Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕನ್ನಡಿಗರನ್ನು ಕೆಣಕಿದ ಕೇರಳ ಸರ್ಕಾರ : 100 ಕಿಮೀ ದೂರದಲ್ಲೇ ಅಯ್ಯಪ್ಪ ಸ್ವಾಮಿ ಮಾಲಾಧರಿಗಳ ವಾಹನ ತಡೆದು ಮೊಂಡಾಟ!

13/01/2026 7:06 PM

BREAKING : ಚಾಮರಾಜನಗರದಲ್ಲಿ ಸರ್ಕಾರಿ ಬಸ್ ಗೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

13/01/2026 6:45 PM

ಬೆಸ್ಕಾಂನಿಂದ EV ಮೂಲ ಸೌಕರ್ಯಕ್ಕಾಗಿ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ

13/01/2026 6:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `KGID’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Govt Employee
KARNATAKA

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `KGID’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Govt Employee

By kannadanewsnow5709/07/2025 5:00 AM

ಬೆಂಗಳೂರು : ಖಜಾನೆ-2 ರಲ್ಲಿ ಕೆಜಿಐಡಿ (KGID) ಪಾಲಿಸಿ ಸಂಖ್ಯೆ ಬದಲು ಹೆಚ್ ಆರ್ ಎಂಎಸ್ ಸೃಜಿತ ನೌಕರರ ಐಡಿಯನ್ನು ಬಳಕೆದಾರರ ಲಾಗಿನ್ ಆಗಿ ಬಳಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಖಜಾನೆ-2 ಅನುಷ್ಠಾನವಾಗುವ ಮೊದಲು, ಸರ್ಕಾರದ ಇಲಾಖೆಗಳಿಗೆ ನೂತನವಾಗಿ ನೇಮಕಾತಿ ಹೊಂದಿದ ನೌಕರರು ಅವರಿಗೆ ಅನ್ವಯವಾಗುವ ಕೆಜಿಐಡಿ ವಂತಿಗೆಯ ದರದಲ್ಲಿ ವಂತಿಗೆಯ ಮೊದಲ ಕಂತನ್ನು ನಗದಾಗಿ ಪಾವತಿಸಿ, ಪಾಲಿಸಿಗಾಗಿ ಪ್ರಸ್ತಾವನೆಯನ್ನು ಕೆಜಿಐಡಿ ಇಲಾಖೆಗೆ ಸಲ್ಲಿಸಬೇಕಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಚೇಧ 88(ಎ) ರಂತೆ, ಕೆಜಿಐಡಿ ಪಾಲಿಸಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುವ ಕುರಿತು ಡಿಡಿಓ ರವರು ವೇತನ ಬಿಲ್ಲಿನಲ್ಲಿ ಪ್ರಮಾಣ ಪತ್ರವನ್ನು ದಾಖಲಿಸಿ ನೂತನವಾಗಿ ನೇಮಕಗೊಂಡಿರುವ ನೌಕರರ ಪ್ರಥಮ ವೇತನವನ್ನು ಸೆಳೆಯಬಹುದಾಗಿತ್ತು.

ಖಜಾನೆ-2 ಹಾಗೂ ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಯಾದ ನಂತರ, ಕೆಜಿಐಡಿ ಜೊತೆ, ನೂತನ ರಾಷ್ಟ್ರೀಯ ಪಿಂಚಣಿ ಯೋಜನೆಗೆ ನೋಂದಾವಣೆಯಾಗಿ PRAN ಪಡೆದ ನಂತರ ಪ್ರಥಮ ವೇತನವನ್ನು ಸೆಳೆಯಬೇಕಾಗಿದ್ದು, ಕೆಜಿಐಡಿ ಪಾಲಿಸಿ ಸಂಖ್ಯೆಯನ್ನು, PRAN ಪಡೆಯಲು ನೌಕರರ ಐಡಿಯಾಗಿ ಹಾಗೂ ಖಜಾನೆ-2 ರಲ್ಲಿ ಬಳಕೆದಾರರಾಗಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಬಳಸಲಾಗುತ್ತಿದೆ. ಕೆಜಿಐಡಿ ವಂತಿಗೆಯ ಮೊದಲ ಕಂತನ್ನು ಪಾವತಿಸಿ ಪಾಲಿಸಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ ನಂತರ, ಪ್ರಸ್ತಾವನೆಯು ಸಂಸ್ಕರಣೆ ಹೊಂದಿ ಪಾಲಿಸಿ ಸ್ವೀಕೃತವಾಗಲು 2 ರಿಂದ 3 ತಿಂಗಳಷ್ಟು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ನೂತನವಾಗಿ ನೇಮಕಗೊಂಡಿರುವ ನೌಕರರ PRAN ಪಡೆಯಲು ಹಾಗೂ ಪ್ರಥಮ ವೇತನವನ್ನು ಪಾವತಿಸಲು ವಿಳಂಬವಾಗುತ್ತಿದೆ.

ಪ್ರಸ್ತುತ ಹೆಚ್.ಆರ್.ಎಮ್.ಎಸ್ ನಲ್ಲಿ, ನೋಂದಾಯಿತ ನೌಕರರಿಗೆ ಹತ್ತು ಸಂಖ್ಯೆಯ ಐಡಿಯನ್ನು (EMPLOYEE ID) ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಯಾವುದೇ ನೌಕರರು ನೇಮಕಾತಿ ಹೊಂದಿದ ತಕ್ಷಣ ಡಿಡಿಓ ರವರು ಸದರಿ ನೌಕರರನ್ನು ಹೆಚ್ಆರ್ಎಮ್ಎಸ್ ನಲ್ಲಿ ನೋಂದಾಯಿಸಬೇಕಾಗಿದ್ದು, ಸದರಿ ಸಮಯದಲ್ಲಿ, ಹತ್ತು ಸಂಖ್ಯೆಯ ನೌಕರರ ಐಡಿ ಸೃಜನೆಯಾಗುತ್ತದೆ. ಈ ರೀತಿ ಸೃಜನೆಯಾದ ಹತ್ತು ಸಂಖ್ಯೆಯ ನೌಕರರ ಐಡಿಯು ಆಯಾ ನೌಕರರಿಗೆ ವಿಶಿಷ್ಟವಾಗಿದ್ದು ಅವರ ಇಡೀ ಸೇವಾ ಅವಧಿಗೆ ಅನ್ವಯವಾಗುತ್ತದೆ.

ಕೆಜಿಐಡಿ ಪಾಲಿಸಿ ಸಂಖ್ಯೆಯ ಬದಲು, ಹೆಚ್.ಆರ್.ಎಮ್.ಎಸ್ ನಲ್ಲಿ, ಸೃಜನೆಯಾದ ನೌಕರರ ಐಡಿಯನ್ನು PRAN ಪಡೆಯಲು ಹಾಗೂ ಖಜಾನೆ-2 ರಲ್ಲಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಬಳಸಬಹುದಾಗಿರುತ್ತದೆ. ಡಿಡಿಓ ರವರು ಕೆಜಿಐಡಿ ಪಾಲಿಸಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿ ಒಂದು ವೇಳೆ ಕೆಜಿಐಡಿ ಪಾಲಿಸಿ ಸ್ವೀಕೃತಿಯಲ್ಲಿ ವಿಳಂಬವಾದಾಗ್ಯೂ, ನೂತನವಾಗಿ ನೇಮಕಗೊಂಡಿರುವ ನೌಕರರ ವೇತನವನ್ನು ಯಾವುದೇ ವಿಳಂಬವಿಲ್ಲದೆ ಸೆಳೆಯಬಹುದಾಗಿರುತ್ತದೆ. ಆದುದರಿಂದ PRAN ಪಡೆಯಲು ಹಾಗೂ ಖಜಾನೆ-2 ರಲ್ಲಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಹೆಚ್.ಆರ್.ಎಮ್.ಎಸ್ ನಲ್ಲಿ, ಸೃಜನೆಯಾದ ನೌಕರರ ಐಡಿಯನ್ನು ಬಳಸುವ ಬಗ್ಗೆ ಸೂಕ್ತ ಆದೇಶವನ್ನು ಹೊರಡಿಸಲು ಮೇಲೆ ಓದಲಾದ (1)ರ ಕಡತದಲ್ಲಿ ಖಜಾನೆ ಆಯುಕ್ತರು ಕೋರಿರುತ್ತಾರೆ.

