಿರುವುದು ಮಾಧ್ಯಮದ ಹಕ್ಕು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ.

ಈ ಬೆಳವಣಿಗೆ ಗಮನಿಸಿದರೆ ಮಾಧ್ಯಮದ ಹಕ್ಕು ಕಸಿಯುವ ರಾಜಕೀಯ ವೇದಾಂತ ಅಡಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಮಾಧ್ಯಮದ ಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಮೂಲಕ ಪವರ್ ಟಿವಿಗೆ ಬಿಗ್ ರಿಲೀಫ್ ನೀಡಿದಂತೆ ಆಗಿದೆ.

‘ಇ-ಆಫೀಸ’ನ್ನು ಅನುಷ್ಠಾನಗೊಳಿಸದ ಅಧಿಕಾರಿಗಳಿಗೆ ಬಿಗ್ ಶಾಕ್: ‘ಕಂದಾಯ ಇಲಾಖೆ’ಯಿಂದ ನೋಟಿಸ್

BREAKING: ‘ಅಗಲಿದ ಅಪರ್ಣಾ’ ಪಂಚಭೂತಗಳಲ್ಲಿ ಲೀನ: ‘ಅಚ್ಚಕನ್ನಡ ನಿರೂಪಕಿ’ ಇನ್ನೂ ‘ನೆನಪು’ ಮಾತ್ರ | Anchor Aparna

Share. Facebook Twitter LinkedIn WhatsApp Email

Related Posts

ನಿಮ್ಮ ಜನ್ಮ ಕುಂಡಲಿ ರಚನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

03/06/2025 9:41 AM2 Mins Read

BREAKING : ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು.!

03/06/2025 9:33 AM1 Min Read

ಈ ಸಲ ಕಪ್ ನಮ್ದೆ : ರಕ್ತದಲ್ಲಿ `ವಿರಾಟ್ ಕೊಹ್ಲಿ’ ಚಿತ್ರ ಬಿಡಿಸಿದ ಅಭಿಮಾನಿ, ಫೋಟೋ ವೈರಲ್.!

03/06/2025 9:23 AM2 Mins Read
Recent News

ಭಯೋತ್ಪಾದನೆ ವಿರುದ್ಧ ಭಾರತ, ಪರಾಗ್ವೆ ಒಗ್ಗಟ್ಟಾಗಿವೆ: ಪ್ರಧಾನಿ ಮೋದಿ

03/06/2025 10:28 AM

ಉದ್ಯೋಗ ವಾರ್ತೆ : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘SSC’ ಯಿಂದ 2423 ಹುದ್ದೆಗಳಿಗೆ ಅರ್ಜಿ ಆಹ್ವಾನ |SSC Recruitment 2025

03/06/2025 10:21 AM

Breaking: ಸೆನ್ಸೆಕ್ಸ್ 150 ಅಂಕ ಕುಸಿತ, 24,700ಕ್ಕಿಂತ ಕೆಳಗಿಳಿದ ನಿಫ್ಟಿ | Share market

03/06/2025 10:14 AM

BIG NEWS : ಅಯೋಧ್ಯೆ ರಾಮಮಂದಿರ ಮತ್ತೊಂದು ಕ್ಷಣಕ್ಕೆ ಸಜ್ಜು : ಇಂದು `ಸ್ವರ್ಣಗೋಪುರ’ ಉದ್ಘಾಟನೆ | WATCH VIDEO

03/06/2025 10:11 AM
State News
KARNATAKA

ನಿಮ್ಮ ಜನ್ಮ ಕುಂಡಲಿ ರಚನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

By kannadanewsnow0903/06/2025 9:41 AM KARNATAKA 2 Mins Read

ಒಬ್ಬ ವ್ಯಕ್ತಿಯು ಜನಿಸಿದ ಸಮಯದಲ್ಲಿ ಗ್ರಹಗಳ ಸ್ಥಾನಗಳು ಮತ್ತು ನಕ್ಷತ್ರಪುಂಜಗಳ ಆಧಾರದ ಮೇಲೆ ಜನ್ಮ ಕುಂಡಲಿ ರಚನೆಯಾಗುತ್ತದೆ. ಈ ಜಾತಕವನ್ನು…

BREAKING : ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು.!

03/06/2025 9:33 AM

ಈ ಸಲ ಕಪ್ ನಮ್ದೆ : ರಕ್ತದಲ್ಲಿ `ವಿರಾಟ್ ಕೊಹ್ಲಿ’ ಚಿತ್ರ ಬಿಡಿಸಿದ ಅಭಿಮಾನಿ, ಫೋಟೋ ವೈರಲ್.!

03/06/2025 9:23 AM

BIG NEWS : ಬುಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್, ದೀಪಾ ಬಾಸ್ತಿಗೆ 10 ಲಕ್ಷ ರೂ. ಬಹುಮಾನ : CM ಸಿದ್ದರಾಮಯ್ಯ ಘೋಷಣೆ.!

03/06/2025 8:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.