ಬೆಂಗಳೂರು : ಕಮಲ್ ಹಾಸನ್ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ. ಭಾಷೆಗೆ ಜಾತಿಗೆ ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತಾ? ಯಾವುದೋ ಒಂದು ರೂಪಕ್ಕೆ ತಿರುಗಿದರೆ ಯಾರು ಹೊಣೆ? ಸಣ್ಣ ಸಣ್ಣ ವಿಚಾರದಲ್ಲಿ ಅವರು ತಪ್ಪು ಮಾಡಿದ್ದಾರೆ ಕ್ಷಮೆ ಕೇಳುತ್ತಾರೆ. ನಮ್ಮವರು ಮಿತಿಯಲ್ಲಿ ಇರಬೇಕು ನಮ್ಮ ರಾಜ್ಯದ ಹಿತಕ್ಕಾಗಿ ಇರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಅವರು ಕೋರ್ಟ್ ಗೆ ಸಿನೆಮಾ ಬಿಡುಗಡೆ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಅಭಿಪ್ರಾಯಪಟ್ಟಿದೆ. ನಾವೆಲ್ಲ ದ್ರಾವಿಡ ಭಾಗಕ್ಕೆ ಸೇರಿದವರು. ನಾವು ಮಾತಾಡಬೇಕಾದರೆ ಕೆಲವು ತೆಲುಗು ತಮಿಳು ಅಕ್ಷರ ಬರುತ್ತದೆ. ಆದರೆ ಕಮಲ್ ಹಾಸನ್ ಪರವಾಗಿ ಯಾವುದೇ ಮೃದು ಧೋರಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಬೆಂಗಳೂರಿನಿಂದ ಹೊಸೂರಿಗೆ ನಿದ್ದೆ 50 ಸಾವಿರ ಜನ ಹೋಗುತ್ತಾರೆ. ಹೊಸೂರಿನಿಂದಲೂ ಬೆಂಗಳೂರಿಗೆ ಸಾವಿರಾರು ಜನರು ಬರುತ್ತಾರೆ. ನಾವು ಸೂಜಿ ಬಿಜೆಪಿ ಕತ್ತರಿ ನಾವು ಹೊಲಿಯುವ ಕೆಲಸ ಮಾಡುತ್ತೇವೆ. ಕಮಲ್ ಹಾಸನ್ ವೈಯಕ್ತಿಕವಾಗಿ ಬಹಳ ಹಠದಲ್ಲಿ ಇದ್ದಾರೆ. ನಮ್ಮವರು ಮಿತಿಯಲ್ಲಿ ಇರಬೇಕು ನಮ್ಮ ರಾಜ್ಯದ ಹಿತಕ್ಕಾಗಿ ಇರಬೇಕು ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.