Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕಾಡಾನೆ ದಾಳಿಯಿಂದ ತಂದೆ, ಮಗಳು ಜಸ್ಟ್ ಮಿಸ್ : ಕೊಡಗಿನಲ್ಲಿ ತಪ್ಪಿದ ಭಾರಿ ಅನಾಹುತ, ವಿಡಿಯೋ ವೈರಲ್!

30/01/2026 1:51 PM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

30/01/2026 1:46 PM

BREAKING : ಪ್ರಯಾಣದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್

30/01/2026 1:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5730/01/2026 1:46 PM

ಬೆಂಗಳೂರು : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-out) ಅಭಿಮತವನ್ನು ನೀಡಲು ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವ ನಿಟ್ಟಿನಲ್ಲಿ, ಮೇಲೆ ಓದಲಾದ (1)8 ದಿನಾಂಕ 23.09.20250 ಸರ್ಕಾರದ ಆದೇಶದಲ್ಲಿ ದಿನಾಂಕ:01.10.2025ರಿಂದ ಜಾರಿಗೆ ತರಲಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು (opt-in) ಅಥವಾ ಒಳಪಡದೇ (Opt-Out) ಇರುವ ಬಗ್ಗೆ ಲಿಖಿತ ಅಭಿಮತವನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ದಿನಾಂಕ 18.10.2025 ರವರೆಗೆ ಕಾಲಾವಕಾಶವನ್ನು ನೀಡಿ, ಸದರಿ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದೆಂದು ತಿಳಿಸಲಾಗಿತ್ತು, ಆದರೆ, ರಾಜ್ಯ ಸರ್ಕಾರವು ಕೈಗೆತ್ತಿಕೊಂಡಿದ್ದ ರಾಜ್ಯ ವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಬಹುತೇಕ ಸರ್ಕಾರಿ ನೌಕರರು ತೊಡಗಿದ್ದರಿಂದ, ಹಲವಾರು ನೌಕರರಿಗೆ ಈ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರುವ ಬಗ್ಗೆ ಅಭಿಮತ ವ್ಯಕ್ತಪಡಿಸಲು ಸಾಧ್ಯವಾಗಿಲ್ಲವಾದ್ದರಿಂದ, ಅಭಿಮತವನ್ನು ಸಲ್ಲಿಸಲು ಮೇಲೆ ಓದಲಾದ (2) ರ ದಿನಾಂಕ 03.11.2025 ರ ಸರ್ಕಾರಿ ಆದೇಶದಲ್ಲಿ, ದಿನಾಂಕ:25.11.2025ರವರೆವಿಗೂ ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಮತ್ತು ಒಳಪಡದೇ ಇರುವ ಬಗ್ಗೆ ಸರ್ಕಾರಿ ನೌಕರರು ಅಭಿಮತವನ್ನು ನೀಡಲು ಕೊನೆಯಬಾರಿಯಾಗಿ ಒಂದು ತಿಂಗಳ ಅವಕಾಶವನ್ನು ನೀಡುವಂತೆ, ಸರ್ಕಾರಿ ನೌಕರರ ಹಲವಾರು ಸೇವಾ ಸಂಘಗಳು ಸಲ್ಲಿಸಿರುವ ಕೋರಿಕೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ -2-

ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಉತ್ತಮವಾದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಸದುದ್ದೇಶದಿಂದ ಜಾರಿಗೆ ತಂದಿರುವ health scheme ಆಗಿರುವುದರಿಂದ, ಸದರಿ ಯೋಜನೆಗೆ ಒಳಪಡಲು (opt-in) ಹಾಗೂ ಸದರಿ ಯೋಜನೆಯಿಂದ ಹೊರಗುಳಿಯುವ (opt-out) ಬಗ್ಗೆ ಲಿಖಿತವಾದ ಅಭಿಮತವನ್ನು ಸಲ್ಲಿಸಲು ಕೊನೆಯ ಬಾರಿಯ ಅವಕಾಶವಾಗಿ ಒಂದು ತಿಂಗಳ ಕಾಲಾವಕಾಶವನ್ನು ನೀಡಲು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ :-

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು (opt-in) ಅಥವಾ ಒಳಪಡದೇ (Opt-Out) ಇರುವ ಬಗ್ಗೆ ಲಿಖಿತ ಅಭಿಮತವನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ಕೊನೆಯ ಬಾರಿಯ ಅವಕಾಶವಾಗಿ, ಕೆಳಕಂಡ ಷರತ್ತಿಗೊಳಪಟ್ಟು, 2026ನೇ ಸಾಲಿನ ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಕಾಲಾವಕಾಶವನ್ನು ವಿಸ್ತರಿಸಿ, ಆದೇಶಿಸಿದೆ.

ಷರತ್ತುಗಳು :-

(i) ಈ ಸರ್ಕಾರಿ ಆದೇಶದನ್ವಯ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ (opt-in) ಹಾಗೂ ಒಳಪಡದೇ (opt-out) ಇರುವ ಬಗ್ಗೆ ಲಿಖಿತ ಅಭಿಮತ ನೀಡುವ ಸರ್ಕಾರಿ ನೌಕರರುಗಳ ಮಾಸಿಕ ವಂತಿಕೆಯನ್ನು 2026ನೇ ಸಾಲಿನ ಫೆಬ್ರವರಿ ಮಾಹೆಯ ವೇತನದಿಂದ ಕಟಾವಣೆಗೊಳಿಸಲು ಹಾಗೂ ಕಟಾವಣೆಗೊಳಿಸದಿರಲು ಕ್ರಮಕೈಗೊಳ್ಳುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರು / ಡಿ.ಡಿ.ಓ. ಗಳಿಗೆ ಸೂಚಿಸಲಾಗಿದೆ.

