ಬೆಂಗಳೂರು : ಪಹಲ್ಗಾಮ್ ಉಗ್ರರ ನಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಇದೇ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲೇ ಹೋದರು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾಷಣ ಮಾಡುತ್ತಾರೆ. ಹಾಗಾಗಿ ಎಲ್ಲಾ ನನ್ನಿಂದಲೇ ಆಯ್ತು ಅನ್ನೋದನ್ನ ಮೋದಿ ಬಿಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಎಲ್ಲಾ ನನ್ನಿಂದಲೇ ಆಯ್ತು ಅನ್ನೋದನ್ನ ಮೋದಿ ಬಿಡಬೇಕು. ಇಡೀ ದೇಶ ನಮ್ಮ ಸೇನೆಯ ಹಿಂದೆ ಇದೆ. ಸೇನೆ ಮಾಡುವ ಕೆಲಸಕ್ಕೆ ನಮ್ಮೆಲ್ಲರ ಬೆಂಬಲವೂ ಇದೆ. ನಾನು ಅದು ಮಾಡಿದ್ದೇನೆ ಇದು ಮಾಡಿದ್ದೇನೆ ನನ್ನ ಒಬ್ಬನಿಂದಲೇ ಎಲ್ಲವೂ ಸಾಧ್ಯ ಅನ್ನೋದನ್ನ ಬಿಡಬೇಕು. ಚುನಾವಣಾ ಭಾಷಣೆಗಳಲ್ಲಿ ಮೋದಿ ಬಳಸುವುದನ್ನು ಬಿಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು.