ಬೆಂಗಳೂರು : ನಾವು ಇನ್ನೂ 5,000 ಕಾರ್ಯಕ್ರಮಗಳನ್ನು ಮಾಡುತ್ತೇವೆ ದ್ವೇಷ ಭಾಷಣಗಳನ್ನು ಮಾಡುತ್ತೇವೆ. ಈ 5000 ದ್ವೇಷ ಭಾಷಣಗಳು ರಾಜ್ಯದಲ್ಲಿ ಆಳುವ ಅರಸರಿಗೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟ್ರೀಯ ಸ್ವಯಂಸೇವಾ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆದಿದ್ದು, ಸಮಾಜೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭಾಷಣ ಮಾಡಿದರು. ದೇಶಕ್ಕಾಗಿ ಬದುಕುವುದು ಕ್ಷಣಿಕವಾದ ಸಂಗತಿ ಅಲ್ಲ. ಆರ್ ಎಸ್ ಎಸ್ ತನಗೋಸ್ಕರ ಏನನ್ನು ಮಾಡಿಕೊಳ್ಳುವುದಿಲ್ಲ. ಹೊಗಳಿಕೆಗೋಸ್ಕರ ಆರ್ಎಸ್ಎಸ್ ಏನು ಮಾಡಿಕೊಳ್ಳುವುದಿಲ್ಲ.
ಇಂದಿನ ಕಾರ್ಯಕ್ರಮಕ್ಕೆ ಮೈದಾನ ಪಡೆಯಲು ಓಡಾಡಿಸಿದರು ಹಿಂದೂ ಸಮಾಜ ಎದ್ದಿದೆ ತನ್ನ ಕಾಲುಗಳ ಮೇಲೆ ಎದ್ದು ನಿಂತಿದೆ ನೀವು ಮೈದಾನ ಕೊಡದಿದ್ದರೆ ರಸ್ತೆಗಳನ್ನೇ ಮೈದಾನ ಮಾಡುತ್ತೇವೆ. ನಾವು ಇನ್ನು 5000 ಕಾರ್ಯಕ್ರಮಗಳನ್ನು ಮಾಡುತ್ತೇವೆ. ನಾವು ದ್ವೇಷ ಭಾಷಣಗಳನ್ನು ಮಾಡುತ್ತೇವೆ ಕರ್ನಾಟಕವನ್ನು ಆಳುವ ಅರಸರಿಗೆ ಇದು ಸಾವಿರ ದ್ವೇಷ ಭಾಷಣಗಳು ಒಂದಲ್ಲ ಒಂದು ದಿನ ನೀವು ಭಾರತ ಮಾತಾ ಕಿ ಜೈ ಅನ್ನಬೇಕು ಹರಹರ ಮಹಾದೇವ ಅನ್ನಬೇಕು ನಮ್ಮ ಜೊತೆಗೆ ಬರಬೇಕು ಹಿಂದುತ್ವ ಹಾಗೂ ಹಿಂದೂ ರಾಷ್ಟ್ರ ಯಾರ ವಿರುದ್ಧವೂ ಅಲ್ಲ ಎಂದು ಬಿ ಎಲ್ ಸಂತೋಷ್ ತಿಳಿಸಿದರು.
ಟಿಪ್ಪು ಸುಲ್ತಾನ್ 1 ಲಕ್ಷ ಜನರನ್ನ ಕೊಂದ ಎಂಬುದು ದ್ವೇಷ ಭಾಷಣ ಅಲ್ಲ. ಅದು ಇತಿಹಾಸ ನಿಮಗೆ ಅದು ಸಹಿಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ದ್ವೇಷ ಭಾಷಣ ಎನ್ನಬಹುದು. ಹಿಂದೂಗಳ ಸಂಖ್ಯೆ ಕಡಿಮೆ ಆಗಿದ್ದಕ್ಕೆ ಗೌರಿಪಾಳ್ಯ, ಗೌರಿಪಾಳ್ಯ ಘಟನೆ ಆಯ್ತು. ಹಿಂದೂಗಳ ಸಂಖ್ಯೆ ಕಡಿಮೆ ಆದರೆ ಆ ರಸ್ತೆಯಲ್ಲಿ ಹೋಗಲು ಆಗಲ್ಲ, ಗಣೇಶ ಮೆರವಣಿಗೆ ಹೋಗಲ್ಲ, ಧರ್ಮನುಸಾರದಲ್ಲಿ ಪೂಜೆಗೆ ಹೋಗಲಾಗಲ್ಲ, ಆ ರಸ್ತೆಯಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ ಪೂಜೆಗೆ ಹೋಗಲು ಆಗುವುದಿಲ್ಲ. ಚಾಮರಾಜಪೇಟೆ ಶಿವಾಜಿನಗರದಲ್ಲಿ ಹಿಂದೂ ಅಭ್ಯರ್ಥಿ ಏಕೆ ಗೆಲ್ಲಲ್ಲ? ಹಿಂದುಗಳ ಸಂಖ್ಯೆ ಹೆಚ್ಚಿರುವಲ್ಲಿ ಕ್ರಿಶ್ಚಿಯನ್ ಮುಸ್ಲಿಮರು ಗೆಲ್ಲುತ್ತಾರೆ. ಹಿಂದುಗಳ ಸಂಖ್ಯೆ ಕಡಿಮೆ ಇರುವಲ್ಲಿ ಹಿಂದುಗಳು ಗೆಲ್ಲಲು ಆಗಲ್ಲ ಎಂದರು.








