Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾನವೀಯತೆಗೆ ಮೊದಲ ಆದ್ಯತೆ: ಶ್ರೀಲಂಕಾಗೆ ನೆರವು ಸಾಗಿಸುವ ಪಾಕ್ ವಿಮಾನಕ್ಕೆ ಕ್ಷಿಪ್ರ ಅನುಮತಿ ನೀಡಿದ ಭಾರತ

02/12/2025 7:11 AM

BIG NEWS : ಇಂದು ಡಿಸಿಎಂ ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ ಕೂಟ : ಸಿದ್ದರಾಮಯ್ಯಗೆ ಪ್ರಿಯವಾದ ನಾಟಿ ಕೋಳಿ ಸಾರು ರೆಡಿ!

02/12/2025 7:05 AM

ಹೊಸ ಫೋನ್ ಗಳಲ್ಲಿ ‘ಸೈಬರ್ ಸೆಕ್ಯುರಿಟಿ ಆ್ಯಪ್’ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ

02/12/2025 7:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ.!
KARNATAKA

BIG NEWS : ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ.!

By kannadanewsnow5718/02/2025 3:20 PM

ಕೊಪ್ಪಳ : ಅಪ್ರಾಪ್ತವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕಳಮಳ್ಳಿ ತಾಂಡಾದ ವಿಜಯಕುಮಾರ ಚವ್ಹಾಣ ಇತನ ಮೇಲಿನ ಆರೋಪಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ)ದ ನ್ಯಾಯಾಧೀಶರು, ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ.

2022ರ ಜುಲೈ 21ರಂದು ರಾತ್ರಿ 7.30 ಗಂಟೆ ಸುಮಾರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಗ್ರಾಮದಲ್ಲಿ ಗೆಳತಿಯ ಮನೆಗೆ ನೋಟ್ಸ್ ತೆಗೆದುಕೊಂಡು ಬರಲು ತನ್ನ ಮನೆಯಿಂದ ಹೊರಗಡೆ ಬಂದಾಗ, ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಳಮಳ್ಳಿ ತಾಂಡಾ ನಿವಾಸಿ ವಿಜಯಕುಮಾರ ಚವ್ಹಾಣ ಇತನು ತನ್ನ ಮೋಟಾರ ಸೈಕಲ್ ಮೇಲೆ ಬಂದು ಬಾಧಿತಳನ್ನು ಅಪಹರಿಸಿ ಕೊಂಡು ಹೇಮಗುಡ್ಡದ ದೇವಸ್ಥಾನಕ್ಕೆ ಹೋಗಿ, ಅಲ್ಲಿನ ಅಡುಗೆ ಮಾಡುವ ಶೆಡ್ಡಿನಲ್ಲಿ ಮಲಗಿ ರಾತ್ರಿ ವೇಳೆಯಲ್ಲಿ ಮದುವೆ ಯಾಗುವುದಾಗಿ ಪುಸಲಾಯಿಸಿ, ಅತ್ಯಾಚಾರ ಮಾಡಿದ್ದಾನೆ. ನಂತರ 4 ದಿನಗಳವರೆಗೆ ಅಲ್ಲಿಯೇ ತಂಗಿದ್ದು, ಆ ಅವಧಿಯಲ್ಲಿಯೂ ಪ್ರತಿದಿನ ಅತ್ಯಾಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ತಾವರಗೇರಾ ಪೋಲಿಸ ಠಾಣೆಯ ಮಹಿಳಾ ಪಿ.ಎಸ್.ಐ ಮತಿ ವೈಶಾಲಿ ಝಳಕಿ ಅವರು ದೂರು ಸ್ವೀಕರಿಸಿ, ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್. ಅವರು ನಿರ್ವಹಿಸಿದ್ದು, ಈ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೊ) ಸಂ: 52/2022ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು, ಆರೋಪಿ ಕಳಮಳ್ಳಿ ತಾಂಡಾದ ವಿಜಯಕುಮಾರ ಚವ್ಹಾಣ ಇತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 20,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ, ಕೊಪ್ಪಳದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯದ (ಪೋಕ್ಸೊ)ದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು 2025ರ ಫೆಬ್ರವರಿ 6 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣ ನಡೆಸಿ, ವಾದ ಮಂಡಿಸಿದ್ದರು. ತಾವರಗೇರಾ ಪೊಲೀಸ್ ಠಾಣೆಯ ಸಿಬ್ಬಂದಿ ರಂಗನಾಥ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

BIG NEWS: Man convicted for kidnapping and raping minor girl
Share. Facebook Twitter LinkedIn WhatsApp Email

Related Posts

BIG NEWS : ಇಂದು ಡಿಸಿಎಂ ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ ಕೂಟ : ಸಿದ್ದರಾಮಯ್ಯಗೆ ಪ್ರಿಯವಾದ ನಾಟಿ ಕೋಳಿ ಸಾರು ರೆಡಿ!

