ಬೆಂಗಳೂರು : ಎಮರ್ಜೆನ್ಸಿ ಸಂದರ್ಭದಲ್ಲಿ ಬಸ್ ಬೇರೆ ಮಾರ್ಗದಿಂದ ಓಡಿಸಿದಾಗ ಅಪಘಾತ ಉಂಟಾದರೆ ಅದಕ್ಕೆ ವಿಮಾ ಕಂಪನಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ತುರ್ತು ಸಂದರ್ಭಗಳಲ್ಲಿ ಪರ್ಯಾಯ ಬಸ್ ಓಡಿಸುವುದು ಷರತ್ತುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಹೌದು ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಓಡಿಸುವ ಬಸ್ ಅನ್ನು ಮೂಲಭೂತ ಉಲ್ಲಂಘನೆಯಂತೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಗಾಯಾಳುಗಳು ಮತ್ತು ಬಸ್ ಮಾಲೀಕರು ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಾಲಯ ಅಂಗೀಕರಿಸಿ ಈ ತೀರ್ಪು ನೀಡಿದೆ.
ಪ್ರಕರಣ ಹಿನ್ನೆಲೆ?
2014ರ ಜನವರಿ 21 ರಂದು ಬೆಳಿಗ್ಗೆ 11.45 ರ ಸುಮಾರಿಗೆ, ಗಣೇಶ್ ಮತ್ತು ಬಸವರಾಜ್ ಎಂಬುವರು ಮುದೂರಿನಿಂದ ಹಾವೇರಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಸಂಗೂರು ಗ್ರಾಮದ ಸಕ್ಕರೆ ಕಾರ್ಖಾನೆಯ ಬಳಿ, ಅತಿ ವೇಗದ ಬಂದ ಖಾಸಗಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಇಬ್ಬರೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿದ ಹಾವೇರಿ ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿ, ಬಸ್ ಅನುಮತಿ ಪಡೆದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಪ್ರಯಾಣಿಸಿದೆ. ಇದು ಪರವಾನಗಿ ಷರತ್ತುಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಕೋರ್ಟ್ ಗಣೇಶ್ ಅವರಿಗೆ 3,71,030 ರೂ. ಮತ್ತು ಬಸವರಾಜ್ ಅವರಿಗೆ 1,27,250 ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ಆದರೆ, ಗಣೇಶ್ ಹಾಗೂ ಬಸವರಾಜ್ ಮತ್ತು ಬಸ್ನ ಮಾಲೀಕ ಕೆ.ಎಂ. ಅಲ್ತಾಫ್ ಹುಸೇನ್ ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದರು. ಗಾಯಾಳುಗಳು ಹೆಚ್ಚಿನ ಪರಿಹಾರವನ್ನು ಕೋರಿದರು, ಆದರೆ ಬಸ್ನ ಮಾಲೀಕರು ವಿಮಾ ಕಂಪನಿಯವರೇ ಪರಿಹಾರದ ನೀಡಬೇಕೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಪೀಠ ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಬಸ್ಗಳನ್ನು ಓಡಿಸುವುದು ಷರತ್ತುಗಳ ಮೂಲಭೂತ ಉಲ್ಲಂಘನೆ ಎಂದು ಹೇಳಿತು