ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ವರೆಗೂ ಮುಂದೂಡುವಂತೆ ಮನವಿ ರಾಜ್ಯದ ಶಿಕ್ಷಕರು ಮನವಿ ಮಾಡಿದ್ದಾರೆ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ತರುವ ವಿಷಯವೆನೆಂದರೆ, ಸದ್ಯ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ಶಿಕ್ಷಕರಿಗೆ ಕಾಡುತ್ತಿದ್ದು, ಇದರ ಕುರಿತು ಮೇಲಾಧಿಕಾರಿಗಳಿಗೆ ಎಷ್ಟೇ ಕೇಳಿಕೊಂಡರೂ ಸಹ ಯಾವುದೇ ಪರಿಹಾರ ಸಿಗುತ್ತಿಲ್ಲ.
ಕಾರಣ ಶಿಕ್ಷಕರು ಮನೆ ಮನೆಗೆ ಹೋಗಿ ಗಂಟೆಗಟ್ಟಲೇ ಕುಳಿತು APP ಕಾರ್ಯ ನಿರ್ವಹಿಸದ ಕಾರಣ ಮುಜುಗರ ಪಡುವಂತಾಗಿದ್ದು, ಮಹಿಳಾ ಶಿಕ್ಷಕಿಯರು ಪಡುವ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ.
1) ಹೊಸ ವರ್ಷನ್ APP ಓಪನ್ ಆಗದೇ UNKNOWN ERROR ಬರುತ್ತಿರುವುದು.
2) ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಇರುವುದು.
3) ನಿಗದಿಪಡಿಸಿರುವ ಮನೆಗಳು ಒಂದೇ ಕಡೆ ಇಲ್ಲದಿರುವುದು
4) ಮನೆ ಸಮೀಕ್ಷೆ ಮಾಡಿದ ನಂತರ ಸಬ್ಸಿಟ್ ಆಗದೇ ಇರುವುದು
5) OTP ಮತ್ತು ODP ಸಮಸ್ಯೆ
6) ಮನೆಪಟ್ಟಿ ಮುಖ್ಯಸ್ಥರು ಹೆಸರು ಸರಿಯಾಗಿ ನಮೂದಾಗದಿರುವುದು.
7) ಅನಾರೋಗ್ಯ ಇರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ನಿಯೋಜಿಸಿರುವುದು.
8) ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡದೆ ಅವರಿಗೆ ಸಮಸ್ಯೆಗಳನ್ನು ಪರಿಹರಿಸಲು ಆಗುತ್ತಿಲ್ಲ.
9) ಸೂಕ್ತವಾದ ಸಹಾಯವಾಣಿ ಲಭ್ಯವಿಲ್ಲ. ಲಭ್ಯವಿರುವ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಉತ್ತರವಿಲ್ಲ.
10) ಕೆಲವು ಶಿಕ್ಷಕರ ಬಳಿ ಇರುವ ಪೋನ್ ಗಳು APP ಗಳಿಗೆ ಸಹಕರಿಸದಿರುವುದು.
11) ಕೆಲವು ಶಿಕ್ಷಕರಿಗೆ ಸ್ಮಾರ್ಟ ಪೋನ್ ಗಳ ಬಳಕೆ ತಿಳಿಯದೇ ಪರದಾಡುತ್ತಿರುವು.
12. ಈಗಾಗಲೇ ಯು ಎಚ್ ಐ ಡಿ ಸಂಖ್ಯೆಯನ್ನು ಹಚ್ಚಿದ್ದು ಅವು ಮನೆಯ ಮಕ್ಕಳಾಗಿರಬಹುದು ಮನೆಯವರಾಗಿರಬಹುದು ಹರಿದು ಹಾಕಿರುವುದು
13. ಈಗಾಗಲೇ ಹಚ್ಚಲಾಗಿರುವ ಯುಹೆಚ್ ಐಡಿಯ ಕೆಲವು ಸಂಖ್ಯೆಗಳನ್ನು ಮಕ್ಕಳು ಗೀಚಿರುವುದು ಅಥವಾ ಹಾಳಾಗಿರುವುದು. ಈ ಈ ಸಮಸ್ಯೆಗಳಿಂದ ಕೆಲವು ಮನೆಯ ಗೆಣತಿ ಮಾಡಲು ಯು ಹೆಚ್ ಐಡಿಯ ಕೊರತೆ ಕಾರಣದಿಂದ ಗಣತಿ ಮಾಡಲಿಕ್ಕೆ ಸಾಧ್ಯವಾಗದೇ ಇರುವುದು
ಹೀಗೆ ಹತ್ತು ಹಲವಾರು ಸಮಸ್ಯೆಗಳು ಶಿಕ್ಷಕರಿಗೆ ಸಮೀಕ್ಷೆ ಸಮಯದಲ್ಲಿ ಎದುರಾಗುತ್ತಿವೆ ಕಾರಣ ತಾವುಗಳು ಈ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪರಿಹರಿಸುವವರೆಗೂ ಮುಂದೂಡಿ ಹಾಗೂ ಪವಿತ್ರವಾದ ದಸರಾ ಹಬ್ಬವನ್ನು ಆಚರಿಸಲು ಶಿಕ್ಷಕರಿಗೆ ಅನುಕೂಲಿಸಲು ಮನವಿ ಮಾಡಿದ್ದಾರೆ.