ಕೊಪ್ಪಳ : ನನ್ನ ಕತ್ತು ಕೊಯ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಮತ್ತೆ ನಾನು ಬಿಜೆಪಿಗೆ ಹೋಗುತ್ತೇನೆ ಆದರೆ ಈಗ ಹೋಗಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.
ಕೊಪ್ಪಳದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಮತ್ತೆ ಬಿಜೆಪಿಗೆ ಹೋಗುತ್ತೇನೆ ಆದರೆ ಸದ್ಯ ಹೋಗಲ್ಲ ಆದರೆ ನನ್ನ ಕತ್ತು ಕೊಯ್ದರು ಕಾಂಗ್ರೆಸ್ ಗೆ ಮಾತ್ರ ಸೇರಲ್ಲ ಎಂದು ತಿಳಿಸಿದರು.ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಗೃಹ ಸಚಿವರಿಗೆ ಸ್ಪೀಕರ್ ಯುಟಿ ಖಾದರ್ ಪತ್ರ ಬರೆದ ವಿಚಾರವಾಗಿ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸ್ಪೀಕರ್ ಯುಟಿ ಖಾದರ್ ಕೋಮುವಾದಿಯಾಗಿದ್ದಾರೆ. ಮುಸ್ಲಿಂ ಗೂಂಡಾ ಯುವಕನ ಹತ್ಯೆಯಾಗಿದೆ. ಈ ಸೌಹಾರ್ದತೆ ಬಗ್ಗೆ ಗ್ರಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಆಗಿರುವ ಯುಟಿ ಖಾದರ್ ಅವರು, ಸಭಾಧ್ಯಕ್ಷರಾಗಿ ನಡೆದುಕೊಳ್ಳಬೇಕು ಹಿಂದೂ ಕಾರ್ಯಕರ್ತರ ಕೊಲೆ ಆದಾಗ ಏಕೆ ಮಾತಾಡಿಲ್ಲ? ಎಂದು ಪ್ರಶ್ನಿಸಿದರು.