ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಹುಚ್ಚಾಟ ನಡೆಸಿದ್ದು ತಪಾಸಣೆಯ ವೇಳೆ ಬ್ಯಾಂಕ್ ನಲ್ಲಿ ಬಾಂಬ್ ಇದೆ ಎಂದು ಆತಂಕ ಸೃಷ್ಟಿಸಿ ನಂತರ ತಮಾಷೆಯಾಗಿ ಹೇಳಿದೆ ಎಂದು ಹುಚ್ಚಾಟ ಮೆರೆದಿದ್ದಾನೆ.
ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ ಆರೋಪಿ, ನಂತರ ಬ್ಯಾಗ್ ಪರಿಶೀಲಿಸಿ ಬಾಂಬ್ ಇಲ್ಲ ಎಂದು ಸಿಬ್ಬಂದಿ ಖಚಿತಪಡಿಸಿದೆ.ಈ ವೇಳೆ ಜೋಕ್ ಮಾಡಿದ್ದೇನೆ ಎಂದು ಆರೋಪಿ ಸಜ್ಜು ಕುಮಾರ್ ತಿಳಿಸಿದ್ದಾನೆ.ಉದ್ಧಟತನ ತೋರಿ ಆತಂಕ ಸೃಷ್ಟಿಸಿದ ಆರೋಪಿ ಸಜ್ಜು ಕುಮಾರನ್ನು ಇದೀಗ ವಶಕ್ಕೆ ಪಡೆಯಲಾಗಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ ಆರೋಪಿನ ವಶಪಡಿಕೊಂಡಿದ್ದು, ಆರೋಪಿಯನ್ನು ಏರ್ಪೋರ್ಟ್ ಪೊಲೀಸರ ವಶಕ್ಕೆ ನೀಡಿದ ಸಿಐಎಸ್ಎಫ್. ಸಜೀವಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದ್ದು, ಕೇರಳದ ಕೊಚ್ಚಿಗೆ ತೆರಳಲು ಸಜ್ಜು ಕುಮಾರ್ ಬಂದಿದ್ದ ಎನ್ನಲಾಗಿದೆ ಕೆಂಪೇಗೌಡ ಏರ್ಪೋರ್ಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.