ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ವೃದ್ಧ ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ್ದ ವೈದ್ಯೆಗೆ ಇದೀಗ ಶೋಕಾಶ್ ನೋಟಿಸ್ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೊಹ್ಸಿನ್ ಮೇರೆಗೆ ಕಾರಣ ಕೇಳಿ ಇದೀಗ ನೋಟಿಸ್ ನೀಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಡಿಎಂಇ ಡಾ. ಸುಜಾತ ರಾಥೋಡ್ ಅವರಿಂದ ವೈದ್ಯೆ ಪ್ರಿಯದರ್ಶಿನಿಗೆ ನೋಟಿಸ್ ನೀಡಲಾಗಿದೆ ನೋಟಿಸ್ ಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿಸೆ.
ಹೌದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಪ್ರಿಯದರ್ಶಿನಿ ಎನ್ ಗೆ ಶೋಕಾಶ್ ನೋಟಿಸ್ ನೀಡಲಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೊಹಮ್ಮದ್ ಮೊಹ್ಸಿನ್ ಸೂಚನೆಯ ಮೇರೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ನೋಟಿಸ್ ಗೆ ಲಿಖಿತ ಉತ್ತರ ನೀಡುವಂತೆ ಪ್ರಿಯದರ್ಶಿನಿ ಎನ್ ಗೆ ಸೂಚಿಸಲಾಗಿದೆ.ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಘಟನೆ ವಿವರ
ಬೆಂಗಳೂರಿನಲ್ಲಿ ಅಮಾನುಷವಾದ ಘಟನೆ ನಡೆದಿದ್ದು, ವೃದ್ಧ ಅತ್ತೆ ಮತ್ತು ಮಾವನ ಮೇಲೆ ಲೇಡಿ ಡಾಕ್ಟರ್ ಆಗಿರುವ ಸೊಸೆಯೊಬ್ಬಳು ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೊರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ.ಕಳೆದ 10 ವರ್ಷದಿಂದ ಅತ್ತೆ ಮತ್ತು ಮಾವನಿಗೆ ಪ್ರಿಯದರ್ಶಿನಿ ಕಿರುಕುಳ ನೀಡುತ್ತಿದ್ದಾಳೆ.ಕಿರುಕುಳ ತಾಳದೆ ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆದರೂ ಕೂಡ ಮಾರ್ಚ್ 10 ರಂದು ವೃದ್ಧ ಅತ್ತೆ ಮಾವನ ಬಾಡಿಗೆ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾಳೆ ಸೊಸೆ ಪ್ರಿಯದರ್ಶಿನಿ. ಅಲ್ಲದೇ ಮೊಮ್ಮಕ್ಕಳು ಸಹ ತಾತ ಅಜ್ಜಿ ಎನ್ನದೆ ಹಲ್ಲೆ ಮಾಡಿದ್ದಾರೆ.ಈ ಹಲ್ಲೆ ವಿಡಿಯೋವನ್ನು ‘ಎಕ್ಸ್’ ಆ್ಯಪ್ ‘ಕರ್ನಾಟಕ ಪೋರ್ಟ್ಫೋಲಿಯೋ’ ಖಾತೆ ಯಲ್ಲಿ ಪೋಸ್ಟ್ ಮಾಡಿದ್ದು, ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದವರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ಹಾಗೂ ಆಕೆ ಇಬ್ಬರು ಮಕ್ಕಳು ಎನ್ನಲಾಗಿದೆ. ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಎಕ್ಸ್ ಖಾತೆಯಲ್ಲಿ ಒತ್ತಾಯಿಸಲಾಗಿದೆ.
‘ಎಕ್ಸ್’ ಪೋಸ್ಟ್ನಲ್ಲಿ ಏನಿದೆ?
ವಯಸ್ಸಾದಪೋಷಕರು ತಮ್ಮ ಸೊಸೆಯಂದಿರಿಂದ ದೌರ್ಜನ್ಯಕ್ಕೆ ಒಳಗಾಗುವುದನ್ನು ನೋಡು ವುದು ತುಂಬಾ ಬೇಸರದ ಸಂಗತಿ. ವಿಕ್ಟೋ ರಿಯಾ ಆಸ್ಪತ್ರೆಯ ವೈದ್ಯೆ ಪ್ರಿಯದರ್ಶಿನಿ ಒಂದು ದಶಕಗಳಿಗೂ ಹೆಚ್ಚು ತಮ್ಮ ಅತ್ತೆ-ಮಾವರಿಗೆ ಕಿರುಕುಳ ನೀಡಿದ್ದು, ಆಕೆಯ ದೌರ್ಜನ್ಯದಿಂದಾಗಿ ಅತ್ತೆ-ಮಾವ ತಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನ್ಯಾಯಾಲಯವುಪ್ರಿಯದರ್ಶಿ ನಿಗೆ ಅತ್ತೆ-ಮಾವನನ್ನು ಭೇಟಿಯಾಗುವ ಹಕ್ಕಿಲ್ಲ ಎಂದು ತೀರ್ಪು ನೀಡಿದೆ. ಆದರೂ ಮಾ.10ರ ರಾತ್ರಿ ಪ್ರಿಯದರ್ಶಿನಿ ಹಾಗೂ ಆಕೆಯ ಇಬ್ಬರು ಮಕ್ಕಳು ಬಲವಂತವಾಗಿ ಅತ್ತೆ-ಮಾವನ ಮನೆಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಆರ್ಎಚ್ಸಿಎಸ್ ಲೇಔಟ್ ನಿವಾಸಿ ಜೆ.ನರಸಿಂಹಯ್ಯ ದೂರು ನೀಡಿದ್ದಾರೆ. ನನ್ನ ಮಗ ನವೀನ್ ಕುಮಾರ್ ಮತ್ತು ಪ್ರಿಯ ದರ್ಶಿನಿಗೆ 2007ರಲ್ಲಿ ಮದುವೆಯಾ ಗಿದ್ದು, ಸದ್ಯ ವಿಚ್ಚೇದನದ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ನಡುವೆ ಮಾ.10ರಂದು ರಾತ್ರಿ 8.30ಕ್ಕೆ ಪ್ರಿಯ ದರ್ಶಿನಿ ಹಾಗೂ ಆಕೆಯ ಮಕ್ಕಳು ಬಂದು ಹಲ್ಲೆ ಮಾಡಿದ್ದು, ಪ್ರಾಣ ಬೆದ ರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲಿಸರು ವಿಚಾರಣೆಗೆ ಹಾಜರಾಗುವಂತೆ ಆಕೆಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
It is deeply disturbing to see elderly parents suffering abuse at the hands of their daughters-in-law. One such horrifying case involves Dr. Priyadarshini N, a doctor at Victoria Government Hospital, who harassed her in-laws for over a decade. Her mistreatment forced them to… pic.twitter.com/FPh2IpmHq9
— Karnataka Portfolio (@karnatakaportf) March 13, 2025