ಬೆಂಗಳೂರು : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿಶ್ವ ಜಲದಿನ-2025 ಅಂಗವಾಗಿ ಜಲ ಸಂರಕ್ಷಣೆ ಕುರಿತು ವಿಶ್ವದ ಬೃಹತ್ ಪ್ರತಿಜ್ಞಾವಿಧಿ ಸ್ವೀಕರಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ತಿಳಿಸಿರುವಂತೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಇವರ ವತಿಯಿಂದ ದಿನಾಂಕ: 21.03.2025 ರಂದು “ಕಾವೇರಿ ಆರತಿ” ಎಂಬ ಬೃಹತ್ ಕಾರ್ಯಕ್ರಮದಲ್ಲಿ “ವಿಶ್ವ ಜಲದಿನ-2025” ರ ಅಂಗವಾಗಿ ಜಲ ಸಂರಕ್ಷಣೆ ಕುರಿತು ವಿಶ್ವದ ಬೃಹತ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿರುತ್ತದೆ. ಈ ಪ್ರತಿಜ್ಞಾವಿಧಿ ಕಾರ್ಯಕ್ರಮವು ದಿನಾಂಕ: 21.03.2025 ರಿಂದ 28.03.2025 ರವರೆಗೆ ನಿಗಧಿಯಾಗಿರುತ್ತದೆ.
ಈ ನಿಟ್ಟಿನಲ್ಲಿ ಈ ಇಲಾಖಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಹಾಗೂ ತಾಂತ್ರಿಕ/ಇಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ದಿನಾಂಕ: 28.03.2025 ರೊಳಗಾಗಿ ಗರಿಷ್ಠ ಮಟ್ಟದಲ್ಲಿ ಜಲ ಸಂರಕ್ಷಣೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿಕೊಳ್ಳುವಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.
ಮುಂದುವರೆದು, ಈ ಸಂಬಂಧ ಅವಶ್ಯವಿರುವ ಸೂಚನೆಗಳು ಈ ಕೆಳಕಂಡಂತಿದೆ.
1. ಪ್ರತಿಜ್ಞಾವಿಧಿ ಅರ್ಜಿಗಳನ್ನು ಎಲ್ಲಾ ಕಾಲೇಜುಗಳಿಗೆ ದಿನಾಂಕ: 25.03.2025 ರಂದು ಮಂಡಳಿಯ ವತಿಯಿಂದ ಜಿಲ್ಲಾವಾರು ನೇಮಕವಾಗಿರುವ ಮಂಡಳಿಯ ನೋಡಲ್ ಅಧಿಕಾರಿಗಳ ಮುಖೇನ ಕಳುಹಿಸಿಕೊಡಲಾಗುವುದು.
2. ಎಲ್ಲಾ ಕಾಲೇಜಿನ ಪ್ರಾಂಶುಪಾಲರು ದಿನಾಂಕ: 26.03.2025 ಹಾಗೂ 27.03.2025 ರಂದು ಪ್ರತಿಜ್ಞಾವಿಧಿ ಮಾಡಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಿದ ಅರ್ಜಿಗಳನ್ನು ದಿನಾಂಕ: 27.03.2025 ಸಂಜೆಯೊಳಗಾಗಿ ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳಿಗೆ ತಲುಪಿಸುವುದು.
ಹೆಚ್ಚಿನ ಸಂಪರ್ಕಕ್ಕಾಗಿ: ಶ್ರೀ ರಾಮಲಿಂಗಪ್ಪ- 9480841203
ಕು.ಪೂರ್ಣಿಮ -9739976143
ಆನಂದ್- 8217620625
ಮದನ್- 9742428822
3. ಹಾಗೆಯೇ, ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು (Geo Tagged Photo) chairmanbwessb123@gmail.com ಐ.ಡಿ ಗೆ ಕಳುಹಿಸುವುದು ಹಾಗೂ https://jalavejeeva.com ರಲ್ಲು ಸಹ ದಾಖಲು ಮಾಡಲು ಅವಕಾಶಗಳಿದ್ದು ಅದರಲ್ಲಿಯೂ ಸಹ ದಾಖಲು ಮಾಡುವುದು.