BIG NEWS: `State Government Employees’ Take note: Important order from the government regarding `KGID’ | Govt Employee
Share. Facebook Twitter LinkedIn WhatsApp Email

Related Posts

ಕನ್ನಡಿಗರನ್ನು ಕೆಣಕಿದ ಕೇರಳ ಸರ್ಕಾರ : 100 ಕಿಮೀ ದೂರದಲ್ಲೇ ಅಯ್ಯಪ್ಪ ಸ್ವಾಮಿ ಮಾಲಾಧರಿಗಳ ವಾಹನ ತಡೆದು ಮೊಂಡಾಟ!

13/01/2026 7:06 PM1 Min Read

BREAKING : ಚಾಮರಾಜನಗರದಲ್ಲಿ ಸರ್ಕಾರಿ ಬಸ್ ಗೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

13/01/2026 6:45 PM1 Min Read

ಬೆಸ್ಕಾಂನಿಂದ EV ಮೂಲ ಸೌಕರ್ಯಕ್ಕಾಗಿ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ

13/01/2026 6:16 PM3 Mins Read
Recent News

ಕನ್ನಡಿಗರನ್ನು ಕೆಣಕಿದ ಕೇರಳ ಸರ್ಕಾರ : 100 ಕಿಮೀ ದೂರದಲ್ಲೇ ಅಯ್ಯಪ್ಪ ಸ್ವಾಮಿ ಮಾಲಾಧರಿಗಳ ವಾಹನ ತಡೆದು ಮೊಂಡಾಟ!

13/01/2026 7:06 PM

BREAKING : ಚಾಮರಾಜನಗರದಲ್ಲಿ ಸರ್ಕಾರಿ ಬಸ್ ಗೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

13/01/2026 6:45 PM

ಬೆಸ್ಕಾಂನಿಂದ EV ಮೂಲ ಸೌಕರ್ಯಕ್ಕಾಗಿ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ

13/01/2026 6:16 PM

ಶಿವಮೊಗ್ಗ ಜಿಲ್ಲೆಯ ಜನತೆಗೆ 3023.95 ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ: ಉಪಾಧ್ಯಕ್ಷ ದಿನೇಶ್ ಗೂಳಿಗೌಡ

13/01/2026 6:15 PM
State News
KARNATAKA

ಕನ್ನಡಿಗರನ್ನು ಕೆಣಕಿದ ಕೇರಳ ಸರ್ಕಾರ : 100 ಕಿಮೀ ದೂರದಲ್ಲೇ ಅಯ್ಯಪ್ಪ ಸ್ವಾಮಿ ಮಾಲಾಧರಿಗಳ ವಾಹನ ತಡೆದು ಮೊಂಡಾಟ!

By kannadanewsnow0513/01/2026 7:06 PM KARNATAKA 1 Min Read

ಚಿಕ್ಕಮಗಳೂರು : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿರುವ ಅಯ್ಯಪ್ಪ ಮಾಲಾಧಾರಿಗಳು ಕೇರಳ ಸರ್ಕಾರ ಹಾಗೂ ಅಲ್ಲಿನ ಪೊಲೀಸರ…

BREAKING : ಚಾಮರಾಜನಗರದಲ್ಲಿ ಸರ್ಕಾರಿ ಬಸ್ ಗೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

13/01/2026 6:45 PM

ಬೆಸ್ಕಾಂನಿಂದ EV ಮೂಲ ಸೌಕರ್ಯಕ್ಕಾಗಿ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ

13/01/2026 6:16 PM

ಶಿವಮೊಗ್ಗ ಜಿಲ್ಲೆಯ ಜನತೆಗೆ 3023.95 ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ: ಉಪಾಧ್ಯಕ್ಷ ದಿನೇಶ್ ಗೂಳಿಗೌಡ

13/01/2026 6:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.