Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ 26 ಕೋಟಿಗೂ ಹೆಚ್ಚು ಜನರು ಭೀಕರ ಬಡತನದ ಸಂಕೋಲೆಯಿಂದ ಹೊರ ಬಂದಿದ್ದಾರೆ ; ವಿಶ್ವಬ್ಯಾಂಕ್ ವರದಿ

07/06/2025 8:19 PM

ಸಿದ್ದರಾಮಯ್ಯ ಸರ್ಕಾರದಿಂದ ಎಲ್ಲಾ ಧರ್ಮಕ್ಕೂ ಗೌರವ: ಸಚಿವ ಸುರೇಶ ಅಭಿಮತ

07/06/2025 7:57 PM

SHOCKING : ಮೊಬೈಲ್ ಬಳಕೆದಾರರೇ ಎಚ್ಚರ ; ಆಸ್ಪತ್ರೆಯಲ್ಲಿ ರೋಗಿಯ ಜೇಬಿನೊಳಗಿದ್ದ ‘ಮೊಬೈಲ್’ ಸ್ಫೋಟ

07/06/2025 7:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೌಕರರೇ ಗಮನಿಸಿ: HRMS ತಂತ್ರಾಂಶದಲ್ಲಿ ಡಿಜಿಟಲ್ ವೇತನ ಬಿಲ್ಲು,ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

ನೌಕರರೇ ಗಮನಿಸಿ: HRMS ತಂತ್ರಾಂಶದಲ್ಲಿ ಡಿಜಿಟಲ್ ವೇತನ ಬಿಲ್ಲು,ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5701/05/2025 5:00 PM

ಬೆಂಗಳೂರು :ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2ರಲ್ಲಿ ಸೃಜಿಸಲಾದ ಜಿಲ್ಲಾ ವಲಯದ ವೇತನ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಆನ್‌ಲೈನ್‌ನಲ್ಲಿ ಮಾತ್ರ ಅಂಗೀಕರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ.?

ಮೇಲೆ ಓದಲಾದ (1)ರ ಆದೇಶದಲ್ಲಿ ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ 2 ರಲ್ಲಿ ವೇತನ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು ದಿನಾಂಕ 01.04.2022 ರಿಂದ ಜಾರಿಗೆ ಬರುವಂತೆ, ಹೆಚ್ ಆರ್ ಎಂ ಎಸ್ ಹಾಗೂ ಖಜಾನೆ 2ರಲ್ಲಿ ಸೃಜಿಸುವ ವೇತನಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿ.ಎಸ್.ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸಲು ಹಾಗೂ ಯಾವುದೇ ಕಡಿತ ಮತ್ತು ವಸೂಲಾತಿಗಳ ಷೆಡ್ಯೂಲ್ /ಚಲನ್ ಗಳನ್ನು ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.

2. ಸರ್ಕಾರದ ಆದೇಶ ಸಂ. ಆಇ 01 ಟಿಟಿಸಿ 2022 ದಿನಾಂಕ 23.03.2022 ಆದೇಶದಂತೆ, ಖಜಾನೆ 2 ರ ತಂತ್ರಾಂಶದಲ್ಲಿ ಅವಶ್ಯಕ ಮಾರ್ಪಾಟುಗಳನ್ನು ಮಾಡಿಕೊಂಡು, ಆಗಸ್ಟಸ್ 2023 ಮಾಹೆಯಿಂದ, ಖಜಾನೆ ಇಲಾಖೆಯ ವೇತನ ಬಿಲ್ಲುಗಳಿಗೆ ಸಂಬಂದಿಸಿದಂತೆ ಈ ಹೊಸ ವಿಧಾನವನ್ನು ಅನುಷ್ಠಾನಗೊಳಿಸಲಾಗಿದೆ.

ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ನಮ್ಮ ವಾಟ್ಸಪ್‌ ಗುಂಪು ಸೇರಿಕೊಳ್ಳಿ 👇https://chat.whatsapp.com/LE44dr3kKYG7AHE6b6ksTh

3. ಮೇಲ್ಕಂಡ ಕಾರ್ಯವಿಧಾನವನ್ನು ಜಿಲ್ಲಾ ವಲಯದ (ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್) ವೇತನ ಬಿಲ್ಲುಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವೇತನ ವೋಚರುಗಳನ್ನು ವೀಕ್ಷಿಸಲು, ಅವರ ಲಾಗಿನ್ ನಲ್ಲಿ e-Compilation Form 1 ಮೂಲಕ ಅವಕಾಶ ಕಲ್ಪಿಸಲಾಗುವುದು. ಸದರಿ ವೋಚರುಗಳನ್ನು ಲೆಕ್ಕಪರಿಶೋಧನೆಗಾಗಿ ಮಾಹೆವಾರು ವರ್ಗೀಕರಿಸಿ, ಲಭ್ಯವಾಗುವಂತೆ ಮಾಡಲಾಗುವುದು.

4. ಆದುದರಿಂದ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿನ ಸೂಚನೆಗಳಿಗೆ ಒಳಪಟ್ಟು, ಸರ್ಕಾರದ ಎಲ್ಲಾ ಇಲಾಖೆಗಳು ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2ರಲ್ಲಿ ಸೃಜಿಸಲಾದ ಜಿಲ್ಲಾ ವಲಯಕ್ಕೆ ಸಂಬಂಧಿಸಿದ ವೇತನ ಬಿಲ್ಲುಗಳಿಗೆ ಸಂಬಂಧಿಸಿದಂತೆ, ಬಿಲ್ಲುಗಳನ್ನು ಹಾಗೂ ಕಡಿತ ವಸೂಲಾತಿಗಳಿಗೆ ಸಂಬಂಧಿಸಿದ ಷೆಡ್ಯೂಲ್‌ಗಳನ್ನು ಯಾವುದೇ ಭೌತಿಕ ಪ್ರತಿಗಳನ್ನು ಸಲ್ಲಿಸದೆ, ಡಿಎಸ್ ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸಲು ಜಿಲ್ಲಾ ಪಂಚಾಯತ್/ ತಾಲ್ಲೂಕು ಪಂಚಾಯತ್ ಗಳಿಗೆ ಸೂಚನೆಗಳನ್ನು ನೀಡಲು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

1. ವೋಚರುಗಳ ಡಿಜಿಟಲೀಕರಣದ ಅಂಗವಾಗಿ ದಿನಾಂಕ 01-05-2025 ರಿಂದ ಜಾರಿಗೆ ಬರುವಂತೆ ಜಿಲ್ಲಾ ವಲಯದ (ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್) ಡಿಡಿಓ ರವರು ಉಲ್ಲೇಖಿತ ಆದೇಶದ ಸೂಚನೆಗಳಿಗೆ ಒಳಪಟ್ಟು, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ-2ರಲ್ಲಿ ಸೃಜಿಸುವ ಜಿಲ್ಲಾ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂದಿಸಿದ ವೇತನಗಳಲ್ಲಿನ ಕಡಿತ ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್‌ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು, ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿ.ಎಸ್.ಸಿ ಮೂಲಕ ದೃಢೀಕರಿಸಿ, ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸುವಂತೆ ಹಾಗೂ ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.

2. ಖಜಾನೆಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವೇತನ ಬಿಲ್ಲುಗಳಿಗೆ ಸಂಬಂಧಿಸಿದ ವೋಚರುಗಳನ್ನು ವೀಕ್ಷಿಸಲು, ಅವರ ಲಾಗಿನ್ ನಲ್ಲಿ e-Compilation Form 1 ಮೂಲಕ ಅವಕಾಶ ಕಲ್ಪಿಸುವುದು. ಹಾಗೂ ಸದರಿ ವೋಚರುಗಳನ್ನು ಲೆಕ್ಕಪರಿಶೋಧನೆಗಾಗಿ ಮಾಹೆವಾರು ವರ್ಗೀಕರಿಸಿ, ಲಭ್ಯವಾಗುವಂತೆ ಮಾಡುವುದು.

3. ಈ ಸಂಬಂಧ ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಕರ್ನಾಟಕ ಖಜಾನೆ ಸಂಹಿತೆ ಹಾಗೂ ಜಿಲ್ಲಾ/ತಾಲ್ಲೂಕು ಪಂಚಾಯಿತಿಗಳ (ಹಣಕಾಸು ಮತ್ತು ಲೆಕ್ಕಗಳು) ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು.

