ಬೆಂಗಳೂರು : ಸಂವಿಧಾನದ ವಿರುದ್ಧವಾಗಿ ಹೇಳಿಕೆ ನೀಡಿರುವ RSS ನ ದತ್ತಾತ್ರೇಯ ಹೊಸಬಾಳೆ ಅವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಚಿವ HC ಮಹದೇವಪ್ಪ ಕಿಡಿ ಕಾರಿದ್ದು RSS ತನ್ನ ದೇಶದ್ರೋಹಿ ನಡವಳಿಕೆಗೆ ಕಡಿವಾಣ ಹಾಕಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ಸಿ ಮಹದೇವಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಈ ಕುರಿತು ಹೇಳಿರುವ ಅವರು, ಜಾತಿ ಮತ್ತು ಧರ್ಮದ ಬೇಧ ನೋಡದೆ ಎಲ್ಲರನ್ನು ಸಮಾನರಾಗಿ ಕಾಣುವುದು. ಸಮಾಜವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯವಾದಗಿಸುವುದು ಎಂದರ್ಥ. ನಮ್ಮ ಸಂವಿಧಾನದ ಮೂಲ ಆಶಯಗಳಲ್ಲಿ ಹೇಳಿದ ಸಮಾನತೆ ಮತ್ತು ನ್ಯಾಯಾಧ ಅಂಶವು ಅತ್ಯಂತ ಮಹತ್ವದವಾಗಿರುವಂತದ್ದು ಹಾಗೂ ಒಂದು ದೇಶದ ಉಳಿವಿಗೆ ಬೇಕಾಗಿರುವಂತಹ ಸಂಗತಿಗಳು.
ಹೀಗಿರುವಾಗ ಇಂತಹ ಮಹತ್ವದ ಅಂಶಗಳನ್ನು ತೆಗೆದು ಹಾಕಬೇಕೆಂದು ಹೇಳುತ್ತಿರುವ ಆರ್ ಎಸ್ ಎಸ್ ದತ್ತಾತ್ರೇಯ ಹೊಸ ಬಾಳೆಯವರು ಜಾತ್ಯತೀತತೆ ಹಾಗೂ ಸಮಾಜವಾದದ ಎಂಬ ಪದವನ್ನು ಅರ್ಥ ಮಾಡಿಕೊಳ್ಳುವುದೇ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು ದೇಶದ್ರೋಹದ ನಡವಳಿಕೆ ಆಗಿದೆ. ದೇಶದ ಬಹುತ್ವಕ್ಕೆ ಎಂದಿನಿಂದಲೂ ಆರ್ ಎಸ್ ಎಸ್ ವಿರುದ್ಧವಾಗಿದೆ. ಯಾವಾಗಲೂ ಮನುಷ್ಯನ ಆಹಾರ ಬಟ್ಟೆ ಆಚರಣೆ ಹಾಗೂ ಅವರ ಆಲೋಚನೆಗಳ ವಿಷಯದಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದೆ.
ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಈ ದೇಶದ ಆತ್ಮವಾದ ಸಂವಿಧಾನವು ಎಷ್ಟು ಗಟ್ಟಿಯಾಗಿದೆ ಅಂದರೆ ಇಂತಹ ನೂರು ದಾಳಿಗಳು ಮತ್ತು ಕುತಂತ್ರಗಳನ್ನು ಇನ್ನು ಕೋಟಿ ಬಾರಿ ಎದುರಿಸಿ ನಿಲ್ಲುವಷ್ಟು ಸಮರ್ಥವಾಗಿದೆ. ಇತ್ತೀಚಿಗೆ ಬಾಬಾ ಸಾಹೇಬರ ವಿಷಯದಲ್ಲಿ ಪ್ರೀತಿ ತೋರಿಸುವ ನಾಟಕವಾಡುತ್ತಿರುವ ಆರ್ ಎಸ್ ಎಸ್ ನವರು ಬಾಬಾ ಸಾಹೇಬರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಮಾತನಾಡುತ್ತಿರುವ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್ ಎಸ್ ಎಸ್ ನಿಂದ ಹೊರಹಾಕಿ ದತ್ತಾತ್ರೇಯ ಹೊಸಬಾಳಿಯವರ ಮೇಲೆ ಕ್ರಮ ಜರುಗಿಸಲಿ ಇಲ್ಲವಾದರೆ ತಾವು ಒಬ್ಬ ದೇಶದ್ರೋಹಿ ಸಂಘಟನೆ ಎಂಬುದನ್ನು ಒಪ್ಪಿಕೊಳ್ಳಲಿ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಾದೇವಪ್ಪ ಮಾಧ್ಯಮ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಜಾತ್ಯಾತೀತತೆ ಎಂದರೆ
ಜಾತಿ ಮತ್ತು ಧರ್ಮದ ಬೇಧ ನೋಡದೇ ಎಲ್ಲರನ್ನೂ ಸಮಾನವಾಗಿ ಕಾಣುವುದು
ಸಮಾಜವಾದ ಎಂದರೆ
ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯ ಒದಗಿಸುವುದು ಎಂದರ್ಥ.
ನಮ್ಮ ಸಂವಿಧಾನದ ಮೂಲ ಆಶಯಗಳಲ್ಲಿ ಮೇಲೆ ಹೇಳಿದ ಸಮಾನತೆ ಮತ್ತು ನ್ಯಾಯದ ಅಂಶವು ಅತ್ಯಂತ ಮಹತ್ವವಾಗಿರುವಂತದ್ದು ಮತ್ತು ಒಂದು ದೇಶದ ಉಳಿವಿಗೆ ಬೇಕಾಗಿರುವಂತಹ… pic.twitter.com/igL70wAuOQ
— Dr H C Mahadevappa(Buddha Basava Ambedkar Parivar) (@CMahadevappa) June 28, 2025