(ii) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡದೇ (opt-out) ಇರುವ ಬಗ್ಗೆ ಲಿಖಿತ ಅಭಿಮತವನ್ನು 2026ನೇ ಸಾಲಿನ ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಸಲ್ಲಿಸದೇ ಇರುವ ನೌಕರರು ಈ ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದು (by default opt-in).

ರಾಜ್ಯದ ಎಲ್ಲಾ ಸರ್ಕಾರಿ ನೌಕರರ ದತ್ತಾಂಶ ಸಂಗ್ರಹಣೆಯ ಉದ್ದೇಶದಿಂದ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ ಮತ್ತು ಒಳಪಡದಿರುವ ಬಗ್ಗೆ ಇಚ್ಛೆ ವ್ಯಕ್ತಪಡಿಸುವ ಅಧಿಕಾರಿ/ನೌಕರರ ಮತ್ತು ಅವರ ಕುಟುಂಬದ ವಿವರಗಳನ್ನು HRMS ತಂತ್ರಾಂಶದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿದ್ದು, ಅದರಂತೆ, ಎಲ್ಲಾ ಅಧಿಕಾರಿ/ನೌಕರರಿಂದ ಅಗತ್ಯ ಮಾಹಿತಿ/ದಾಖಲಾತಿಗಳನ್ನು ಪಡೆದು HRMS ತಂತ್ರಾಂಶದಲ್ಲಿ ದಾಖಲಿಸಲು ಸಂಬಂಧಪಟ್ಟ ಡಿ.ಡಿ.ಓ. ಗಳು ಕ್ರಮ ಕೈಗೊಳ್ಳತಕ್ಕದ್ದು.

BIG NEWS: State `Government Employees' take note: Important order from the government regarding `Arogya Sanjeevini Yojana'!
Share. Facebook Twitter LinkedIn WhatsApp Email

Related Posts

SHOCKING : ಕಾಡಾನೆ ದಾಳಿಯಿಂದ ತಂದೆ, ಮಗಳು ಜಸ್ಟ್ ಮಿಸ್ : ಕೊಡಗಿನಲ್ಲಿ ತಪ್ಪಿದ ಭಾರಿ ಅನಾಹುತ, ವಿಡಿಯೋ ವೈರಲ್!

30/01/2026 1:51 PM1 Min Read

BREAKING : ಪ್ರಯಾಣದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್

30/01/2026 1:37 PM1 Min Read

JOB ALERT : ಪದವೀಧರರಿಗೆ ಗುಡ್ ನ್ಯೂಸ್ : ‘SBI’ ನಲ್ಲಿ 2,273 ಹುದ್ದೆಗಳಿಗೆ ಅರ್ಜಿ ಆಹ್ವಾನ |SBI CBO Recruitment

30/01/2026 1:07 PM2 Mins Read
Recent News

SHOCKING : ಕಾಡಾನೆ ದಾಳಿಯಿಂದ ತಂದೆ, ಮಗಳು ಜಸ್ಟ್ ಮಿಸ್ : ಕೊಡಗಿನಲ್ಲಿ ತಪ್ಪಿದ ಭಾರಿ ಅನಾಹುತ, ವಿಡಿಯೋ ವೈರಲ್!

30/01/2026 1:51 PM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

30/01/2026 1:46 PM

BREAKING : ಪ್ರಯಾಣದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್

30/01/2026 1:37 PM

ಅಕ್ರಮ ಸಂಬಂಧಕ್ಕೆ ಭಾರಿ ಬೆಲೆ: ಮದ್ಯಪಾನ ಮತ್ತು ಲೈಂಗಿಕ ಸಂಬಂಧದ ಅಪರಾಧಕ್ಕಾಗಿ 140 ಚಡಿಯೇಟಿನ ಶಿಕ್ಷೆ

30/01/2026 1:36 PM
State News
KARNATAKA

SHOCKING : ಕಾಡಾನೆ ದಾಳಿಯಿಂದ ತಂದೆ, ಮಗಳು ಜಸ್ಟ್ ಮಿಸ್ : ಕೊಡಗಿನಲ್ಲಿ ತಪ್ಪಿದ ಭಾರಿ ಅನಾಹುತ, ವಿಡಿಯೋ ವೈರಲ್!

By kannadanewsnow0530/01/2026 1:51 PM KARNATAKA 1 Min Read

ಕೊಡಗು : ಕಾಡಾನೆ ಜೊತೆಗೆ ಶಾಲಾ ವಾಹನ ಚಾಲಕ ಹುಚ್ಚಾಟ ನಡೆಸಿದ್ದಾನೆ. ವಿಡಿಯೋ ಮಾಡುತ್ತಿದ್ದಾಗ ಕಾಡಾನೆ ಶಾಲಾ ಬಸ್ ಅನ್ನು…

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

30/01/2026 1:46 PM

BREAKING : ಪ್ರಯಾಣದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್

30/01/2026 1:37 PM

JOB ALERT : ಪದವೀಧರರಿಗೆ ಗುಡ್ ನ್ಯೂಸ್ : ‘SBI’ ನಲ್ಲಿ 2,273 ಹುದ್ದೆಗಳಿಗೆ ಅರ್ಜಿ ಆಹ್ವಾನ |SBI CBO Recruitment

30/01/2026 1:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.