BIG NEWS: Salary bill in `HRMS' software: Important order from the state government!
Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯ ಸರ್ಕಾರದಿಂದ ಎಲ್ಲಾ ಧರ್ಮಕ್ಕೂ ಗೌರವ: ಸಚಿವ ಸುರೇಶ ಅಭಿಮತ

07/06/2025 7:57 PM1 Min Read

BIG NEWS: ರಾಜ್ಯದಲ್ಲೊಂದು ವಿಚಿತ್ರ ಘಟನೆ: ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿ ಕೊನೆಗೆ ಕದಿಯದೇ ಕೈಮುಗಿದು ತೆರಳಿದ ಮುಸುಕುಧಾರಿ

07/06/2025 6:57 PM1 Min Read

HD ಕುಮಾರಸ್ವಾಮಿ ಆರೋಗ್ಯ ಸುಧಾರಣೆ ಆಗುವುದಾದರೆ ನನ್ನನ್ನು ಟೀಕಿಸಲಿ: ಡಿಸಿಎಂ ಡಿ.ಕೆ.ಶಿವಕುಮಾರ್

07/06/2025 6:36 PM1 Min Read
Recent News

ಭಾರತದಲ್ಲಿ 26 ಕೋಟಿಗೂ ಹೆಚ್ಚು ಜನರು ಭೀಕರ ಬಡತನದ ಸಂಕೋಲೆಯಿಂದ ಹೊರ ಬಂದಿದ್ದಾರೆ ; ವಿಶ್ವಬ್ಯಾಂಕ್ ವರದಿ

07/06/2025 8:19 PM

ಸಿದ್ದರಾಮಯ್ಯ ಸರ್ಕಾರದಿಂದ ಎಲ್ಲಾ ಧರ್ಮಕ್ಕೂ ಗೌರವ: ಸಚಿವ ಸುರೇಶ ಅಭಿಮತ

07/06/2025 7:57 PM

SHOCKING : ಮೊಬೈಲ್ ಬಳಕೆದಾರರೇ ಎಚ್ಚರ ; ಆಸ್ಪತ್ರೆಯಲ್ಲಿ ರೋಗಿಯ ಜೇಬಿನೊಳಗಿದ್ದ ‘ಮೊಬೈಲ್’ ಸ್ಫೋಟ

07/06/2025 7:33 PM

ಸಂಜೆ 6 ಗಂಟೆಗೂ ಮೊದ್ಲು ಊಟ ಮಾಡೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.? ಆರೋಗ್ಯ ರಹಸ್ಯವಿದು.!

07/06/2025 7:12 PM
State News
KARNATAKA

ಸಿದ್ದರಾಮಯ್ಯ ಸರ್ಕಾರದಿಂದ ಎಲ್ಲಾ ಧರ್ಮಕ್ಕೂ ಗೌರವ: ಸಚಿವ ಸುರೇಶ ಅಭಿಮತ

By kannadanewsnow0907/06/2025 7:57 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತಿದೆ ಎಂದು ನಗರಾಭಿವೃದ್ಧಿ…

BIG NEWS: ರಾಜ್ಯದಲ್ಲೊಂದು ವಿಚಿತ್ರ ಘಟನೆ: ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿ ಕೊನೆಗೆ ಕದಿಯದೇ ಕೈಮುಗಿದು ತೆರಳಿದ ಮುಸುಕುಧಾರಿ

07/06/2025 6:57 PM

HD ಕುಮಾರಸ್ವಾಮಿ ಆರೋಗ್ಯ ಸುಧಾರಣೆ ಆಗುವುದಾದರೆ ನನ್ನನ್ನು ಟೀಕಿಸಲಿ: ಡಿಸಿಎಂ ಡಿ.ಕೆ.ಶಿವಕುಮಾರ್

07/06/2025 6:36 PM

GOOD NEWS: ರಾಜ್ಯದ ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಪರಿಪಕ್ವತೆ ಮೊತ್ತ ಮಂಜೂರು

07/06/2025 6:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.