02/12/2025 7:05 AM1 Min Read

‘ಹೃದಯಾಘಾತದಿಂದ’ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ : ನಾಳೆ ಹುಟ್ಟುಹಬ್ಬದ ದಿನವೆ ಹುಟ್ಟುರಲ್ಲಿ ಅಂತ್ಯಕ್ರಿಯೆ

02/12/2025 6:56 AM1 Min Read

SHOCKING : ರಾಜ್ಯದಲ್ಲಿ ಮತ್ತೊಂದು ಘೋರ ಕೃತ್ಯ : ಗದಗದಲ್ಲಿ ಶಿರಚ್ಚೇದನ ಮಾಡಿದ ಕರುವಿನ ಮೃತದೇಹ ಪತ್ತೆ!

02/12/2025 6:36 AM1 Min Read
Recent News

ಮಾನವೀಯತೆಗೆ ಮೊದಲ ಆದ್ಯತೆ: ಶ್ರೀಲಂಕಾಗೆ ನೆರವು ಸಾಗಿಸುವ ಪಾಕ್ ವಿಮಾನಕ್ಕೆ ಕ್ಷಿಪ್ರ ಅನುಮತಿ ನೀಡಿದ ಭಾರತ

02/12/2025 7:11 AM

BIG NEWS : ಇಂದು ಡಿಸಿಎಂ ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ ಕೂಟ : ಸಿದ್ದರಾಮಯ್ಯಗೆ ಪ್ರಿಯವಾದ ನಾಟಿ ಕೋಳಿ ಸಾರು ರೆಡಿ!

02/12/2025 7:05 AM

ಹೊಸ ಫೋನ್ ಗಳಲ್ಲಿ ‘ಸೈಬರ್ ಸೆಕ್ಯುರಿಟಿ ಆ್ಯಪ್’ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ

02/12/2025 7:05 AM

ಜಂಕ್ ಸ್ಲೀಪ್: ಎಂಟು ಗಂಟೆ ಮಲಗಿದರೂ ನಮಗೆ ಸುಸ್ತೇಕೆ ಆಗುತ್ತದೆ ?

02/12/2025 6:58 AM
State News
KARNATAKA

BIG NEWS : ಇಂದು ಡಿಸಿಎಂ ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ ಕೂಟ : ಸಿದ್ದರಾಮಯ್ಯಗೆ ಪ್ರಿಯವಾದ ನಾಟಿ ಕೋಳಿ ಸಾರು ರೆಡಿ!

By kannadanewsnow0502/12/2025 7:05 AM KARNATAKA 1 Min Read

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಬೆಳವಣಿಗೆ ನಡೆದಿದ್ದು, ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಹೈಕಮಾಂಡ್ ಸೂಚನೆ…

‘ಹೃದಯಾಘಾತದಿಂದ’ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ : ನಾಳೆ ಹುಟ್ಟುಹಬ್ಬದ ದಿನವೆ ಹುಟ್ಟುರಲ್ಲಿ ಅಂತ್ಯಕ್ರಿಯೆ

02/12/2025 6:56 AM

SHOCKING : ರಾಜ್ಯದಲ್ಲಿ ಮತ್ತೊಂದು ಘೋರ ಕೃತ್ಯ : ಗದಗದಲ್ಲಿ ಶಿರಚ್ಚೇದನ ಮಾಡಿದ ಕರುವಿನ ಮೃತದೇಹ ಪತ್ತೆ!

02/12/2025 6:36 AM

BREAKING : ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ : ‘ಹೆಸ್ಕಾಂ’ ನಲ್ಲಿ 90 ಕೋಟಿ ಅಕ್ರಮ ಬಯಲಿಗೆಳೆದ ‘CID’

02/12/2025 6:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.