ಹಾವೇರಿ : ನೆರೆಯಿಂದ ಮಳೆ ನೆರೆಯಿಂದ ಮನೆ ಹಾನಿ ಪರಿಹಾರ ಮಂಜೂರಾತಿಗೆ ಲಂಚ ನೀಡಿರುವ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯ ಚಿನ್ನ ಅಡವಿಟ್ಟು ಲಂಚ ನೀಡಿದ್ದೆ ಎಂದು ತಹಶೀಲ್ದಾರ್ ಗೆ ದೂರು ನೀಡಿದ ದಂಪತಿಗಳು ಇದೀಗ ನಮಗೇನು ಗೊತ್ತೇ ಇಲ್ಲ ಅಂತ ಉಲ್ಟಾ ಹೊಡೆದಿದ್ದಾರೆ.
ಹೌದು ನೆರೆಯಿಂದ ಮಳೆ ನೆರೆಯಿಂದ ಮನೆ ಹಾನಿ ಪರಿಹಾರ ಮಂಜೂರಾತಿಗೆ ಲಂಚ ನೀಡಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಲಂಚ ಪಡೆದಿದ್ದ ಎಸ್ ಡಿ ಎ ನೌಕರ ಮದನ್ ಮೋಹನ ರಕ್ಷಣೆಗೆ ಅಧಿಕಾರಿಗಳು ನಿಂತಿದ್ದಾರೆ. ಎಸ್ಡಿಎ ಮದನ್ ಗೆ ಲಂಚ ನೀಡಿದ್ದಾಗಿ ಮಹಾಂತೇಶ್ ಎನ್ನುವವರು ದೂರು ನೀಡಿದ್ದರು. ಹಾವೇರಿ ತಾಲೂಕಿನ ಬೆಳವಿಗೆ ಗ್ರಾಮದ ಮಹಾಂತೇಶ್ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಜೊತೆಗೆ ತೆರಳಿತಶೀಲ್ದಾರ್ ಅವರಿಗೆ ದೂರು ನೀಡಿದ್ದರು.
ಪತ್ನಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಅಡವಿಟ್ಟು ಆ ಹಣದಲ್ಲಿ ಲಂಚ ನೀಡಿದ್ದೆ. ಗುತ್ತಲದ ಫೈನಾನ್ಸ್ ನಲ್ಲಿ ಚಿನ್ನ ಅಡವಿಟ್ಟು ಸಾಲ ತಂದು ಲಂಚ ನೀಡಿದ್ದೆ. ಹಾವೇರಿ ತಾಲೂಕು ಕಚೇರಿ ಎಸ್ಡಿಎ ಮದನ್ ಮೋಹನ್ಗೆ ಕ್ಯಾಂಟೀನ್ನಲ್ಲಿ 20 ಸಾವಿರ ಲಂಚ ನೀಡಿರುವುದಾಗಿ ದೂರು ನೀಡಿದ್ದಾರೆ.ಲಂಚ ನೀಡಿದ್ದಕ್ಕೆ ಸಾಕ್ಷಾಧಾರ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಹಸಿಲ್ದಾರ್ ಶರಣಮ್ಮ ಭರವಸೆ ನೀಡಿದ್ದರು.
ಮಾಧ್ಯಮಗಳಲ್ಲಿ ವರದಿ ಪ್ರಸಾರ ನಂತರ ಜಿಲ್ಲೆಯಲ್ಲಿ ಈ ಒಂದು ಪ್ರಕರಣ ಬಾರಿ ಸಂಚಲನ ಮೂಡಿಸಿತು. ದೂರುದಾರರ ವಿಚಾರಣೆಗೆ ಬಂದಿದ್ದ ಎಸಿ ಚೆನ್ನಪ್ಪ ಮತ್ತು ಶರಣಮ್ಮ ವಿಚಾರಣೆಯ ವೇಳೆ ಮಹಾಂತೇಶ ದಂಪತಿ, ಉಲ್ಟಾ ಹೊಡೆದಿದ್ದಾರೆ.ನಾನು ಚಿನ್ನದ ಸರ ಒತ್ತೆ ಇಟ್ಟಿಲ್ಲ. ನಮಗೇನು ಗೊತ್ತೇ ಇಲ್ಲವೆಂದು ಉಲ್ಟಾ ಹೊಡೆದಿದ್ದಾರೆ ಈ ವೇಳೆ ಮಹಂತೇಶ್ ಪತ್ನಿ ನಮ್ಮ ವಿಡಿಯೋ ಚಿತ್ರರೀಕರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಮಹಾಂತೇಶ ದೂರನ್ನು ಆಧರಿಸಿ ಮುತ್ತೂಟ್ ಫೈನಾನ್ಸ್ ಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.